ETV Bharat / state

ಸಚಿವ ಅಶ್ವತ್ಥ್ ನಾರಾಯಣ ಭಾಷಣಕ್ಕೆ ಅಡ್ಡಿಪಡಿಸಿದ ಅಭಿಮಾನಿಗಳ ಗದರಿದ ಡಿ.ಕೆ.ಸುರೇಶ್‌

author img

By

Published : Jan 3, 2022, 8:32 PM IST

ಮಾಗಡಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ ಭಾಷಣದ ವೇಳೆ 'ಡಿಕೆ ಡಿಕೆ ಡಿಕೆ' ಎಂದು ಘೋಷಣೆಗಳನ್ನು ಕೂಗುತ್ತಿದ್ದ ಅಭಿಮಾನಿಗಳನ್ನು ಗದರಿದ ಸಂಸದ ಡಿ.ಕೆ.ಸುರೇಶ್‌ ಹೊರ ಹೋಗುವಂತೆ ಸೂಚಿಸಿದ ಪ್ರಸಂಗವೂ ನಡೆಯಿತು.

in magadi Minister ashwath narayan and mp dk suresh loudness update
ಅಲ್ಲಿ ಗರಂ.. ಇಲ್ಲಿ ಬೆಂಬಲ; ಸಚಿವ ಅಶ್ವತ್ಥ ನಾರಾಯಣ ಭಾಷಣಕ್ಕೆ ಅಡ್ಡಿ ಪಡಿಸಿದ ಅಭಿಮಾನಿಗಳಿಗೆ ಡಿಕೆ ಸುರೇಶ್‌ ವಾರ್ನಿಂಗ್‌

ಮಾಗಡಿ(ರಾಮನಗರ): ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರ ಬೆಂಬಲಕ್ಕೆ ಡಿ.ಕೆ.ಸುರೇಶ್‌ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು.


ಮಾಗಡಿಯಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಭಾಷಣ ಪ್ರಾರಂಭ ಮಾಡುತ್ತಿದ್ದಂತೆ 'ಡಿಕೆ... ಡಿಕೆ... ಡಿಕೆ..' ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು. ಈ ವೇಳೆ ಸಚಿವರು ಭಾಷಣ ಮಾಡುತ್ತಿದ್ದ ಡಯಾಸ್‌ ಬಳಿ ಬಂದ ಡಿ.ಕೆ.ಸುರೇಶ್‌, 'ಹೇಯ್‌.. ಗೌರವ ಕೊಡೋದು ಕಲ್ತ್ಕೊಳ್ಳಿ' ಎಂದು ತಮ್ಮ ಅಭಿಮಾನಿಗಳನ್ನು ಗದರಿದರು. ಇದೇ ವೇಳೆ ಬೆಂಬಲಿಗರನ್ನು ವೇದಿಕೆಯಿಂದ ಹೊರ ಹೋಗುವಂತೆ ತಾಕೀತು ಮಾಡಿದರು.

ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

ಮಾಗಡಿ(ರಾಮನಗರ): ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರ ಬೆಂಬಲಕ್ಕೆ ಡಿ.ಕೆ.ಸುರೇಶ್‌ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು.


ಮಾಗಡಿಯಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಭಾಷಣ ಪ್ರಾರಂಭ ಮಾಡುತ್ತಿದ್ದಂತೆ 'ಡಿಕೆ... ಡಿಕೆ... ಡಿಕೆ..' ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು. ಈ ವೇಳೆ ಸಚಿವರು ಭಾಷಣ ಮಾಡುತ್ತಿದ್ದ ಡಯಾಸ್‌ ಬಳಿ ಬಂದ ಡಿ.ಕೆ.ಸುರೇಶ್‌, 'ಹೇಯ್‌.. ಗೌರವ ಕೊಡೋದು ಕಲ್ತ್ಕೊಳ್ಳಿ' ಎಂದು ತಮ್ಮ ಅಭಿಮಾನಿಗಳನ್ನು ಗದರಿದರು. ಇದೇ ವೇಳೆ ಬೆಂಬಲಿಗರನ್ನು ವೇದಿಕೆಯಿಂದ ಹೊರ ಹೋಗುವಂತೆ ತಾಕೀತು ಮಾಡಿದರು.

ಇದನ್ನೂ ಓದಿ: ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.