ETV Bharat / state

ಜನತಾ ದರ್ಶನವನ್ನು ತಾಲೂಕು ಮಟ್ಟಕ್ಕೂ ವಿಸ್ತರಿಸುವ ಉದ್ದೇಶವಿದೆ: ಸಚಿವ ಮಧು ಬಂಗಾರಪ್ಪ

ಜನತಾ ದರ್ಶನವನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ನಡೆಸಬೇಕು ಎಂದಿದೆ. ಇದನ್ನು ಅಧಿಕಾರಿಗಳು ಹಾಗೂ ಶಾಸಕರುಗಳು ನಡೆಸಿದರೆ ಇದು ಇನ್ನಷ್ಟು ಫಲಪ್ರದವಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

minister-madhu-bangarappa-reaction-on-janata-darshana
ಜನತಾ ದರ್ಶನವನ್ನು ತಾಲೂಕು ಮಟ್ಟಕ್ಕೂ ವಿಸ್ತರಿಸುವ ಉದ್ದೇಶವಿದೆ: ಸಚಿವ ಮಧು ಬಂಗಾರಪ್ಪ
author img

By ETV Bharat Karnataka Team

Published : Sep 25, 2023, 9:25 PM IST

Updated : Sep 25, 2023, 10:41 PM IST

ಶಿವಮೊಗ್ಗದಲ್ಲಿ ನಡೆದ ಜನತಾ ದರ್ಶನ

ಶಿವಮೊಗ್ಗ: ಜನತಾ ದರ್ಶನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಿದಂತೆ, ತಾಲೂಕು ಮಟ್ಟದಲ್ಲೂ ನಡೆಸುವ ಉದ್ದೇಶವಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರಥಮ ಜನತಾ ದರ್ಶನದಲ್ಲಿ ಭಾಗಿಯಾಗಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಅರ್ಜಿ ಪಡೆಯುವುದಲ್ಲ. ಅರ್ಜಿ ಪಡೆದ ಮೇಲೆ ಅದನ್ನು ವಿಲೇವಾರಿ ಮಾಡಿ ಕೆಲಸ ಆಗಬೇಕು. ಸಾಮಾನ್ಯ ಜನರು ಸಹ ಟೋಕನ್ ಪಡೆದು ಆಯಾ ಇಲಾಖೆಗೆ ಹೋಗಿ ಫಾಲೋಅಪ್ ಮಾಡಬೇಕು. ಅವರಿಗೆ ಗೂತ್ತಾಗದೆ ಹೋದರೆ, ನಮ್ಮ ಕಚೇರಿಗೆ ಹೋಗಲಿ, ಆಗ ನಮ್ಮ ಕಚೇರಿಯವರು ಅರ್ಜಿ ಕೊಟ್ಟವರು ಯಾವ ಕಚೇರಿಗೆ ಹೋಗಬೇಕೆಂದು ಹೇಳುತ್ತಾರೆ ಎಂದರು.

ಬಹಳ ಜನಕ್ಕೆ ಎಲ್ಲಿ ಹೋಗಿ ಸಹಾಯ ಕೇಳಬೇಕು ಅಂತಾನೇ ಗೂತ್ತಿಲ್ಲ. ನಮ್ಮ ಮುಖಂಡರ ಬಳಿ ಹೋದರೆ, ಅವರು ಕರೆದುಕೊಂಡು ಹೋಗಿ ಕೆಲಸ ಮಾಡಿಸುತ್ತಾರೆ. ಸಾಮಾನ್ಯ ಜನರು ಸೌಲಭ್ಯ ಪಡೆಯಲು ಹೋದಾಗ ಸಿಕ್ಕಿಹಾಕಿಕೊಳ್ಳುತ್ತಾರೆ. ಆಡಳಿತಾತ್ಮಕವಾಗಿ ಸರಿ ಇದ್ದರೆ ಎಲ್ಲಾವೂ ಸರಿ ಆಗುತ್ತದೆ. ಜನತಾ ದರ್ಶನ ತೃಪ್ತಿ ತಂದಿದೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ಒಳ್ಳೆಯದು ಎಂದು ಹೇಳಿದರು.

ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳು ಇಲ್ಲಿಯೇ ಇತ್ಯಾರ್ಥವಾಗುತ್ತದೆ. ಆದರೆ ರಾಜ್ಯ ಮಟ್ಟದ ಭೂಮಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಆಗುವುದು ಮುಖ್ಯವಾಗುತ್ತದೆ. ಜನ ವಿಶ್ವಾಸದಿಂದ ಇರಲಿ, ನಮ್ಮ ಸರ್ಕಾರ ಭೂಮಿ ಹಕ್ಕನ್ನು ಕಾನೂನಾತ್ಮಕಗೊಳಿಸಲು ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆ. ಆದರೆ ಕೆಲವು ಕೇಂದ್ರ ಸರ್ಕಾರ ಹಾಗೂ ಕೋರ್ಟ್ ಮಟ್ಟದಲ್ಲಿ ಇರುತ್ತದೆ. ಈ ಸಂಬಂಧ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.

ಜನರು ನಮ್ಮ ಬಳಿ ಸಮಸ್ಯೆ ಅಂತ ಬಂದಾಗ, ಕಾನೂನು ಇಲ್ಲ ಅಂತ ಹೇಳುವುದಲ್ಲ, ಬದಲಿಗೆ ಕ್ಯಾಬಿನೆಟ್ ನಲ್ಲಿ ಕಾನೂನು ಮಾಡಿ ಆ ಸಮಸ್ಯೆಗೆ ಪರಿಹಾರ ನೀಡಬೇಕು. ಇದಕ್ಕಾಗಿ ಸಿಎಂ ಅವರು ನಮಗೆ ಇಲ್ಲಿ ಏನ್ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಲು ಜನತಾ ದರ್ಶನ ಮಾಡಲು ಕಳುಹಿಸಿರಬೇಕು. ಇದು ಕ್ಯಾಬಿನೆಟ್ ನಲ್ಲಿ ಕುಳಿತುಕೊಂಡು ಮಾತನಾಡಲು ಸಹಾಯಕವಾಗುತ್ತದೆ. ಇಂದಿನ ಜನತಾ ದರ್ಶನ ನನಗೆ ತುಂಬು ಖುಷಿ ತಂದಿದೆ ಎಂದು ತಿಳಿಸಿದರು.

ಇಲ್ಲಿ ಎರಡು ಅಂಶಗಳನ್ನು ನಾವು ಗಮನಿಸಬೇಕು ಒಂದು ಸಮಸ್ಯೆಯನ್ನು ಅರಿಯಲು ಸಹಾಯಕವಾಗುತ್ತದೆ. ಇನ್ನೂಂದು ಭವಿಷ್ಯದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಯಲು ಸಹಾಯಕವಾಗುತ್ತದೆ. ಇದನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ನಡೆಸಬೇಕು ಎಂದಿದೆ. ಇದನ್ನು ಅಧಿಕಾರಿಗಳು ಹಾಗೂ ಶಾಸಕರುಗಳು ನಡೆಸಿದರೆ ಇದು ಇನ್ನಷ್ಟು ಫಲಪ್ರದವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಜನತಾ ದರ್ಶನದಲ್ಲಿ ಬೀದಿ ಬದಿ ವ್ಯಾಪಾರಿಯಾದ ಇಂದ್ರಮ್ಮ ಎಂಬುವರು ತಮಗೆ ಬೀದಿ ಬದಿ ವ್ಯಾಪಾರಕ್ಕಾಗಿ ಸಿಗುವ ಸಾಲವನ್ನು ನೀಡುತ್ತಿಲ್ಲ ಎಂದಾಗ, ಸಚಿವರು ಸಂಬಂಧಪಟ್ಟ ಬ್ಯಾಂಕ್ ನವರಿಗೆ ಸಾಲ ನೀಡಲು ಸ್ಥಳದಲ್ಲಿಯೇ ಸೂಚಿಸಿದರು. ಇದಕ್ಕೆ ಇಂದ್ರಮ್ಮ ಅವರು ತುಂಬ ಖುಷಿಯಾಗಿ ಆನಂದಭಾಷ್ಪ ಸುರಿಸಿದರು. ಇನ್ನು ಕೋಟೆಗಂಗೂರಿನ ವಿದ್ಯಾರ್ಥಿನಿಯರು ಬಂದು ನಮ್ಮೂರಿನಿಂದ ಶಿವಮೊಗ್ಗ ನಗರಕ್ಕೆ ಸರ್ಕಾರಿ ಬಸ್ ಓಡಿಸಿ, ನಮಗೆ ಕಾಲೇಜಿಗೆ ಬರಲು ಇದು ಸಹಾಯಕವಾಗುತ್ತದೆ ಎಂದು ಮನವಿ ಮಾಡಿಕೊಂಡರು.

ಸಚಿವರು ಸುಮಾರು ಮೂರು ಗಂಟೆಗೂ ಹೆಚ್ಚು ನೂರಾರು ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹರಿಸುವಂತೆ ಸೂಚಿಸಿದರು. ಸ್ಥಳದಲ್ಲಿಯೇ ಕೆಲ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದರು. ಈ ವೇಳೆ ಡಿಸಿ, ಎಸ್​ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಜನರಿಗೆ ಸ್ಪಂದಿಸಬೇಕೆಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ: ಸಚಿವ ಪರಮೇಶ್ವರ್​

ಶಿವಮೊಗ್ಗದಲ್ಲಿ ನಡೆದ ಜನತಾ ದರ್ಶನ

ಶಿವಮೊಗ್ಗ: ಜನತಾ ದರ್ಶನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಿದಂತೆ, ತಾಲೂಕು ಮಟ್ಟದಲ್ಲೂ ನಡೆಸುವ ಉದ್ದೇಶವಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರಥಮ ಜನತಾ ದರ್ಶನದಲ್ಲಿ ಭಾಗಿಯಾಗಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಅರ್ಜಿ ಪಡೆಯುವುದಲ್ಲ. ಅರ್ಜಿ ಪಡೆದ ಮೇಲೆ ಅದನ್ನು ವಿಲೇವಾರಿ ಮಾಡಿ ಕೆಲಸ ಆಗಬೇಕು. ಸಾಮಾನ್ಯ ಜನರು ಸಹ ಟೋಕನ್ ಪಡೆದು ಆಯಾ ಇಲಾಖೆಗೆ ಹೋಗಿ ಫಾಲೋಅಪ್ ಮಾಡಬೇಕು. ಅವರಿಗೆ ಗೂತ್ತಾಗದೆ ಹೋದರೆ, ನಮ್ಮ ಕಚೇರಿಗೆ ಹೋಗಲಿ, ಆಗ ನಮ್ಮ ಕಚೇರಿಯವರು ಅರ್ಜಿ ಕೊಟ್ಟವರು ಯಾವ ಕಚೇರಿಗೆ ಹೋಗಬೇಕೆಂದು ಹೇಳುತ್ತಾರೆ ಎಂದರು.

ಬಹಳ ಜನಕ್ಕೆ ಎಲ್ಲಿ ಹೋಗಿ ಸಹಾಯ ಕೇಳಬೇಕು ಅಂತಾನೇ ಗೂತ್ತಿಲ್ಲ. ನಮ್ಮ ಮುಖಂಡರ ಬಳಿ ಹೋದರೆ, ಅವರು ಕರೆದುಕೊಂಡು ಹೋಗಿ ಕೆಲಸ ಮಾಡಿಸುತ್ತಾರೆ. ಸಾಮಾನ್ಯ ಜನರು ಸೌಲಭ್ಯ ಪಡೆಯಲು ಹೋದಾಗ ಸಿಕ್ಕಿಹಾಕಿಕೊಳ್ಳುತ್ತಾರೆ. ಆಡಳಿತಾತ್ಮಕವಾಗಿ ಸರಿ ಇದ್ದರೆ ಎಲ್ಲಾವೂ ಸರಿ ಆಗುತ್ತದೆ. ಜನತಾ ದರ್ಶನ ತೃಪ್ತಿ ತಂದಿದೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ಒಳ್ಳೆಯದು ಎಂದು ಹೇಳಿದರು.

ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳು ಇಲ್ಲಿಯೇ ಇತ್ಯಾರ್ಥವಾಗುತ್ತದೆ. ಆದರೆ ರಾಜ್ಯ ಮಟ್ಟದ ಭೂಮಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಆಗುವುದು ಮುಖ್ಯವಾಗುತ್ತದೆ. ಜನ ವಿಶ್ವಾಸದಿಂದ ಇರಲಿ, ನಮ್ಮ ಸರ್ಕಾರ ಭೂಮಿ ಹಕ್ಕನ್ನು ಕಾನೂನಾತ್ಮಕಗೊಳಿಸಲು ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆ. ಆದರೆ ಕೆಲವು ಕೇಂದ್ರ ಸರ್ಕಾರ ಹಾಗೂ ಕೋರ್ಟ್ ಮಟ್ಟದಲ್ಲಿ ಇರುತ್ತದೆ. ಈ ಸಂಬಂಧ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.

ಜನರು ನಮ್ಮ ಬಳಿ ಸಮಸ್ಯೆ ಅಂತ ಬಂದಾಗ, ಕಾನೂನು ಇಲ್ಲ ಅಂತ ಹೇಳುವುದಲ್ಲ, ಬದಲಿಗೆ ಕ್ಯಾಬಿನೆಟ್ ನಲ್ಲಿ ಕಾನೂನು ಮಾಡಿ ಆ ಸಮಸ್ಯೆಗೆ ಪರಿಹಾರ ನೀಡಬೇಕು. ಇದಕ್ಕಾಗಿ ಸಿಎಂ ಅವರು ನಮಗೆ ಇಲ್ಲಿ ಏನ್ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಲು ಜನತಾ ದರ್ಶನ ಮಾಡಲು ಕಳುಹಿಸಿರಬೇಕು. ಇದು ಕ್ಯಾಬಿನೆಟ್ ನಲ್ಲಿ ಕುಳಿತುಕೊಂಡು ಮಾತನಾಡಲು ಸಹಾಯಕವಾಗುತ್ತದೆ. ಇಂದಿನ ಜನತಾ ದರ್ಶನ ನನಗೆ ತುಂಬು ಖುಷಿ ತಂದಿದೆ ಎಂದು ತಿಳಿಸಿದರು.

ಇಲ್ಲಿ ಎರಡು ಅಂಶಗಳನ್ನು ನಾವು ಗಮನಿಸಬೇಕು ಒಂದು ಸಮಸ್ಯೆಯನ್ನು ಅರಿಯಲು ಸಹಾಯಕವಾಗುತ್ತದೆ. ಇನ್ನೂಂದು ಭವಿಷ್ಯದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಯಲು ಸಹಾಯಕವಾಗುತ್ತದೆ. ಇದನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ನಡೆಸಬೇಕು ಎಂದಿದೆ. ಇದನ್ನು ಅಧಿಕಾರಿಗಳು ಹಾಗೂ ಶಾಸಕರುಗಳು ನಡೆಸಿದರೆ ಇದು ಇನ್ನಷ್ಟು ಫಲಪ್ರದವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಜನತಾ ದರ್ಶನದಲ್ಲಿ ಬೀದಿ ಬದಿ ವ್ಯಾಪಾರಿಯಾದ ಇಂದ್ರಮ್ಮ ಎಂಬುವರು ತಮಗೆ ಬೀದಿ ಬದಿ ವ್ಯಾಪಾರಕ್ಕಾಗಿ ಸಿಗುವ ಸಾಲವನ್ನು ನೀಡುತ್ತಿಲ್ಲ ಎಂದಾಗ, ಸಚಿವರು ಸಂಬಂಧಪಟ್ಟ ಬ್ಯಾಂಕ್ ನವರಿಗೆ ಸಾಲ ನೀಡಲು ಸ್ಥಳದಲ್ಲಿಯೇ ಸೂಚಿಸಿದರು. ಇದಕ್ಕೆ ಇಂದ್ರಮ್ಮ ಅವರು ತುಂಬ ಖುಷಿಯಾಗಿ ಆನಂದಭಾಷ್ಪ ಸುರಿಸಿದರು. ಇನ್ನು ಕೋಟೆಗಂಗೂರಿನ ವಿದ್ಯಾರ್ಥಿನಿಯರು ಬಂದು ನಮ್ಮೂರಿನಿಂದ ಶಿವಮೊಗ್ಗ ನಗರಕ್ಕೆ ಸರ್ಕಾರಿ ಬಸ್ ಓಡಿಸಿ, ನಮಗೆ ಕಾಲೇಜಿಗೆ ಬರಲು ಇದು ಸಹಾಯಕವಾಗುತ್ತದೆ ಎಂದು ಮನವಿ ಮಾಡಿಕೊಂಡರು.

ಸಚಿವರು ಸುಮಾರು ಮೂರು ಗಂಟೆಗೂ ಹೆಚ್ಚು ನೂರಾರು ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹರಿಸುವಂತೆ ಸೂಚಿಸಿದರು. ಸ್ಥಳದಲ್ಲಿಯೇ ಕೆಲ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದರು. ಈ ವೇಳೆ ಡಿಸಿ, ಎಸ್​ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಜನರಿಗೆ ಸ್ಪಂದಿಸಬೇಕೆಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ: ಸಚಿವ ಪರಮೇಶ್ವರ್​

Last Updated : Sep 25, 2023, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.