ETV Bharat / state

ಶಿವಮೊಗ್ಗದ ವಾಹನ ಸವಾರರೇ ಎಚ್ಚರ: ನಿಮ್ಮ ಮೇಲಿದೆ ಆಧುನಿಕ ತಂತ್ರಜ್ಞಾನದ ಕ್ಯಾಮರಾಗಳ ಕಣ್ಣು!

author img

By ETV Bharat Karnataka Team

Published : Aug 22, 2023, 9:27 PM IST

Updated : Aug 22, 2023, 10:00 PM IST

ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಸುಮಾರು 100ಕ್ಕೂ ಅಧಿಕ ಕ್ಯಾಮರಾಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿದೆ.

installation-of-cameras-to-detect-traffic-violations-in-shivamogga
ಶಿವಮೊಗ್ಗದ ವಾಹನ ಸವಾರರೆ ಎಚ್ಚರ: ಸಂಚಾರ ಉಲ್ಲಂಘನೆ ಪತ್ತೆ ಮಾಡಲಿವೆ ಆಧುನಿಕ ತಂತ್ರಜ್ಞಾನದ ಕ್ಯಾಮರಾಗಳು!
ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್

ಶಿವಮೊಗ್ಗ: ವಾಹನ ಸವಾರರು ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರುವುದು ಅಗತ್ಯ. ನಿಮ್ಮನ್ನು ಗಮನಿಸಲು ಸಿಸಿ ಕ್ಯಾಮರಾಗಳು ಕಾರ್ಯಾರಂಭ ಮಾಡಿವೆ. ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲಿ ಸುಧಾರಿತ ಕ್ಯಾಮರಾಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಕಾರ್ಯಾರಂಭಿಸಿದ್ದು, ವಾಹನ ಸವಾರರು ಸಂಚಾರಿ‌ ನಿಯಮ ಉಲ್ಲಂಘಸಿದರೆ ತಕ್ಷಣ ಗಮನಿಸಿ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ಎಸ್​ಎಂಎಸ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ.

ಈ ಬಗ್ಗೆ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, "ಶಿವಮೊಗ್ಗ ನಗರದಲ್ಲಿ ವಿವಿಧ ಶ್ರೇಣಿಯ ಕ್ಯಾಮರಾಗಳಿವೆ. ಸುಮಾರು 100ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್ ಲೈಟ್ ಜಂಪ್ ಮಾಡುವುದು, ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುವುದು, ಹೆಲ್ಮೆಟ್ ಧರಿಸದೆ ಸಂಚರಿಸುವವರನ್ನು ಅತ್ಯಾಧುನಿಕ ಕ್ಯಾಮರಾಗಳು ಸೆರೆ ಹಿಡಿಯುತ್ತವೆ. ನಗರದ 14 ವೃತ್ತದಲ್ಲಿ ಹಾಗೂ ಪ್ರಮುಖ ರಸ್ತೆಯಲ್ಲಿ ಈ ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಗಸ್ಟ್ 28 ರಿಂದ ಈ ಕ್ಯಾಮರಾಗಳಿಂದ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ" ಎಂದು ತಿಳಿಸಿದರು.

"ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನದ ನಂಬರ್ ಪ್ಲೇಟ್​ ಅನ್ನು ಕ್ಯಾಮರಾ ಗುರುತಿಸುತ್ತದೆ. ಇವು ಸ್ಮಾರ್ಟ್ ಸಿಟಿಯ ಕಮಾಂಡೆಂಟ್ ಕಂಟ್ರೋಲ್ ಸೆಂಟರ್​ಗೆ ಮಾಹಿತಿ ಒದಗಿಸುತ್ತವೆ. ಇಲ್ಲಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಅಲ್ಲಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ ನೇರವಾಗಿ ಎಸ್​ಎಂಎಸ್​ ಮೂಲಕ ಸಂಚಾರಿ‌ ನಿಯಮ ಉಲ್ಲಂಘನೆ ಮಾಡಿದ ವಿಷಯ ತಿಳಿಸಲಾಗುತ್ತದೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಎಸ್​ಎಂಎಸ್​ ಮೂಲಕ ಒಂದು ಲಿಂಕ್ ಕಳುಹಿಸಲಾಗುತ್ತದೆ, ಅದರಲ್ಲಿ ನಿಯಮ ಉಲ್ಲಂಘಿಸಿದ ಸ್ಥಳದ ಫೋಟೋಸಮೇತ ದಂಡದ ವಿವರ ಇರಲಿದೆ. ಈ‌ ದಂಡವನ್ನು ಭಾರತದ ಯಾವುದೇ ಸ್ಥಳದಿಂದ ಬೇಕಾದರೂ ಪಾವತಿಸಬಹುದು" ಎಂದು ಮಾಹಿತಿ ನೀಡಿದರು.

"ನಗರದಲ್ಲಿ ಸಂಚರಿಸುವ ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲಿಸಬೇಕಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಂಡು ವಾಹನ ಚಲಾಯಿಸಬೇಕು. ಸುಧಾರಿತ ಕ್ಯಾಮರಾಗಳು ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇರುವವರನ್ನೂ ಪತ್ತೆ ಹಚ್ಚುತ್ತದೆ. ಸಿಗ್ನಲ್​ಗಳಲ್ಲಿ ಜಿಬ್ರಾ ಕ್ರಾಸ್ ದಾಟಿ ನಿಲ್ಲುವುದು, ರೆಡ್ ಲೈಟ್ ಬೀಳುವುದಕ್ಕಿಂತ ಮೊದಲೇ ಹೋಗುವುದು. ಸಂಚಾರಿ ಪೊಲೀಸರು ಇಲ್ಲ ಅಂತ ರೆಡ್ ಲೈಟ್ ಇದ್ದರೂ ಸಹ ಸಂಚಾರ ಮಾಡುವವರು ಇನ್ನು ಮುಂದೆ ಪೊಲೀಸರಿಗಿಂತ ಕ್ಯಾಮರಾ ನೋಡಿ ಸಂಚಾರ ಮಾಡಬೇಕಿದೆ" ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬೊಂಬೆ ಮುಖವಾಡ ಧರಿಸಿ ನಗರದಲ್ಲಿ ಸಿಕ್ಕಾಪಟ್ಟೆ ಸ್ಟಂಟ್.. ಕ್ರೇಜಿ ಬೈಕ್ ರೈಡರ್​ ಪತ್ತೆ ಹಚ್ಚಿದ ಸಂಚಾರಿ ಪೊಲೀಸರು

ಹಾಫ್ ಹೆಲ್ಮೆಟ್ ವಿರುದ್ಧ ಅಭಿಯಾನ: ಕೆಲವು ದಿನಗಳ ಹಿಂದೆ ಶಿವಮೊಗ್ಗ ನಗರದ ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಹಾಫ್ ಹೆಲ್ಮೆಟ್ ವಿರುದ್ದ ಅಭಿಮಾನ ನಡೆದಿತ್ತು. ಎಸ್​ಪಿ ತಾವೇ ರಸ್ತೆಯಲ್ಲಿ ನಿಂತು ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿಕೊಂಡು ಬರುತ್ತಿದ್ದವರನ್ನು ಕರೆಯಿಸಿ ಈ ರೀತಿಯ ಅರ್ಧ ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರಿ ಮಾಡಬಾರದು. ಅಪಘಾತವಾದಾಗ ಅರ್ಧ ಹೆಲ್ಮೆಟ್ ನಿಮ್ಮ ತಲೆಯನ್ನು ರಕ್ಷಿಸುವುದಿಲ್ಲ. ಇನ್ನು ಮುಂದೆ ಅರ್ಧ ಹೆಲ್ಮೆಟ್ ಧರಿಸಬೇಡಿ ಎಂದು ತಿಳಿಹೇಳಿದ್ದರು.

ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್

ಶಿವಮೊಗ್ಗ: ವಾಹನ ಸವಾರರು ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರುವುದು ಅಗತ್ಯ. ನಿಮ್ಮನ್ನು ಗಮನಿಸಲು ಸಿಸಿ ಕ್ಯಾಮರಾಗಳು ಕಾರ್ಯಾರಂಭ ಮಾಡಿವೆ. ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲಿ ಸುಧಾರಿತ ಕ್ಯಾಮರಾಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಕಾರ್ಯಾರಂಭಿಸಿದ್ದು, ವಾಹನ ಸವಾರರು ಸಂಚಾರಿ‌ ನಿಯಮ ಉಲ್ಲಂಘಸಿದರೆ ತಕ್ಷಣ ಗಮನಿಸಿ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ಎಸ್​ಎಂಎಸ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ.

ಈ ಬಗ್ಗೆ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, "ಶಿವಮೊಗ್ಗ ನಗರದಲ್ಲಿ ವಿವಿಧ ಶ್ರೇಣಿಯ ಕ್ಯಾಮರಾಗಳಿವೆ. ಸುಮಾರು 100ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್ ಲೈಟ್ ಜಂಪ್ ಮಾಡುವುದು, ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುವುದು, ಹೆಲ್ಮೆಟ್ ಧರಿಸದೆ ಸಂಚರಿಸುವವರನ್ನು ಅತ್ಯಾಧುನಿಕ ಕ್ಯಾಮರಾಗಳು ಸೆರೆ ಹಿಡಿಯುತ್ತವೆ. ನಗರದ 14 ವೃತ್ತದಲ್ಲಿ ಹಾಗೂ ಪ್ರಮುಖ ರಸ್ತೆಯಲ್ಲಿ ಈ ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಗಸ್ಟ್ 28 ರಿಂದ ಈ ಕ್ಯಾಮರಾಗಳಿಂದ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ" ಎಂದು ತಿಳಿಸಿದರು.

"ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನದ ನಂಬರ್ ಪ್ಲೇಟ್​ ಅನ್ನು ಕ್ಯಾಮರಾ ಗುರುತಿಸುತ್ತದೆ. ಇವು ಸ್ಮಾರ್ಟ್ ಸಿಟಿಯ ಕಮಾಂಡೆಂಟ್ ಕಂಟ್ರೋಲ್ ಸೆಂಟರ್​ಗೆ ಮಾಹಿತಿ ಒದಗಿಸುತ್ತವೆ. ಇಲ್ಲಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಅಲ್ಲಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ ನೇರವಾಗಿ ಎಸ್​ಎಂಎಸ್​ ಮೂಲಕ ಸಂಚಾರಿ‌ ನಿಯಮ ಉಲ್ಲಂಘನೆ ಮಾಡಿದ ವಿಷಯ ತಿಳಿಸಲಾಗುತ್ತದೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಎಸ್​ಎಂಎಸ್​ ಮೂಲಕ ಒಂದು ಲಿಂಕ್ ಕಳುಹಿಸಲಾಗುತ್ತದೆ, ಅದರಲ್ಲಿ ನಿಯಮ ಉಲ್ಲಂಘಿಸಿದ ಸ್ಥಳದ ಫೋಟೋಸಮೇತ ದಂಡದ ವಿವರ ಇರಲಿದೆ. ಈ‌ ದಂಡವನ್ನು ಭಾರತದ ಯಾವುದೇ ಸ್ಥಳದಿಂದ ಬೇಕಾದರೂ ಪಾವತಿಸಬಹುದು" ಎಂದು ಮಾಹಿತಿ ನೀಡಿದರು.

"ನಗರದಲ್ಲಿ ಸಂಚರಿಸುವ ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲಿಸಬೇಕಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಂಡು ವಾಹನ ಚಲಾಯಿಸಬೇಕು. ಸುಧಾರಿತ ಕ್ಯಾಮರಾಗಳು ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇರುವವರನ್ನೂ ಪತ್ತೆ ಹಚ್ಚುತ್ತದೆ. ಸಿಗ್ನಲ್​ಗಳಲ್ಲಿ ಜಿಬ್ರಾ ಕ್ರಾಸ್ ದಾಟಿ ನಿಲ್ಲುವುದು, ರೆಡ್ ಲೈಟ್ ಬೀಳುವುದಕ್ಕಿಂತ ಮೊದಲೇ ಹೋಗುವುದು. ಸಂಚಾರಿ ಪೊಲೀಸರು ಇಲ್ಲ ಅಂತ ರೆಡ್ ಲೈಟ್ ಇದ್ದರೂ ಸಹ ಸಂಚಾರ ಮಾಡುವವರು ಇನ್ನು ಮುಂದೆ ಪೊಲೀಸರಿಗಿಂತ ಕ್ಯಾಮರಾ ನೋಡಿ ಸಂಚಾರ ಮಾಡಬೇಕಿದೆ" ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬೊಂಬೆ ಮುಖವಾಡ ಧರಿಸಿ ನಗರದಲ್ಲಿ ಸಿಕ್ಕಾಪಟ್ಟೆ ಸ್ಟಂಟ್.. ಕ್ರೇಜಿ ಬೈಕ್ ರೈಡರ್​ ಪತ್ತೆ ಹಚ್ಚಿದ ಸಂಚಾರಿ ಪೊಲೀಸರು

ಹಾಫ್ ಹೆಲ್ಮೆಟ್ ವಿರುದ್ಧ ಅಭಿಯಾನ: ಕೆಲವು ದಿನಗಳ ಹಿಂದೆ ಶಿವಮೊಗ್ಗ ನಗರದ ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಹಾಫ್ ಹೆಲ್ಮೆಟ್ ವಿರುದ್ದ ಅಭಿಮಾನ ನಡೆದಿತ್ತು. ಎಸ್​ಪಿ ತಾವೇ ರಸ್ತೆಯಲ್ಲಿ ನಿಂತು ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿಕೊಂಡು ಬರುತ್ತಿದ್ದವರನ್ನು ಕರೆಯಿಸಿ ಈ ರೀತಿಯ ಅರ್ಧ ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರಿ ಮಾಡಬಾರದು. ಅಪಘಾತವಾದಾಗ ಅರ್ಧ ಹೆಲ್ಮೆಟ್ ನಿಮ್ಮ ತಲೆಯನ್ನು ರಕ್ಷಿಸುವುದಿಲ್ಲ. ಇನ್ನು ಮುಂದೆ ಅರ್ಧ ಹೆಲ್ಮೆಟ್ ಧರಿಸಬೇಡಿ ಎಂದು ತಿಳಿಹೇಳಿದ್ದರು.

Last Updated : Aug 22, 2023, 10:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.