ETV Bharat / state

ರಾಮನಗರದಲ್ಲಿ ತೋಳ್ಬಲ ಪ್ರದರ್ಶನ, ವಾಕ್ಸಮರ: ಡಿ.ಕೆ.ಸುರೇಶ್‌, ಪರಿಷತ್ ಸದಸ್ಯ ರವಿ ಹೇಳಿದ್ದೇನು?

author img

By

Published : Jan 3, 2022, 7:31 PM IST

ಸಚಿವ ಅಶ್ವತ್ಥ್ ನಾರಾಯಣ ಅವರಿಂದಲೇ ಕಾರ್ಯಕ್ರಮ ಹಾಳಾಯಿತು. ಮುಖ್ಯಮಂತ್ರಿಗಳು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲು ಸಚಿವರೇ ಕಾರಣ ಎಂದು ಎಂಎಲ್​ಸಿ ರವಿ ಆರೋಪಿಸಿದರು.

ashwathnarayana
ಸಂಸದ ಡಿ.ಕೆ.ಸುರೇಶ್​

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ರಾಜಕೀಯ ನಾಯಕರ ತೋಳ್ಬಲ, ವಾಕ್ಸಮರಕ್ಕೆ ವೇದಿಕೆಯಾಯಿತು. ಸಚಿವ ಡಾ.ಅಶ್ವತ್ಥ್‌ ನಾರಾಯಣರ ಮಾತುಗಳು ಸಂಸದ ಡಿ.ಕೆ.ಸುರೇಶ್​ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿತು. ಸಚಿವ ಸಂಸದರ ನಡುವೆ ನಡೆದ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ, ಸಚಿವರ ಮೇಲೆ ನೀರಿನ ಬಾಟಲ್ ಕೂಡ ಎಸೆದ ಘಟನೆಯೂ ನಡೆಯಿತು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್​, ಕೇವಲ ಬಿಜೆಪಿಯಿಂದ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕರು ಜಿಲ್ಲೆಯ ಅಭಿವೃದ್ಧಿ ಶ್ರಮಿಸಿದ್ದಾರೆ. ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮಹಾನ್​ ನಾಯಕರಾದ ಡಾ.ಅಂಬೇಡ್ಕರ್​ ಮತ್ತು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಇನ್ನೂ ಅದ್ಧೂರಿಯಾಗಿ ನಡೆಯಬೇಕಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು ಎಂದು ಹೇಳಿದರು.

ಸಚಿವರಿಂದಲೇ ಸಿಎಂಗೆ ಅವಮಾನ: ಎಂಎಲ್​ಸಿ ರವಿ ಕಿಡಿ

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮೇಲ್ಮನೆ ಸದಸ್ಯ ರವಿ, ಸಚಿವ ಅಶ್ವತ್ಥ್‌ನಾರಾಯಣ ಅವರಿಂದಲೇ ಕಾರ್ಯಕ್ರಮ ಹಾಳಾಯಿತು. ಮುಖ್ಯಮಂತ್ರಿಗಳು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲು ಸಚಿವರೇ ಕಾರಣ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲ್ಲಿ ನುಸಿ ರೋಗ ಕಂಡು ಬಂದ ಕಾರಣ ಬೆಳೆ ಕುಸಿತ ಕಂಡಿದೆ. ಇದರಿಂದ ರೇಷ್ಮೆ ದರ ಅಧಿಕವಾಗಿದೆ. ಈ ಬಗ್ಗೆ ಜ್ಞಾನವಿಲ್ಲದ ಸಚಿವ ಅಶ್ವತ್ಥ್‌ ನಾರಾಯಣ ಅವರು ಇದಕ್ಕೆ ಬಿಜೆಪಿಯೇ​ ಕಾರಣ ಎಂದು ಅಲ್ಪಜ್ಞಾನಿಯಂತೆ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

ಅಸಾಂವಿಧಾನಿಕ ಪದ ಬಳಕೆ ಕುರಿತು ಪ್ರತಿಕ್ರಿಯಿಸಿದ ರವಿ, ಸಚಿವರೇ ಕೆಟ್ಟ ಪದಗಳನ್ನು ಬಳಸಿದರು. ಉದ್ವೇಗದಲ್ಲಿ ನಾವೂ ಕೆಲ ಪದಗಳನ್ನು ಬಳಸಿದ್ದೇವೆ ಎಂದರು.

ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ರಾಜಕೀಯ ನಾಯಕರ ತೋಳ್ಬಲ, ವಾಕ್ಸಮರಕ್ಕೆ ವೇದಿಕೆಯಾಯಿತು. ಸಚಿವ ಡಾ.ಅಶ್ವತ್ಥ್‌ ನಾರಾಯಣರ ಮಾತುಗಳು ಸಂಸದ ಡಿ.ಕೆ.ಸುರೇಶ್​ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿತು. ಸಚಿವ ಸಂಸದರ ನಡುವೆ ನಡೆದ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ, ಸಚಿವರ ಮೇಲೆ ನೀರಿನ ಬಾಟಲ್ ಕೂಡ ಎಸೆದ ಘಟನೆಯೂ ನಡೆಯಿತು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್​, ಕೇವಲ ಬಿಜೆಪಿಯಿಂದ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕರು ಜಿಲ್ಲೆಯ ಅಭಿವೃದ್ಧಿ ಶ್ರಮಿಸಿದ್ದಾರೆ. ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮಹಾನ್​ ನಾಯಕರಾದ ಡಾ.ಅಂಬೇಡ್ಕರ್​ ಮತ್ತು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಇನ್ನೂ ಅದ್ಧೂರಿಯಾಗಿ ನಡೆಯಬೇಕಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು ಎಂದು ಹೇಳಿದರು.

ಸಚಿವರಿಂದಲೇ ಸಿಎಂಗೆ ಅವಮಾನ: ಎಂಎಲ್​ಸಿ ರವಿ ಕಿಡಿ

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮೇಲ್ಮನೆ ಸದಸ್ಯ ರವಿ, ಸಚಿವ ಅಶ್ವತ್ಥ್‌ನಾರಾಯಣ ಅವರಿಂದಲೇ ಕಾರ್ಯಕ್ರಮ ಹಾಳಾಯಿತು. ಮುಖ್ಯಮಂತ್ರಿಗಳು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲು ಸಚಿವರೇ ಕಾರಣ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲ್ಲಿ ನುಸಿ ರೋಗ ಕಂಡು ಬಂದ ಕಾರಣ ಬೆಳೆ ಕುಸಿತ ಕಂಡಿದೆ. ಇದರಿಂದ ರೇಷ್ಮೆ ದರ ಅಧಿಕವಾಗಿದೆ. ಈ ಬಗ್ಗೆ ಜ್ಞಾನವಿಲ್ಲದ ಸಚಿವ ಅಶ್ವತ್ಥ್‌ ನಾರಾಯಣ ಅವರು ಇದಕ್ಕೆ ಬಿಜೆಪಿಯೇ​ ಕಾರಣ ಎಂದು ಅಲ್ಪಜ್ಞಾನಿಯಂತೆ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

ಅಸಾಂವಿಧಾನಿಕ ಪದ ಬಳಕೆ ಕುರಿತು ಪ್ರತಿಕ್ರಿಯಿಸಿದ ರವಿ, ಸಚಿವರೇ ಕೆಟ್ಟ ಪದಗಳನ್ನು ಬಳಸಿದರು. ಉದ್ವೇಗದಲ್ಲಿ ನಾವೂ ಕೆಲ ಪದಗಳನ್ನು ಬಳಸಿದ್ದೇವೆ ಎಂದರು.

ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.