ETV Bharat / state

ಅಮಾನತು ಖಂಡಿಸಿ ಸಿಸಿಎಫ್ ಕಚೇರಿ ಮುಂದೆ ಅರಣ್ಯಾಧಿಕಾರಿ ಧರಣಿ

author img

By

Published : Apr 8, 2021, 5:00 PM IST

ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್​ರನ್ನು ನಿನ್ನೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅಮಾನತು ಮಾಡಿದ್ದಾರೆ.

Forest office protest
Forest office protest

ಶಿವಮೊಗ್ಗ: ತನ್ನಲ್ಲದ ತಪ್ಪಿಗೆ ಅಮಾನತು ಮಾಡಿದ್ದಾರೆ ಎಂದು ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಶಿವಮೊಗ್ಗ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್​ರನ್ನು ನಿನ್ನೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅಮಾನತು ಮಾಡಿದ್ದಾರೆ. ಇದನ್ನು ಖಂಡಿಸಿ ಮಂಜುನಾಥ್ ಇಂದು ಸಿಸಿಎಫ್ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.

ಅಮಾನತು, ಘಟನೆ ಹಿನ್ನೆಲೆ:

ನಿನ್ನೆ ವ್ಯಕ್ತಿಯೋರ್ವ ಮರದ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುವಾಗ ಮಂಜುನಾಥ್​ ಹಿಡಿದಿದ್ದಾರೆ. ಪೀಠೋಪಕರಣದ ಪರವಾನಗಿ ಕೇಳಿದ್ದಾರೆ. ಇದಕ್ಕೆ ಆ ವ್ಯಕ್ತಿ ತನ್ನ ಬಳಿ ಪರವಾನಗಿಯ ಜೆರಾಕ್ಸ್ ಮಾತ್ರ ಇದೆ ಎಂದು ಹೇಳಿ ತೋರಿಸಿ, ಬೆಳಗ್ಗೆ ಮೂಲ ಪ್ರತಿ ತೋರಿಸುವುದಾಗಿ ಹೇಳಿ, ನಂತರ ಸಿಸಿಎಫ್ ಬಳಿ ಬಂದು ತಮ್ಮ ವಿರುದ್ಧ ಲಂಚದ ಆರೋಪ ಮಾಡಿ ದೂರು ನೀಡಿದ್ದಾರೆ.

ಇದರಿಂದ ಸಿಸಿಎಫ್ ನನ್ನನ್ನು ವಿನಾ ಕರಣ ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದ್ದಾರೆ. ಆದರೆ ಸಿಸಿಎಫ್‌ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ: ತನ್ನಲ್ಲದ ತಪ್ಪಿಗೆ ಅಮಾನತು ಮಾಡಿದ್ದಾರೆ ಎಂದು ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಶಿವಮೊಗ್ಗ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್​ರನ್ನು ನಿನ್ನೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅಮಾನತು ಮಾಡಿದ್ದಾರೆ. ಇದನ್ನು ಖಂಡಿಸಿ ಮಂಜುನಾಥ್ ಇಂದು ಸಿಸಿಎಫ್ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.

ಅಮಾನತು, ಘಟನೆ ಹಿನ್ನೆಲೆ:

ನಿನ್ನೆ ವ್ಯಕ್ತಿಯೋರ್ವ ಮರದ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುವಾಗ ಮಂಜುನಾಥ್​ ಹಿಡಿದಿದ್ದಾರೆ. ಪೀಠೋಪಕರಣದ ಪರವಾನಗಿ ಕೇಳಿದ್ದಾರೆ. ಇದಕ್ಕೆ ಆ ವ್ಯಕ್ತಿ ತನ್ನ ಬಳಿ ಪರವಾನಗಿಯ ಜೆರಾಕ್ಸ್ ಮಾತ್ರ ಇದೆ ಎಂದು ಹೇಳಿ ತೋರಿಸಿ, ಬೆಳಗ್ಗೆ ಮೂಲ ಪ್ರತಿ ತೋರಿಸುವುದಾಗಿ ಹೇಳಿ, ನಂತರ ಸಿಸಿಎಫ್ ಬಳಿ ಬಂದು ತಮ್ಮ ವಿರುದ್ಧ ಲಂಚದ ಆರೋಪ ಮಾಡಿ ದೂರು ನೀಡಿದ್ದಾರೆ.

ಇದರಿಂದ ಸಿಸಿಎಫ್ ನನ್ನನ್ನು ವಿನಾ ಕರಣ ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದ್ದಾರೆ. ಆದರೆ ಸಿಸಿಎಫ್‌ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.