ETV Bharat / state

ಪತ್ನಿ ಸಾವಿನಿಂದ ಮಾನಸಿಕ ಖಿನ್ನತೆ: ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ! - ರಾಮನಗರ

ಪತ್ನಿ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಚನ್ನಪಟ್ಟಣ ನಗರದ ಸಾಗರ್ ಮೆಡಿಕಲ್ ಶಾಪ್ ಮಾಲೀಕ ಕಿರಣ್​​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Ramnagar
ಸಾಗರ್ ಮೆಡಿಕಲ್ ಶಾಪ್ ಮಾಲೀಕ ಕಿರಣ್ ದಂಪತಿ
author img

By

Published : Jun 11, 2021, 1:19 PM IST

ರಾಮನಗರ: ಪತ್ನಿ ಸಾವಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

ಚನ್ನಪಟ್ಟಣ ನಗರದ ಸಾಗರ್ ಮೆಡಿಕಲ್ ಶಾಪ್ ಮಾಲೀಕ ಕಿರಣ್ ಮೃತ ದುರ್ದೈವಿ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇವರ ಪತ್ನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಸಾವು ಸಹಿಸಿಕೊಳ್ಳದ ಪತಿ ಕಿರಣ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

Ramnagar
ಸಾಗರ್ ಮೆಡಿಕಲ್ ಶಾಪ್ ಮಾಲೀಕ ಕಿರಣ್​​

ಪತಿ-ಪತ್ನಿ ಇಬ್ಬರ ಆತ್ಮಹತ್ಯೆ ಹಿನ್ನೆಲೆ ಇವರ ಮೂರೂವರೆ ವರ್ಷದ ಪುಟ್ಟ ಬಾಲಕಿ ಅನಾಥೆಯಾಗಿದೆ. ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ಸ್ವಗ್ರಾಮದಲ್ಲಿ ಕಿರಣ್ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ಸಂಬಂಧ ಚನ್ನಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಓದಿ:ಪತ್ನಿಯ ಮೇಲೆ ಅನುಮಾನ: ಅಪ್ರಾಪ್ತ ಮಗನೊಂದಿಗೆ ಸೇರಿ ಹೆಂಡ್ತಿಯ ಕೊಂದ ಪತಿ

ರಾಮನಗರ: ಪತ್ನಿ ಸಾವಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

ಚನ್ನಪಟ್ಟಣ ನಗರದ ಸಾಗರ್ ಮೆಡಿಕಲ್ ಶಾಪ್ ಮಾಲೀಕ ಕಿರಣ್ ಮೃತ ದುರ್ದೈವಿ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇವರ ಪತ್ನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿಯ ಸಾವು ಸಹಿಸಿಕೊಳ್ಳದ ಪತಿ ಕಿರಣ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

Ramnagar
ಸಾಗರ್ ಮೆಡಿಕಲ್ ಶಾಪ್ ಮಾಲೀಕ ಕಿರಣ್​​

ಪತಿ-ಪತ್ನಿ ಇಬ್ಬರ ಆತ್ಮಹತ್ಯೆ ಹಿನ್ನೆಲೆ ಇವರ ಮೂರೂವರೆ ವರ್ಷದ ಪುಟ್ಟ ಬಾಲಕಿ ಅನಾಥೆಯಾಗಿದೆ. ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ಸ್ವಗ್ರಾಮದಲ್ಲಿ ಕಿರಣ್ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ಸಂಬಂಧ ಚನ್ನಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಓದಿ:ಪತ್ನಿಯ ಮೇಲೆ ಅನುಮಾನ: ಅಪ್ರಾಪ್ತ ಮಗನೊಂದಿಗೆ ಸೇರಿ ಹೆಂಡ್ತಿಯ ಕೊಂದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.