ಶಿವಮೊಗ್ಗ: ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಆಗುಂಬೆ ಸಮೀಪ ಸಂಭವಿಸಿದೆ. ಮಂಗಳೂರಿನಿಂದ ತರೀಕೆರೆಗೆ ವ್ಯಕ್ತಿಯ ಶವ ತರುತ್ತಿರುವಾಗ ಅವಘಡ ನಡೆದಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದ ತರೀಕೆರೆ ನಿವಾಸಿಯೊಬ್ಬರ ಮೃತದೇಹ ತರುವಾಗ ಆಗುಂಬೆ ಸಮೀಪದ ತಿರುವಿನಲ್ಲಿ ಆಂಬ್ಯುಲೆನ್ಸ್ ಉರುಳಿದೆ. ಅಪಘಾತದಲ್ಲಿ ತಂದೆಯ ಮೃತದೇಹ ತರುತ್ತಿದ್ದ ಮಗನಿಗೆ ಗಾಯಗಳಾಗಿದ್ದು, ತೀರ್ಥಹಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![ambulance-overturns-in-agumbe-ghat](https://etvbharatimages.akamaized.net/etvbharat/prod-images/kn-smg-01-amubulence-palti-ka10011_01082022162612_0108f_1659351372_957.jpg)
ಇದನ್ನೂ ಓದಿ: ಮಂಗಳೂರು ಬೀಚ್ನಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್: ವಿಡಿಯೋ ಮಾಡಿ ಬ್ಲಾಕ್ಮೇಲ್, ಆರೋಪಿ ಅರೆಸ್ಟ್