ETV Bharat / state

ಜಮೀರ್ ಅಹ್ಮದ್​ಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿ: ಸಾಗರದಲ್ಲಿ ಜಮೀರ್​ ಅಭಿಮಾನಿಗಳಿಂದ ಪ್ರತಿಭಟನೆ

author img

By

Published : May 14, 2023, 7:07 PM IST

ಜಮೀರ್ ಅಹ್ಮದ್​ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

jamir-ahmed-fans-protest-in-shivamogga
ಜಮೀರ್ ಅಹ್ಮದ್​ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಸಾಗರದಲ್ಲಿ ಜಮೀರ್​ ಅಭಿಮಾನಿಗಳಿಂದ ಪ್ರತಿಭಟನೆ

ಜಮೀರ್ ಅಹ್ಮದ್​ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಸಾಗರದಲ್ಲಿ ಜಮೀರ್​ ಅಭಿಮಾನಿಗಳಿಂದ ಪ್ರತಿಭಟನೆ

ಶಿವಮೊಗ್ಗ: ರಾಜ್ಯದ ಅಲ್ಪಸಂಖ್ಯಾತರ ನಾಯಕ ಶಾಸಕ ಜಮೀರ್ ಅಹ್ಮದ್​ ಖಾನ್​ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಗರದ ಜಮೀರ್ ಅಹ್ಮದ್​ ಖಾನ್​ ಅವರ ಅಭಿಮಾನಿಗಳ ಸಂಘದ ವತಿಯಿಂದ ಸಾಗರದ ಶಿವಪ್ಪ‌ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಜಮೀರ್ ಅಹ್ಮದ್​ ಖಾನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸೈಯದ್ ಜಮೀಲ್ ಮಾತನಾಡಿ, ಕೋಮುವಾದವನ್ನು ಸೃಷ್ಟಿಸಿದ್ದ, ಹಿಂದೂ ಮತ್ತು ಮುಸ್ಲಿಮರಲ್ಲಿ ವಿಷ ಬೀಜ ಬಿತ್ತಿ ದುರಾಡಳಿತ ನಡೆಸಿದ್ದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಮಹಾಜನತೆ ಕಿತ್ತೊಗೆದಿದ್ದಾರೆ. ಅವರಿಗೆ ಧನ್ಯವಾದಗಳು. ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಕೊಟ್ಟಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತರ ಶೇ 85 ರಷ್ಟು ಮತದಾರರು ಕಾಂಗ್ರೆಸ್​​ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.

ಅಲ್ಪಸಂಖ್ಯಾತರ ಜನಪ್ರಿಯ ನಾಯಕರಾದ ಜಮೀರ್ ಅಹ್ಮದ್​ ಖಾನ್ ಕೇವಲ ಮುಸ್ಲಿಮರಿಗಷ್ಟೇ ಅಲ್ಲದೇ ಸರ್ವಜನಾಂಗದ ನಾಯಕರು, ಇಡೀ ರಾಜ್ಯದ ಎಲ್ಲಾ ಜಾತಿ ಧರ್ಮದವರನ್ನು ಜಮೀರ್ ಅಹ್ಮದ್​ ಖಾನ್ ತಲುಪಿದ್ದಾರೆ. ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್​ ಪಕ್ಷ ಇದುವರೆಗೂ ಮಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾಡಿಲ್ಲ. ಆದರಿಂದ ಜಮೀರ್ ಅಹ್ಮದ್​ ಖಾನ್​ರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಮತ್ತು ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್​ ನಾಯಕರಿಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಗರದ ಜಮೀರ್ ಅಹ್ಮದ್​ ಖಾನ್ ಸಂಘದ ಮುಖಂಡರಾದ ಗಾಂಧಿ ನಗರದ ಮನ್ಸೂರ್, ರಶೀದ್ , ಮೊಹಮ್ಮದ್ ಆರೀಫ್ ಭಾಗವಹಿಸಿದ್ದರು.

ಇದನ್ನೂ ಓದಿ:ಡಿಕೆಶಿಯೇ ಸಿಎಂ ಆಗಬೇಕೆಂಬ ಒತ್ತಾಯ .. ಸಭೆ ಕರೆದ ಒಕ್ಕಲಿಗ ಮಠಾಧೀಶರು

ಜಮೀರ್ ಅಹ್ಮದ್​ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಸಾಗರದಲ್ಲಿ ಜಮೀರ್​ ಅಭಿಮಾನಿಗಳಿಂದ ಪ್ರತಿಭಟನೆ

ಶಿವಮೊಗ್ಗ: ರಾಜ್ಯದ ಅಲ್ಪಸಂಖ್ಯಾತರ ನಾಯಕ ಶಾಸಕ ಜಮೀರ್ ಅಹ್ಮದ್​ ಖಾನ್​ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಗರದ ಜಮೀರ್ ಅಹ್ಮದ್​ ಖಾನ್​ ಅವರ ಅಭಿಮಾನಿಗಳ ಸಂಘದ ವತಿಯಿಂದ ಸಾಗರದ ಶಿವಪ್ಪ‌ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಜಮೀರ್ ಅಹ್ಮದ್​ ಖಾನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸೈಯದ್ ಜಮೀಲ್ ಮಾತನಾಡಿ, ಕೋಮುವಾದವನ್ನು ಸೃಷ್ಟಿಸಿದ್ದ, ಹಿಂದೂ ಮತ್ತು ಮುಸ್ಲಿಮರಲ್ಲಿ ವಿಷ ಬೀಜ ಬಿತ್ತಿ ದುರಾಡಳಿತ ನಡೆಸಿದ್ದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಮಹಾಜನತೆ ಕಿತ್ತೊಗೆದಿದ್ದಾರೆ. ಅವರಿಗೆ ಧನ್ಯವಾದಗಳು. ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಕೊಟ್ಟಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತರ ಶೇ 85 ರಷ್ಟು ಮತದಾರರು ಕಾಂಗ್ರೆಸ್​​ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.

ಅಲ್ಪಸಂಖ್ಯಾತರ ಜನಪ್ರಿಯ ನಾಯಕರಾದ ಜಮೀರ್ ಅಹ್ಮದ್​ ಖಾನ್ ಕೇವಲ ಮುಸ್ಲಿಮರಿಗಷ್ಟೇ ಅಲ್ಲದೇ ಸರ್ವಜನಾಂಗದ ನಾಯಕರು, ಇಡೀ ರಾಜ್ಯದ ಎಲ್ಲಾ ಜಾತಿ ಧರ್ಮದವರನ್ನು ಜಮೀರ್ ಅಹ್ಮದ್​ ಖಾನ್ ತಲುಪಿದ್ದಾರೆ. ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್​ ಪಕ್ಷ ಇದುವರೆಗೂ ಮಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾಡಿಲ್ಲ. ಆದರಿಂದ ಜಮೀರ್ ಅಹ್ಮದ್​ ಖಾನ್​ರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಮತ್ತು ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್​ ನಾಯಕರಿಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಗರದ ಜಮೀರ್ ಅಹ್ಮದ್​ ಖಾನ್ ಸಂಘದ ಮುಖಂಡರಾದ ಗಾಂಧಿ ನಗರದ ಮನ್ಸೂರ್, ರಶೀದ್ , ಮೊಹಮ್ಮದ್ ಆರೀಫ್ ಭಾಗವಹಿಸಿದ್ದರು.

ಇದನ್ನೂ ಓದಿ:ಡಿಕೆಶಿಯೇ ಸಿಎಂ ಆಗಬೇಕೆಂಬ ಒತ್ತಾಯ .. ಸಭೆ ಕರೆದ ಒಕ್ಕಲಿಗ ಮಠಾಧೀಶರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.