ETV Bharat / state

ಯುವಕರಿಗೆ ಮದುವೆಗೆ ಹೆಣ್ಣು ಮಕ್ಕಳು ಸಿಗ್ತಿಲ್ಲ: ಇದಕ್ಕಾಗಿ ಹೊಸ ಕಾಯ್ದೆ ರೂಪಿಸುವಂತೆ ಸಚಿವರಿಗೆ ಕರೆ ಮಾಡಿದ ಯುವ ರೈತ

ರಾಮನಗರ ಜಿಲ್ಲೆಯ ಮಳವಳ್ಳಿ ಮೂಲದ ಯುವ ರೈತನೋರ್ವ ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ದೂರವಾಣಿ ಕರೆ ಮಾಡಿ ರೈತರಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ. ಈ ಕುರಿತಂತೆ ಹೊಸ ಕಾಯ್ದೆ ರೂಪಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತ ಆಡಿಯೋ ಸಖತ್​ ವೈರಲ್​ ಆಗ್ತಿದೆ.

author img

By

Published : Feb 18, 2021, 3:11 PM IST

Updated : Feb 18, 2021, 7:51 PM IST

ಸಚಿವರಿಗೆ ಕರೆ ಮಾಡಿದ ರೈತ ಯುವಕ
Young farmers plead to Minister to form a new law for the sake of farmers marriage

ರಾಮನಗರ: ಯುವ ರೈತನೂಬ್ಬ ಪೋನ್ ಮೂಲಕ ಸಚಿವರನ್ನು ಸಂಪರ್ಕಿಸಿ ರೈತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಹಾಗಾಗಿ ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗುವಂತಹ ಕಾಯ್ದೆ ರೂಪಿಸಿ ಎಂದು ಬೇಡಿಕೆ ಸಲ್ಲಿಸಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಸಚಿವರಿಗೆ ದೂರವಾಣಿ ಕರೆ ಮಾಡಿದ ರೈತ ಯುವಕ

ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮಳವಳ್ಳಿ ಮೂಲದ ಪ್ರವೀಣ್ ಎಂಬ ಯುವ ರೈತ ಪೋನ್ ಮೂಲಕ ಸಂಪರ್ಕ ಮಾಡಿ ಯುವ ರೈತ ಮಕ್ಕಳ ಮದುವೆ ಬವಣೆಯನ್ನು ಬಿಚ್ಚಿಟ್ಟಿದ್ದಾನೆ. ರೈತ ಎಂದರೆ ಸಾಕು ತಮ್ಮ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಹಿಂಜರಿಯುತ್ತಿದ್ದಾರೆ. ಹಾಗೆ ಹೆಣ್ಣುಗಳು ಕೂಡ ರೈತನನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂದು ತನ್ನ ನೋವನ್ನು ಸಚಿವರ ಬಳಿ ತೊಡಿಕೊಂಡಿದ್ದಾನೆ.

ರೈತನಿಗೆ 35 ವರ್ಷ ಕಳೆದರು ಹೆಣ್ಣು ಸಿಗುತ್ತಿಲ್ಲ. ಅದೇ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ ಅಂತವರಿಗೆ ಹೆಣ್ಣು ಸಿಗುತ್ತಿದೆ. ಹಾಗಾಗಿ ತಾವು ಸರ್ಕಾರದಲ್ಲಿ ಯಾವುದಾರು ಕಾಯ್ದೆ ಮಾಡಿ ರೈತರನ್ನು ಮದುವೆಯಾಗುವ ಹೆಣ್ಣುಗಳಿಗೆ ಸಹಾಯ ಧನ ನೀಡುವಂತಹ ಯೋಜನೆ ಜಾರಿಗೆ ತರುವಂತೆ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದಾನೆ.

ಓದಿ: ನವ ವಧು-ವರರಿಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ.. ಯಾಕೆ ಗೊತ್ತಾ?

ರೈತ ಯುವಕ ಪ್ರವೀಣ್ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ನಿನ್ನ ಬೇಡಿಕೆ ಒಳ್ಳೆಯದೆ, ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿರ್ವಾಯತೆ ಇದೆ ಎಂದು ತಮ್ಮ ಸಹಮತ ವ್ಯಕ್ತಪಡಿಸುವ ಮೂಲಕ ಯವಕನಿಗೆ ಧೈರ್ಯ ತುಂಬಿದ್ದಾರೆ.

ರಾಮನಗರ: ಯುವ ರೈತನೂಬ್ಬ ಪೋನ್ ಮೂಲಕ ಸಚಿವರನ್ನು ಸಂಪರ್ಕಿಸಿ ರೈತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಹಾಗಾಗಿ ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗುವಂತಹ ಕಾಯ್ದೆ ರೂಪಿಸಿ ಎಂದು ಬೇಡಿಕೆ ಸಲ್ಲಿಸಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಸಚಿವರಿಗೆ ದೂರವಾಣಿ ಕರೆ ಮಾಡಿದ ರೈತ ಯುವಕ

ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮಳವಳ್ಳಿ ಮೂಲದ ಪ್ರವೀಣ್ ಎಂಬ ಯುವ ರೈತ ಪೋನ್ ಮೂಲಕ ಸಂಪರ್ಕ ಮಾಡಿ ಯುವ ರೈತ ಮಕ್ಕಳ ಮದುವೆ ಬವಣೆಯನ್ನು ಬಿಚ್ಚಿಟ್ಟಿದ್ದಾನೆ. ರೈತ ಎಂದರೆ ಸಾಕು ತಮ್ಮ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಹಿಂಜರಿಯುತ್ತಿದ್ದಾರೆ. ಹಾಗೆ ಹೆಣ್ಣುಗಳು ಕೂಡ ರೈತನನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂದು ತನ್ನ ನೋವನ್ನು ಸಚಿವರ ಬಳಿ ತೊಡಿಕೊಂಡಿದ್ದಾನೆ.

ರೈತನಿಗೆ 35 ವರ್ಷ ಕಳೆದರು ಹೆಣ್ಣು ಸಿಗುತ್ತಿಲ್ಲ. ಅದೇ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ ಅಂತವರಿಗೆ ಹೆಣ್ಣು ಸಿಗುತ್ತಿದೆ. ಹಾಗಾಗಿ ತಾವು ಸರ್ಕಾರದಲ್ಲಿ ಯಾವುದಾರು ಕಾಯ್ದೆ ಮಾಡಿ ರೈತರನ್ನು ಮದುವೆಯಾಗುವ ಹೆಣ್ಣುಗಳಿಗೆ ಸಹಾಯ ಧನ ನೀಡುವಂತಹ ಯೋಜನೆ ಜಾರಿಗೆ ತರುವಂತೆ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದಾನೆ.

ಓದಿ: ನವ ವಧು-ವರರಿಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ.. ಯಾಕೆ ಗೊತ್ತಾ?

ರೈತ ಯುವಕ ಪ್ರವೀಣ್ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ನಿನ್ನ ಬೇಡಿಕೆ ಒಳ್ಳೆಯದೆ, ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿರ್ವಾಯತೆ ಇದೆ ಎಂದು ತಮ್ಮ ಸಹಮತ ವ್ಯಕ್ತಪಡಿಸುವ ಮೂಲಕ ಯವಕನಿಗೆ ಧೈರ್ಯ ತುಂಬಿದ್ದಾರೆ.

Last Updated : Feb 18, 2021, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.