ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿದೆ ತಾಜ್​​​ಮಹಲ್​​​ಗೂ ಮುನ್ನ ಕಟ್ಟಿಸಲಾದ ಪ್ರೇಮದ ಕಾಣಿಕೆ

author img

By

Published : Sep 30, 2020, 1:45 PM IST

ಕರ್ನಾಟಕದ ಶಿವಮೊಗ್ಗದಲ್ಲಿ ತಾಜ್​​ಮಹಲ್​​ ಕಟ್ಟುವ 50 ವರ್ಷಗಳ ಮುನ್ನ ಕಟ್ಟಿಸಲಾದ ಪ್ರೇಮದ ಕಾಣಿಕೆ ಇದೆ ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರದ ಆನಂದಪುರ ಗ್ರಾಮದಲ್ಲಿ ಕೆಳದಿ ಅರಸ, ಆತ್ಮಹತ್ಯೆ ಮಾಡಿಕೊಂಡ ತನ್ನ ರಾಣಿಯ ನೆನಪಿನಲ್ಲಿ ಈ ಸರೋವರ ಕಟ್ಟಿಸಿದ್ದನು ಎನ್ನಲಾಗಿದೆ.

Champaka sarasu lake
ಚಂಪಕ ಸರಸು ಸರೋವರ

ಶಿವಮೊಗ್ಗ: ಷಹಜಹಾನ್ ಎಂದರೆ ನಮಗೆ ನೆನಪಾಗುವುದು ತಾಜ್​ ಮಹಲ್. ತನ್ನ ಪ್ರೀತಿಯ ಪತ್ನಿಗಾಗಿ ಕಟ್ಟಿಸಿದ ಈ ಸುಂದರ ಸೌಧ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ತಾಜ್​​​ಮಹಲ್​​​ಗೂ ಮುನ್ನವೇ ಕಟ್ಟಲಾಗಿರುವ ಪ್ರೇಮದ ಕಾಣಿಕೆಯೊಂದು ನಮ್ಮ ಕರ್ನಾಟಕದಲ್ಲಿ ಇದೆ ಎನ್ನಲಾಗಿದೆ.

  • " class="align-text-top noRightClick twitterSection" data="">

ಪತ್ರಕರ್ತ ಎಸ್​​. ಶ್ಯಾಮ್​​​ಪ್ರಸಾದ್ ಈ ವಿಚಾರನ್ನು ಸಾಕ್ಷ್ಯಾಧಾರದ ಮೂಲಕ ವಿಡಿಯೋ ರೂಪದಲ್ಲಿ ಹೊರ ತಂದಿದ್ದಾರೆ. ಅಷ್ಟೇ ಅಲ್ಲ ತಮ್ಮ 'ಎನಿಗ್ಮಾಸ್ ಆಫ್ ಕರ್ನಾಟಕ' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಬರುವ ಹಲವಾರು ವಿಶೇಷ ಮಾಹಿತಿಗಳಲ್ಲಿ ಪ್ರಮುಖವಾಗಿ ರಹಸ್ಯ ಕಥೆಗಳ ಅನಾವರಣ ಈಗ ಯೂಟ್ಯೂಬ್​​​​​​ನಲ್ಲಿ ದೊರೆಯಲಿದೆ ಎಂದು ಶ್ಯಾಮ್ ಪ್ರಸಾದ್ ಹೇಳುತ್ತಾರೆ. ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರಿಗೆ ಇದು ಹೇಳಿ ಮಾಡಿಸಿದ ವಿಚಾರ ಎನ್ನಬಹುದು.

Champaka sarasu lake
ಶಿವಮೊಗ್ಗದ ಆನಂದ ಪುರದ ಚಂಪಕ ಸರಸು ಸರೋವರ

ಶಿವಮೊಗ್ಗ ಜಿಲ್ಲೆ ಸಾಗರದ ಆನಂದಪುರ ಗ್ರಾಮದಲ್ಲಿ ತಾಜ್​​ಮಹಲ್​​ಗೂ ಮುನ್ನ 50 ವರ್ಷಗಳ ಹಿಂದೆ ಕಟ್ಟಿಸಲಾದ ಪ್ರೀತಿಯ ಸಂಕೇತ ಇದೆ. ಕೆಳದಿ ಅರಸ ಹಿರಿಯ ವೆಂಕಟಪ್ಪನಾಯಕ ಆತ್ಮಹತ್ಯೆ ಮಾಡಿಕೊಂಡ ತನ್ನ ರಾಣಿ ಚಂಪಕ ಸರಸಿ ಹೆಸರಿನಲ್ಲಿ ಸರೋವರವೊಂದನ್ನು ಕಟ್ಟಿಸಿದ್ದನು ಎನ್ನಲಾಗಿದೆ. ಸಂಪಿಗೆ ಮರಗಳು ಹೆಚ್ಚಾಗಿ ಇರುವ ಈ ಸ್ಥಳದಲ್ಲಿ ಸರೋವರವನ್ನು ಕಟ್ಟಿಸಿದ್ದರಿಂದ ಇದಕ್ಕೆ ಸಂಪಕ ಸರಸು ಎಂದು ಕೂಡಾ ಕರೆಯಲಾಗುತ್ತದೆ. 1592 ರ ಶಾಸನದಲ್ಲಿ ಚಂಪಕ ಸರಸಿ ಎಂಬ ಹೆಸರು ಉಲ್ಲೇಖವಾಗಿದೆ. ಸರಸು ಎಂದರೆ ಕೊಳ ಎಂಬ ಅರ್ಥ ಕೂಡಾ ಇದೆ.

Champaka sarasu lake
ಪತ್ರಕರ್ತ ಎಸ್​​. ಶ್ಯಾಮ್​​​ಪ್ರಸಾದ್

ಹಿರಿಯ ವೆಂಕಟಪ್ಪ ನಾಯಕನ ಬಗ್ಗೆ ಇಟಲಿಯ ಯಾತ್ರಿಕನೊಬ್ಬ ಉಲ್ಲೇಖ ಮಾಡಿರುವ ವಿಚಾರಗಳನ್ನು ಕೂಡಾ ಶ್ಯಾಮ್ ಪ್ರಸಾದ್ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ: ಷಹಜಹಾನ್ ಎಂದರೆ ನಮಗೆ ನೆನಪಾಗುವುದು ತಾಜ್​ ಮಹಲ್. ತನ್ನ ಪ್ರೀತಿಯ ಪತ್ನಿಗಾಗಿ ಕಟ್ಟಿಸಿದ ಈ ಸುಂದರ ಸೌಧ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ ತಾಜ್​​​ಮಹಲ್​​​ಗೂ ಮುನ್ನವೇ ಕಟ್ಟಲಾಗಿರುವ ಪ್ರೇಮದ ಕಾಣಿಕೆಯೊಂದು ನಮ್ಮ ಕರ್ನಾಟಕದಲ್ಲಿ ಇದೆ ಎನ್ನಲಾಗಿದೆ.

  • " class="align-text-top noRightClick twitterSection" data="">

ಪತ್ರಕರ್ತ ಎಸ್​​. ಶ್ಯಾಮ್​​​ಪ್ರಸಾದ್ ಈ ವಿಚಾರನ್ನು ಸಾಕ್ಷ್ಯಾಧಾರದ ಮೂಲಕ ವಿಡಿಯೋ ರೂಪದಲ್ಲಿ ಹೊರ ತಂದಿದ್ದಾರೆ. ಅಷ್ಟೇ ಅಲ್ಲ ತಮ್ಮ 'ಎನಿಗ್ಮಾಸ್ ಆಫ್ ಕರ್ನಾಟಕ' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಬರುವ ಹಲವಾರು ವಿಶೇಷ ಮಾಹಿತಿಗಳಲ್ಲಿ ಪ್ರಮುಖವಾಗಿ ರಹಸ್ಯ ಕಥೆಗಳ ಅನಾವರಣ ಈಗ ಯೂಟ್ಯೂಬ್​​​​​​ನಲ್ಲಿ ದೊರೆಯಲಿದೆ ಎಂದು ಶ್ಯಾಮ್ ಪ್ರಸಾದ್ ಹೇಳುತ್ತಾರೆ. ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರಿಗೆ ಇದು ಹೇಳಿ ಮಾಡಿಸಿದ ವಿಚಾರ ಎನ್ನಬಹುದು.

Champaka sarasu lake
ಶಿವಮೊಗ್ಗದ ಆನಂದ ಪುರದ ಚಂಪಕ ಸರಸು ಸರೋವರ

ಶಿವಮೊಗ್ಗ ಜಿಲ್ಲೆ ಸಾಗರದ ಆನಂದಪುರ ಗ್ರಾಮದಲ್ಲಿ ತಾಜ್​​ಮಹಲ್​​ಗೂ ಮುನ್ನ 50 ವರ್ಷಗಳ ಹಿಂದೆ ಕಟ್ಟಿಸಲಾದ ಪ್ರೀತಿಯ ಸಂಕೇತ ಇದೆ. ಕೆಳದಿ ಅರಸ ಹಿರಿಯ ವೆಂಕಟಪ್ಪನಾಯಕ ಆತ್ಮಹತ್ಯೆ ಮಾಡಿಕೊಂಡ ತನ್ನ ರಾಣಿ ಚಂಪಕ ಸರಸಿ ಹೆಸರಿನಲ್ಲಿ ಸರೋವರವೊಂದನ್ನು ಕಟ್ಟಿಸಿದ್ದನು ಎನ್ನಲಾಗಿದೆ. ಸಂಪಿಗೆ ಮರಗಳು ಹೆಚ್ಚಾಗಿ ಇರುವ ಈ ಸ್ಥಳದಲ್ಲಿ ಸರೋವರವನ್ನು ಕಟ್ಟಿಸಿದ್ದರಿಂದ ಇದಕ್ಕೆ ಸಂಪಕ ಸರಸು ಎಂದು ಕೂಡಾ ಕರೆಯಲಾಗುತ್ತದೆ. 1592 ರ ಶಾಸನದಲ್ಲಿ ಚಂಪಕ ಸರಸಿ ಎಂಬ ಹೆಸರು ಉಲ್ಲೇಖವಾಗಿದೆ. ಸರಸು ಎಂದರೆ ಕೊಳ ಎಂಬ ಅರ್ಥ ಕೂಡಾ ಇದೆ.

Champaka sarasu lake
ಪತ್ರಕರ್ತ ಎಸ್​​. ಶ್ಯಾಮ್​​​ಪ್ರಸಾದ್

ಹಿರಿಯ ವೆಂಕಟಪ್ಪ ನಾಯಕನ ಬಗ್ಗೆ ಇಟಲಿಯ ಯಾತ್ರಿಕನೊಬ್ಬ ಉಲ್ಲೇಖ ಮಾಡಿರುವ ವಿಚಾರಗಳನ್ನು ಕೂಡಾ ಶ್ಯಾಮ್ ಪ್ರಸಾದ್ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.