ETV Bharat / state

ಮಂಗಳೂರು ಘಟನೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರೇ ನೇರ ಕಾರಣ: ಆಯನೂರು ಮಂಜುನಾಥ್ ವಾಗ್ದಾಳಿ

ಮಂಗಳೂರು ಘಟನೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ನೇರ ಕಾರಣರಾಗಿದ್ದಾರೆ. ಈ ಎರಡೂ ಪಕ್ಷಗಳ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.

author img

By

Published : Dec 25, 2019, 11:38 AM IST

Ayanur Manjunath
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಶಿವಮೊಗ್ಗ: ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಭೂತ ಸೃಷ್ಟಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಮಂಗಳೂರು ಘಟನೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ನೇರ ಕಾರಣರಾಗಿದ್ದಾರೆ. ಇವರಿಬ್ಬರೂ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲನ್ನುಂಟು ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಕುಳಿತು ಕಾನೂನು ಅಧ್ಯಯನ ಮಾಡಲಿ. ಅದರಲ್ಲಿ ದೋಷವಿದ್ದರೆ ಅದನ್ನು ಎತ್ತಿ ಹಿಡಿಯಲಿ ಎಂದರು.
ಖಾದರ್ ಒಬ್ಬ ಮಾಜಿ ಮಂತ್ರಿ. ಅವರಿಗೆ ಸರಿಯಾದ ಮಾಹಿತಿ‌ ಇಲ್ಲದೆ ಇರುವುದು ದುರಂತ. ಖಾದರ್ ಅವರೇ ಪೌರತ್ವ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿಲ್ಲ ಅಂದ್ರೆ ಕಾಂಗ್ರೆಸ್​ನಲ್ಲಿ ಇನ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಸ್ಲಿಮರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ಬಾಧಕವಿಲ್ಲ. ಇದು ಪೌರತ್ವ ಕೊಡುವ ಕಾಯ್ದೆಯೇ‌ ಹೊರತು, ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ ಎಂದು ಸ್ಪಷ್ಟಪಡಿಸಿದರು.

ಮಂಗಳೂರು ಪ್ರಕರಣ ಪೂರ್ವನಿಯೋಜಿತ ಎಂಬುದಕ್ಕೆ ಸಿಸಿಟಿವಿ ಫುಟೇಜ್ ಸಾಕ್ಷಿಯಾಗಿವೆ. ಪ್ರಕರಣದ ತನಿಖೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್​ನವರು ಫಲಿತಾಂಶ ಹೇಳುತ್ತಿದ್ದಾರೆ. ಕಾಂಗ್ರೆಸ್​ನವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕೇರಳದವರು ಮಂಗಳೂರಿಗೆ ಬಂದು ಪ್ರತಿಭಟನೆ ಮಾಡಿ ಗಲಭೆ ಸೃಷ್ಟಿ‌ ಮಾಡಿದ್ದಾರೆ. ಕೇರಳದ ಒಂದು ಸಮಾಜ ವಿರೋಧಿ ಯುವಕರ ತಂಡ ಆ್ಯಕ್ಟಿವ್ ಆಗಿದೆ. ಅಂತಹವರ ಗುರುತಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿವಮೊಗ್ಗ: ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಭೂತ ಸೃಷ್ಟಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಮಂಗಳೂರು ಘಟನೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ನೇರ ಕಾರಣರಾಗಿದ್ದಾರೆ. ಇವರಿಬ್ಬರೂ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲನ್ನುಂಟು ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಕುಳಿತು ಕಾನೂನು ಅಧ್ಯಯನ ಮಾಡಲಿ. ಅದರಲ್ಲಿ ದೋಷವಿದ್ದರೆ ಅದನ್ನು ಎತ್ತಿ ಹಿಡಿಯಲಿ ಎಂದರು.
ಖಾದರ್ ಒಬ್ಬ ಮಾಜಿ ಮಂತ್ರಿ. ಅವರಿಗೆ ಸರಿಯಾದ ಮಾಹಿತಿ‌ ಇಲ್ಲದೆ ಇರುವುದು ದುರಂತ. ಖಾದರ್ ಅವರೇ ಪೌರತ್ವ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿಲ್ಲ ಅಂದ್ರೆ ಕಾಂಗ್ರೆಸ್​ನಲ್ಲಿ ಇನ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಸ್ಲಿಮರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ಬಾಧಕವಿಲ್ಲ. ಇದು ಪೌರತ್ವ ಕೊಡುವ ಕಾಯ್ದೆಯೇ‌ ಹೊರತು, ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ ಎಂದು ಸ್ಪಷ್ಟಪಡಿಸಿದರು.

ಮಂಗಳೂರು ಪ್ರಕರಣ ಪೂರ್ವನಿಯೋಜಿತ ಎಂಬುದಕ್ಕೆ ಸಿಸಿಟಿವಿ ಫುಟೇಜ್ ಸಾಕ್ಷಿಯಾಗಿವೆ. ಪ್ರಕರಣದ ತನಿಖೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್​ನವರು ಫಲಿತಾಂಶ ಹೇಳುತ್ತಿದ್ದಾರೆ. ಕಾಂಗ್ರೆಸ್​ನವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕೇರಳದವರು ಮಂಗಳೂರಿಗೆ ಬಂದು ಪ್ರತಿಭಟನೆ ಮಾಡಿ ಗಲಭೆ ಸೃಷ್ಟಿ‌ ಮಾಡಿದ್ದಾರೆ. ಕೇರಳದ ಒಂದು ಸಮಾಜ ವಿರೋಧಿ ಯುವಕರ ತಂಡ ಆ್ಯಕ್ಟಿವ್ ಆಗಿದೆ. ಅಂತಹವರ ಗುರುತಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

Intro:ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಭೂತ ಸೃಷ್ಟಿ ಮಾಡುವ ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ: ಆಯನೂರು ಮಂಜುನಾಥ್.

ಶಿವಮೊಗ್ಗ: ಕಾಂಗ್ರೆಸ್ ಅಲ್ಪ ಸಂಖ್ಯಾತರ ಮನಸ್ಸಿನಲ್ಲಿ ಭೂತ ಸೃಷ್ಟಿಸುವ ಕುತಂತ್ರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಮಂಗಳೂರು ಘಟನೆಗೆ ಕಾಂಗ್ರೆಸ್, ಕಮ್ಯುನಿಸ್ಟ್ ರು ನೇರ ಕಾರಣರಾಗಿದ್ದಾರೆ. ಇವರಿಬ್ಬರು ಜನಕ್ಕೆ ತಪ್ಪು ಮಾಹಿತಿ ಕೊಟ್ಟು ಗೊಂದಲನ್ನುಂಟು ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ರು ಕುಳಿತು ಕಾನೂನು ಅಧ್ಯಯನ ಮಾಡಲಿ, ಅದರಲ್ಲಿ ದೋಷವಿದ್ದರೆ ಅದನ್ನು ಎತ್ತಿ ಹಿಡಿಯಲಿ ಎಂದರು. ಖಾದರ್ ಒಬ್ಬ ಮಾಜಿ ಮಂತ್ರಿಗೆ ಸರಿಯಾದ ಮಾಹಿತಿ‌ ಇಲ್ಲದೆ ಇರುವುದು ದುರಂತ. ಖಾದರ್ ಅವರೇ ಪೌರತ್ವ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿಲ್ಲ ಅಂದ್ರೆ ಕಾಂಗ್ರೆಸ್ ನಲ್ಲಿ ಇನ್ಯಾರು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಖಾದರ್ ವಿರುದ್ದ ವಾಗ್ದಳಿ ನಡೆಸಿದರು. ಮುಸ್ಲಿಂರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ಭಾಧಕವಿಲ್ಲ.ಇದು ಪೌರತ್ವ ಕೊಡುವ ಕಾಯ್ದೆಯೇ‌ ಹೊರತು, ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ ಎಂದು ಸ್ಪಷ್ಟಪಡಿಸಿದರು.
ತನಿಖೆ ಆರಂಭಕ್ಕು‌ ಮುನ್ನವೇ ಕಾಂಗ್ರೆಸ್ ನವರು ಫಲಿತಾಂಶ ಹೇಳುತ್ತಿದ್ದಾರೆ, ಕಾಂಗ್ರೆಸ್ ನವರ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ.Body:ಇಡಿ ಮಂಗಳೂರು ಪ್ರಕರಣ ಪೂರ್ವ ನಿಯೋಜಿತ ಎಂಬುದಕ್ಕೆ ಸಿಸಿ ಟಿವಿ ಪುಟೇಜ್ ಸಾಕ್ಷಿಯಾಗಿವೆ.
ಕೇರಳದವರು ಮಂಗಳೂರಿಗೆ ಬಂದು ಪ್ರತಿಭಟನೆ ಮಾಡಿ ಗಲಭೆ ಸೃಷ್ಟಿ‌ ಮಾಡಿದ್ದಾರೆ ಎಂದರು. ಕೇರಳದ ಒಂದು ಟೀಮ್ ಸಮಾಜ ವಿರೋಧಿ ಯುವಕರ ತಂಡ ಆ್ಯಕ್ಟಿವ್ ಆಗಿದೆ.ಅಂತಹವರ ಗುರುತಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಆಂತಕ ವ್ಯಕ್ತಪಡಿಸಿದರು.Conclusion:ಇಂತಹ ಸಂಘಟನೆಯನ್ನು ಕಾಂಗ್ರೆಸ್ ಪೋಷಣೆ ಮಾಡುತ್ತಿದೆ.‌ಈ ದೇಶದಲ್ಲಿ ಕಾಂಗ್ರೆಸ್ ನವರೆ ಕಿಡಿಗೇಡಿಗಳು, ಅವರೇ ಈ ಪ್ರಕರಣ ಸೃಷ್ಟಿ ಮಾಡಿ ಗಲಭೆ ಎಬ್ಬಿಸುತ್ತಿರುವವರು ಎಂದು ಕಾಂಗ್ರೆಸ್ ವಿರುದ್ದ ನೇರ ಆರೋಪ ಮಾಡಿದರು. ಗೋಲಿಬಾರ್ ನಲ್ಲಿ ಬಲಿಯಾದವರು ಅಮಾಯಕರೇ, ಆದ್ರೆ, ಅವರು ಕಾಂಗ್ರೆಸ್ ನ ಕುತಂತ್ರಕ್ಕೆ ಬಲಿಯಾಗಿದ್ದಾರೆ ಎಂದರು.

ಬೈಟ್: ಆಯನೂರು ಮಂಜುನಾಥ್. ಎಂಎಲ್ಸಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.