ಶಿವಮೊಗ್ಗ: ತಿಲಕ್ ನಗರದ ಕಾರ್ಮಿಕ ಇಲಾಖೆಯ ಮುಂಭಾಗದಲ್ಲಿ ಡಾ. ಮಂಜುನಾಥ್ ರವರು ಮನೆ ನಿರ್ಮಾಣಕ್ಕೆ ಮರವೊಂದು ಅಡ್ಡವಿದೆಯೆಂದು ಕಡಿದು ಹಾಕಿದ ಪರಿಣಾಮ
ಡಾ. ಮಂಜುನಾಥ್ ರವರು ಮನೆ ನಿರ್ಮಾಣಕ್ಕಾಗಿ ಹಳೆ ಮನೆಯನ್ನು ಕೆಡವಲು ಮುಂದಾಗಿದ್ದಾರೆ. ಇದಕ್ಕೆ ಕಾಂಪೋಡ್ ಒಳಗೆ ಜೆಸಿಬಿ ಹೋಗಲು ಅಡ್ಡವಾಗುತ್ತದೆಯೆಂದು ಸುಮಾರು 10 ವರ್ಷದ ಹೊಂಗೆ ಮರವನ್ನು ಕಡಿದು ಹಾಕಲಾಗಿದೆ.
ರಸ್ತೆ ಬದಿ ಪಾಲಿಕೆಯವರು ಅರಣ್ಯ ಇಲಾಖೆಯವರ ಜೊತೆ ನೆಟ್ಟಿದ್ದ ಹೊಂಗೆ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಹಾಕಿದ್ದಾರೆ. ಮರ ಕಡಿದ ವಿಚಾರ ಅರಣ್ಯ ಇಲಾಖೆಗೆ ತಿಳಿಯುತ್ತಿದ್ದಂತೆ ವಲಯಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ.