ಶಿವಮೊಗ್ಗ: ಕೊರೊನಾ ಸೋಂಕಿನಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅಭಿಮಾನಿಗಳು, ರಾಜಕೀಯ ನಾಯಕರು, ಕುಟುಂಬಸ್ಥರು ಅವರ ಅಂತಿಮ ದರ್ಶನ ಪಡೆದರು.
ಕೊರೊನಾ ಸೋಂಕಿನಿಂದ ನಿಧನ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ತಾಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿವೆ. ಆದರೂ ಕೂಡ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಅಂತಿಮ ದರ್ಶನ ಮುಗಿದ ನಂತರ ಆ್ಯಂಬುಲೆನ್ಸ್ನಲ್ಲಿ ಅಗಲಿದ ನಾಯಕನ ಮೆರವಣಿಗೆ ಮಾಡಲಾಯಿತು.
![Appaji Gowda final parade](https://etvbharatimages.akamaized.net/etvbharat/prod-images/kn-smg-03-meravanige-ka10011_03092020125903_0309f_00893_484.jpg)
ಅಪ್ಪಾಜಿ ಗೌಡ ಅವರ ಶವ ಸಂಸ್ಕಾರವನ್ನು ಗೋಣಿಬಿಡಿನ ತೋಟದಲ್ಲಿ ಮಾಡಲಾಗುತ್ತದೆ.