ETV Bharat / state

ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಿದೆ: ಅನಿತಾ ಕುಮಾರಸ್ವಾಮಿ

author img

By

Published : Mar 22, 2019, 2:48 PM IST

ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ, ಈ ಮೂಲಕ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ‌ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದು ಅನಿತಾ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಅನಿತಾ ಕುಮಾರಸ್ವಾಮಿ

ರಾಮನಗರ: ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಅನಿತಾ ಕುಮಾರಸ್ವಾಮಿ ತಿಳಿಸಿದರು.

ನಗರದ ಮಂಜುನಾಥ ಕನ್ವೆನ್ಷನ್ ಹಾಲ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮೈತ್ರಿ ಧರ್ಮ ಪಾಲನೆ ಮಾಡಿದರೆ ಅವರಿಂದಲೂ ನಾವು ನಿರೀಕ್ಷಿಸಬಹುದು. ಅದು ಮಂಡ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಲಿದೆ. ಈ ಮೂಲಕ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ‌ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದರು.

ಇದೇ ವೇಳೆ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ಹತ್ತಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಈಗ ದಿಢೀರ್ ಜೊತೆಗೂಡುವ ಸನ್ನಿವೇಶ ಬಂದಿದೆ. ಕಷ್ಟವಾದರೂ ದೇಶದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ಕಳೆದ ಚುನಾವಣೆಯಿಂದ ಹೊಂದಾಣಿಕೆ ‌ಮೂಲಕ‌ ರಾಜ್ಯಕ್ಕೆ ಹೊಸ ಸಂದೇಶ ಹಾಗೂ ಹೆಸರು ತಂದು ಕೊಟ್ಟ ಹೆಗ್ಗಳಿಕೆ ಇದೆ. ಅನಿತಾ ‌ಕುಮಾರಸ್ವಾಮಿ ಅವರು ಕಳೆದ‌ ಚುನಾವಣೆಯಲ್ಲಿ ದಾಖಲೆ‌ ಮಾಡಿದ್ದಾರೆ. ಅದನ್ನ ಮುರಿಯೋದು ಸಾಧ್ಯವೇ ಇಲ್ಲಾ. ಒಂದು ಮನೆಯಲ್ಲಿಯೇ ಎಲ್ಲರೂ ಒಂದೇ ತರ ಇರಲ್ಲ. ಆದ್ದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡೋಣ. ಚನ್ನಪಟ್ಟಣ ಹೊರತುಪಡಿಸಿ ಬಿಜೆಪಿ ಎಲ್ಲೂ‌ ತಲೆ‌ ಎತ್ತದಂತೆ‌ ನೋಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಅನಿತಾ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿದ್ದು‌ ಪ್ರಾಮಾಣಿಕವಾಗಿ‌ ಜಿಲ್ಲಾ ಅಭಿವೃದ್ಧಿ ಜೊತೆಗೆ‌ ಎಲ್ಲರನ್ನೂ‌ ಒಟ್ಟಾಗಿ‌ ಕೊಂಡೊಯ್ಯುವ ಕೆಲಸ ಮಾಡ್ತೇನೆ. ನಮ್ಮ ಕಾರ್ಯಕರ್ತರು‌ ಮತ್ತು ಮುಖಂಡರು ಯಾರೇ ತಮಗೆ‌ ತೊಂದರೆ‌ ಕೊಟ್ಟಿದ್ದರೂ, ಕೇಸು ದಾಖಲಾಗುವ ಸನ್ನಿವೇಶ ಬಂದಿದ್ದರೂ ಅದಕ್ಕೆ ಕ್ಷಮೆ‌ ಕೋರುತ್ತೇನೆ‌ ಎಂದು‌ ಡಿ.ಕೆ.ಸುರೇಶ್ ಹೇಳಿದರು.

ವಿಶೇಷವಾಗಿ ರಾಮನಗರ‌ ಅಭಿವೃದ್ಧಿಗೆ ಒತ್ತು‌ ನೀಡಿರುವ ಕುಮಾರಸ್ವಾಮಿ ಅವರ ಬೆನ್ನಿಗೆ ನಾವೆಲ್ಲಾ ಒಟ್ಟಾಗಿ‌ ನಿಲ್ಲಬೇಕಿದೆ. ಮಂಡ್ಯ ಕ್ಷೇತ್ರದ ಚುನಾವಣೆ ರಾಷ್ಟ್ರದ ಗಮನ ಸೆಳೆಯುತ್ತಿದೆ. ಅಲ್ಲಿ ನಮ್ಮ ಒಮ್ಮತದ ಅಭ್ಯರ್ಥಿ ಗೆಲುವಿಗೆ ಒಟ್ಟೊಟ್ಟಾಗಿ ಹೋರಾಡಬೇಕಿದೆ. ಅಲ್ಲಿನ ಪರಿಸ್ಥಿತಿಗೆ ನಾವು ಒಂದು ಎರಡು ವೋಟನ್ನೂ ಹಾಕಿಸುವ ಮೂಲಕ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.

ಚುನಾವಣಾ ದಾಳಿ:

ಪುಲ್ವಾಮಾ ದಾಳಿ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದು ಚುನಾವಣಾ ದಾಳಿ ಎಂದ ಡಿ.ಕೆ ಸುರೇಶ್, ಪಾಕಿಸ್ತಾನ ವಿರುದ್ಧದ ಹೋರಾಟಕ್ಕೆ ದೇಶದ ಪ್ರತಿಯೊಬ್ಬರ ಸಹಕಾರ ಇದ್ದೇ ಇದೆ. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿಯೂ ಯುದ್ಧ, ದಾಳಿ‌ಗಳು ನಡೆದಿತ್ತು. ಆದರೆ ಈಗ ಅದನ್ನ ರಾಜಕೀಕರಣ ಮಾಡುವ ಕೆಲಸ ಆಗುತ್ತಿದೆ. ಇದು ಖಂಡನೀಯ ಎಂದರು.

ರಾಮನಗರ: ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಅನಿತಾ ಕುಮಾರಸ್ವಾಮಿ ತಿಳಿಸಿದರು.

ನಗರದ ಮಂಜುನಾಥ ಕನ್ವೆನ್ಷನ್ ಹಾಲ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮೈತ್ರಿ ಧರ್ಮ ಪಾಲನೆ ಮಾಡಿದರೆ ಅವರಿಂದಲೂ ನಾವು ನಿರೀಕ್ಷಿಸಬಹುದು. ಅದು ಮಂಡ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಲಿದೆ. ಈ ಮೂಲಕ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ‌ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದರು.

ಇದೇ ವೇಳೆ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ಹತ್ತಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಈಗ ದಿಢೀರ್ ಜೊತೆಗೂಡುವ ಸನ್ನಿವೇಶ ಬಂದಿದೆ. ಕಷ್ಟವಾದರೂ ದೇಶದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ಕಳೆದ ಚುನಾವಣೆಯಿಂದ ಹೊಂದಾಣಿಕೆ ‌ಮೂಲಕ‌ ರಾಜ್ಯಕ್ಕೆ ಹೊಸ ಸಂದೇಶ ಹಾಗೂ ಹೆಸರು ತಂದು ಕೊಟ್ಟ ಹೆಗ್ಗಳಿಕೆ ಇದೆ. ಅನಿತಾ ‌ಕುಮಾರಸ್ವಾಮಿ ಅವರು ಕಳೆದ‌ ಚುನಾವಣೆಯಲ್ಲಿ ದಾಖಲೆ‌ ಮಾಡಿದ್ದಾರೆ. ಅದನ್ನ ಮುರಿಯೋದು ಸಾಧ್ಯವೇ ಇಲ್ಲಾ. ಒಂದು ಮನೆಯಲ್ಲಿಯೇ ಎಲ್ಲರೂ ಒಂದೇ ತರ ಇರಲ್ಲ. ಆದ್ದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡೋಣ. ಚನ್ನಪಟ್ಟಣ ಹೊರತುಪಡಿಸಿ ಬಿಜೆಪಿ ಎಲ್ಲೂ‌ ತಲೆ‌ ಎತ್ತದಂತೆ‌ ನೋಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಅನಿತಾ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿದ್ದು‌ ಪ್ರಾಮಾಣಿಕವಾಗಿ‌ ಜಿಲ್ಲಾ ಅಭಿವೃದ್ಧಿ ಜೊತೆಗೆ‌ ಎಲ್ಲರನ್ನೂ‌ ಒಟ್ಟಾಗಿ‌ ಕೊಂಡೊಯ್ಯುವ ಕೆಲಸ ಮಾಡ್ತೇನೆ. ನಮ್ಮ ಕಾರ್ಯಕರ್ತರು‌ ಮತ್ತು ಮುಖಂಡರು ಯಾರೇ ತಮಗೆ‌ ತೊಂದರೆ‌ ಕೊಟ್ಟಿದ್ದರೂ, ಕೇಸು ದಾಖಲಾಗುವ ಸನ್ನಿವೇಶ ಬಂದಿದ್ದರೂ ಅದಕ್ಕೆ ಕ್ಷಮೆ‌ ಕೋರುತ್ತೇನೆ‌ ಎಂದು‌ ಡಿ.ಕೆ.ಸುರೇಶ್ ಹೇಳಿದರು.

ವಿಶೇಷವಾಗಿ ರಾಮನಗರ‌ ಅಭಿವೃದ್ಧಿಗೆ ಒತ್ತು‌ ನೀಡಿರುವ ಕುಮಾರಸ್ವಾಮಿ ಅವರ ಬೆನ್ನಿಗೆ ನಾವೆಲ್ಲಾ ಒಟ್ಟಾಗಿ‌ ನಿಲ್ಲಬೇಕಿದೆ. ಮಂಡ್ಯ ಕ್ಷೇತ್ರದ ಚುನಾವಣೆ ರಾಷ್ಟ್ರದ ಗಮನ ಸೆಳೆಯುತ್ತಿದೆ. ಅಲ್ಲಿ ನಮ್ಮ ಒಮ್ಮತದ ಅಭ್ಯರ್ಥಿ ಗೆಲುವಿಗೆ ಒಟ್ಟೊಟ್ಟಾಗಿ ಹೋರಾಡಬೇಕಿದೆ. ಅಲ್ಲಿನ ಪರಿಸ್ಥಿತಿಗೆ ನಾವು ಒಂದು ಎರಡು ವೋಟನ್ನೂ ಹಾಕಿಸುವ ಮೂಲಕ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಕಾರ್ಯಕರ್ತರಿಗೆ ಹೇಳಿದರು.

ಚುನಾವಣಾ ದಾಳಿ:

ಪುಲ್ವಾಮಾ ದಾಳಿ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅದು ಚುನಾವಣಾ ದಾಳಿ ಎಂದ ಡಿ.ಕೆ ಸುರೇಶ್, ಪಾಕಿಸ್ತಾನ ವಿರುದ್ಧದ ಹೋರಾಟಕ್ಕೆ ದೇಶದ ಪ್ರತಿಯೊಬ್ಬರ ಸಹಕಾರ ಇದ್ದೇ ಇದೆ. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿಯೂ ಯುದ್ಧ, ದಾಳಿ‌ಗಳು ನಡೆದಿತ್ತು. ಆದರೆ ಈಗ ಅದನ್ನ ರಾಜಕೀಕರಣ ಮಾಡುವ ಕೆಲಸ ಆಗುತ್ತಿದೆ. ಇದು ಖಂಡನೀಯ ಎಂದರು.

ರಾಮನಗರ : ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ ಆ ನಿಟ್ಟಿನಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಅನಿತಾ ಕುಮಾರಸ್ವಾಮಿ ಕರೆ ನೀಡಿದರು. ನಗರದ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಾವು ಮೈತ್ರಿ ಪಾಲನೆ ಮಾಡಿದರೆ ಅವರಿಂದಲೂ ನಾವು ನಿರೀಕ್ಷಿಸಬಹುದು ಅದು ಮಂಡ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಲಿದೆ ಆ ಮೂಲಕ ನಿಖಿಲ್‌ಕುಮಾರಸ್ವಾಮಿ ಅವರ ಗೆಲುವಿಗೆ‌ ತಮ್ಮ ಕೈಲಾದಷ್ಠು ಸಹಕಾರ ನೀಡಬೇಕು ಎಂದರು. ಇದೇ ವೇಳೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ ಹತ್ತಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು ದಿಢೀರ್ ಜೊತೆಗೂಡುವ ಸನ್ನಿವೇಶ ಬಂದಿದೆ ಕಷ್ಟವಾದರೂ ದೇಶದ ಹಿತದೃಷ್ಟಿಯಿಂದ ಹೊಂದಾಗಬೇಕಿದೆ . ಕಳೆದ ಚುನಾವಣಡಯಿಂದ ಹೊಂದಾಣಿಕೆ‌ಮೂಲಕ‌ ರಾಜ್ಯಕ್ಕೆ ಹೊಸ ಸಂದೇಶ ಹಾಗೂ ಹೆಸರು ತಂದು ಕೊಟ್ಟ ಹೆಗ್ಗಳಿಕೆ ಇದೆ ಎಂದರು ಇದೇ ವೇಳೆ ಅನಿತಾ‌ಕುಮಾರಸ್ವಾಮಿ ಅವರು ಕಳೆದ‌ ಚುನಾವಣೆಯಲ್ಲಿ ಸಚಿನ್ ತೆಂಡೂಲ್ಕರ್ ರೂಪದ ದಾಖಲೆ‌ ಮಾಡಿದ್ದಾರೆ. ಅದನ್ನ ಮುರಿಯೋದು ಸಾಧ್ಯವೇ ಇಲ್ಲಾ ಎಂದರು. ಒಂದು ಮನೆಯಲ್ಲಿಯೇ ಎಲ್ಲರೂ ಒಂದೇ ತರ ಇರಲ್ಲ ಆದ್ದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡೋಣ,ಬಿಜೆಪಿ ಚನ್ನಪಟ್ಟಣ ಹೊರತು ಪಡಿಸಿ ಎಲ್ಲೂ‌ತಲೆ‌ ಎತ್ತದಂತೆ‌ ನೋಡಿಕೊಳ್ಳಬೇಕಿದೆ. ಎಲ್ಲರೂ ಒಟ್ಟುಗೂಡಿ ಸ್ಥಳೀಯ ಸಂಸ್ಥೆಗಳಲ್ಲೂ ಒಟ್ಟಿಗೆ ಹೋಗೋಣ ಎಂದು ಕರೆ ನೀಡಿದರು. ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಯಾಗಿದ್ದು‌ ಪ್ರಾಮಾಣಿಕವಾಗಿ‌ ಜಿಲ್ಲಾ ಅಭಿವೃದ್ಧಿ ಜೊತೆಗೆ‌ ಎಲ್ಲರನ್ನೂ‌ ಒಟ್ಟಾಗಿ‌ ಕೊಂಡೋಯ್ಯುವ ಕೆಲಸ ಮಾಡ್ತೇನೆ. ನಮ್ಮ‌ಕಾರ್ಯಕರ್ತರು‌ ಮತ್ತು ಮುಖಂಡರುಗಳು ಯಾರೇ ತಮಗೆ‌ ತೊಂದರೆ‌ ಕೊಟ್ಟಿದ್ದರೆ ಕೇಸು ದಾಖಲಾಗುವ ಸನ್ನಿವೇಶ ಬಂದಿದ್ದರೂ ಅದಕ್ಕೆ ಕ್ಷಮೆ‌ ಕೋರುತ್ತೇನೆ‌ ಎಂದು‌ ಮನವಿ‌ ಮಾಡಿದರು. ವಿಶೇಷವಾಗಿ ರಾಮನಗರ‌ ಅಭಿವೃದ್ದಿಗೆ ಒತ್ತು‌ನೀಡಿರುವ ಕುಮಾರಸ್ವಾಮಿ ಅವರ ಬೆನ್ನಿಗೆ ನಿವೇಲ್ಲಾ ಒಟ್ಟಾಗಿ‌ ನಿಲ್ಲಬೇಕಿದೆ ಎಂದ ಅವರು ಮಂಡ್ಯ ಕ್ಷೇತ್ರದ ಚುನಾವಣಾ ಪರಿಸ್ಥಿತಿಯನ್ನ ಪ್ರಸ್ಥಾಪಿಸಿ ಅದು ರಾಷ್ಟ್ರದ ಗಮನ ಸೆಳೆಯುತ್ತಿದೆ ಅಲ್ಲಿ ನಮ್ಮ‌ ಒಮ್ಮತದ ಅಭ್ಯರ್ಥಿ ಗೆಲುವಿಗೆ ಒಟ್ಟೊಟ್ಟಾಗಿ ಹೋರಾಡಬೇಕಿದೆ. ಅಲ್ಲಿನ ಪರಿಸ್ಥಿತಿಗೆ ನಾವು ಒಂದು ಎರಡು ಓಟನ್ನೂ ಹಾಕಿಸುವ ಮೂಲಕ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಪದೇ ಪದೇ ಕೇಳುತ್ತಿದ್ದರು. ಚುನಾವಣಾ ದಾಳಿ : ಫುಲ್ವಾಮಾ ಧಾಳಿ ಬಗ್ಗೆ ಹೆಚ್ಷು ಚರ್ಚೆ ನಡೆಯುತ್ತಿದೆ ಅದು ಚುನಾವಣಾ ದಾಳಿ ಎಂದುಡಿ.ಕೆ ಸುರೇಶ್ ವ್ಯಾಖ್ಯಾನಿಸಿ ಗಂಬೀರ ಆರೋಪಿಸಿದರು. ಪಾಕಿಸ್ಥಾನ ವಿರುದ್ದ ಹೋರಾಟಕ್ಕೆ ದೇಶದ ಪ್ರತಿಯೊಬ್ಬರ ಸಹಕಾರ ಇದ್ದೇ ಇದೆ ಜವಾಹರ್ ಲಾಲ್ ನೆಹರು ಇಂದಿರಾಗಾಂದಿ ರಾಜೀವ್ ಗಾಂಧಿ ಕಾಲದಲ್ಲಿಯೂ ಯುದ್ದ‌, ದಾಳಿ‌ಗಳು ನಡೆದಿತತ್ತು. ಅದನ್ನ‌ ರಾಜಕೀಕರಣ ಮಾಡುವ ಕೆಲಸ ಆಗುತ್ತಿದೆ ಇದು ಖಂಡನೀಯ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.