ETV Bharat / state

ರೇಷ್ಮೆ ನಗರಿಯಲ್ಲಿ ಇಷ್ಟಲಿಂಗ ತಯಾರಿಕೆ: ಶಿವರಾತ್ರಿ ಬಂದರೆ ಈ ಲಿಂಗಗಳಿಗಿದೆ ಭಾರಿ ಬೇಡಿಕೆ

ಸುಮಾರು 20 ವರ್ಷಗಳಿಂದ ರಾಮನಗರ ಸಿದ್ಧಯ್ಯ ಅವರ ಕುಟುಂಬ ಇಷ್ಟಲಿಂಗಗಳನ್ನು ತಯಾರು ಮಾಡುತ್ತಿದೆ. ಪ್ರತಿ ವರ್ಷ ಶಿವರಾತ್ರಿ ಬಂದ್ರೆ ಇಲ್ಲಿನ ಶಿವಲಿಂಗಗಳಿಗೆ ಭಾರಿ ಬೇಡಿಕೆ ಇರುತ್ತೆ.

author img

By

Published : Mar 4, 2019, 7:06 PM IST

ರಾಮನಗರ ಸಿದ್ಧಯ್ಯ ಅವರ ಕುಟುಂಬ ತಯಾರಿಸಿದ ಇಷ್ಟಲಿಂಗ

ರಾಮನಗರ : ಆಧುನಿಕತೆಯತ್ತ ಮುಖ ಮಾಡಿರುವ ಜಗತ್ತಿನಲ್ಲಿ ಇಷ್ಟಲಿಂಗಗಳು ಕಣ್ಮರೆಯಾಗುತ್ತಿವೆ. ಆದರೆ ಜಿಲ್ಲೆಯಲ್ಲಿನ ಒಂದು ಕುಟುಂಬ ಮಾತ್ರ ಇಷ್ಟಲಿಂಗ ತಯಾರಿಕೆಯನ್ನೇ ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದಿದೆ. ಅಷ್ಟೇ ಅಲ್ಲದೆ, ಇವರು ಮಾಡುವ ಲಿಂಗಗಳಿಗೆ ಶಿವರಾತ್ರಿ ಬಂದ್ರೆ ಸಾಕು ಎಲ್ಲಿಲ್ಲದ ಬೇಡಿಕೆ‌ ಇರುತ್ತದೆ.

ಜಿಲ್ಲೆಯ ವಿಭೂತಿಕೆರೆ ಗ್ರಾಮದ ಸಿದ್ದಯ್ಯನವರ ಕುಟುಂಬ ಇಷ್ಟಲಿಂಗವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದವರಾದ ಸಿದ್ಧಯ್ಯ ಬಹಳ ವರ್ಷಗಳ ಹಿಂದೆಯೇ ವಿಭೂತಿಕೆರೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಈ ಕುಟುಂಬ ಸುಮಾರು 20 ವರ್ಷಗಳಿಂದ ನಿರಂತರವಾಗಿ ಲಿಂಗವನ್ನು ತಯಾರು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಇವರು ಜನರ ಇಚ್ಛೆಗೆ ತಕ್ಕಂತೆ ಲಿಂಗಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ. ಶಿವಲಿಂಗ ತಯಾರಿಕೆ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಜಾಗೃತೆಯಿಂದ ತಯಾರು ಮಾಡಬೇಕು. ಗೇರು ಬೀಜ, ಕರ್ಪೂರ, ತುಪ್ಪ, ರಾಳು, ಶಿಲಾರಸ, ಪಾದರಸ, ಶಾಂತರಸವನ್ನು ಉಪಯೋಗಿಸಿ ಲಿಂಗ ತಯಾರಿಸಲಾಗುತ್ತದೆ. ಈ ಲಿಂಗಗಳನ್ನು ಧರಿಸುವುದರಿಂದ ಚರ್ಮವ್ಯಾಧಿಯೂ ಗುಣವಾಗುತ್ತೆ ಎಂಬ ಪ್ರತೀತಿಯಿದೆ.

ರಾಮನಗರ ಸಿದ್ಧಯ್ಯ ಅವರ ಕುಟುಂಬ ತಯಾರಿಸಿದ ಇಷ್ಟಲಿಂಗ

ಅಂದಹಾಗೇ ಈ ಲಿಂಗ ತಯಾರಿಕೆ ಮಾಡುತ್ತಿರುವುದು ಸಿದ್ಧಯ್ಯನವರ ಮಕ್ಕಳಾದ ಶಿವಾನಂದ ಮತ್ತು ಮಹಾದೇವ ಸ್ವಾಮಿಯವರು. ಸಿದ್ದಯ್ಯನವರು ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ ಸಿದ್ದರಾಮಣ್ಣ ಎಂಬವರಿಂದ ಇಷ್ಟಲಿಂಗಗಳನ್ನು ತಯಾರು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಬಳಿಕ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಕೆಲಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಂದಿನ ಮೈಸೂರಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಹಾಗೂ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ ಜತ್ತಿಯವರಿಗೂ ಇಷ್ಟಲಿಂಗವನ್ನು ತಯಾರಿಸಿ ನೀಡಿದ್ದರಂತೆ.

undefined

ಇನ್ನು ಯಡಿಯೂರು, ಸಕಲೇಶಪುರದ ಬೈಕೆರೆಯಲ್ಲೂ ಸಹ 6 ಅಡಿ ಎತ್ತರದ ಲಿಂಗಗಳನ್ನು ತಯಾರಿಸಿದ್ದಾರೆ. ಇನ್ನೂ ಇಷ್ಟಲಿಂಗಗಳನ್ನು ಕೊಳ್ಳಲು ರಾಜ್ಯದ ಅನೇಕ ಜಿಲ್ಲೆಗಳಿಂದ ಜನ ಬಂದು ತಮಗಿಷ್ಟದಂತೆ ಇಷ್ಟಲಿಂಗಗಳನ್ನ ಮಾಡಿಸಿಕೊಂಡು ಹೋಗುತ್ತಾರಂತೆ.

ರಾಮನಗರ : ಆಧುನಿಕತೆಯತ್ತ ಮುಖ ಮಾಡಿರುವ ಜಗತ್ತಿನಲ್ಲಿ ಇಷ್ಟಲಿಂಗಗಳು ಕಣ್ಮರೆಯಾಗುತ್ತಿವೆ. ಆದರೆ ಜಿಲ್ಲೆಯಲ್ಲಿನ ಒಂದು ಕುಟುಂಬ ಮಾತ್ರ ಇಷ್ಟಲಿಂಗ ತಯಾರಿಕೆಯನ್ನೇ ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದಿದೆ. ಅಷ್ಟೇ ಅಲ್ಲದೆ, ಇವರು ಮಾಡುವ ಲಿಂಗಗಳಿಗೆ ಶಿವರಾತ್ರಿ ಬಂದ್ರೆ ಸಾಕು ಎಲ್ಲಿಲ್ಲದ ಬೇಡಿಕೆ‌ ಇರುತ್ತದೆ.

ಜಿಲ್ಲೆಯ ವಿಭೂತಿಕೆರೆ ಗ್ರಾಮದ ಸಿದ್ದಯ್ಯನವರ ಕುಟುಂಬ ಇಷ್ಟಲಿಂಗವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದವರಾದ ಸಿದ್ಧಯ್ಯ ಬಹಳ ವರ್ಷಗಳ ಹಿಂದೆಯೇ ವಿಭೂತಿಕೆರೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಈ ಕುಟುಂಬ ಸುಮಾರು 20 ವರ್ಷಗಳಿಂದ ನಿರಂತರವಾಗಿ ಲಿಂಗವನ್ನು ತಯಾರು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಇವರು ಜನರ ಇಚ್ಛೆಗೆ ತಕ್ಕಂತೆ ಲಿಂಗಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ. ಶಿವಲಿಂಗ ತಯಾರಿಕೆ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಜಾಗೃತೆಯಿಂದ ತಯಾರು ಮಾಡಬೇಕು. ಗೇರು ಬೀಜ, ಕರ್ಪೂರ, ತುಪ್ಪ, ರಾಳು, ಶಿಲಾರಸ, ಪಾದರಸ, ಶಾಂತರಸವನ್ನು ಉಪಯೋಗಿಸಿ ಲಿಂಗ ತಯಾರಿಸಲಾಗುತ್ತದೆ. ಈ ಲಿಂಗಗಳನ್ನು ಧರಿಸುವುದರಿಂದ ಚರ್ಮವ್ಯಾಧಿಯೂ ಗುಣವಾಗುತ್ತೆ ಎಂಬ ಪ್ರತೀತಿಯಿದೆ.

ರಾಮನಗರ ಸಿದ್ಧಯ್ಯ ಅವರ ಕುಟುಂಬ ತಯಾರಿಸಿದ ಇಷ್ಟಲಿಂಗ

ಅಂದಹಾಗೇ ಈ ಲಿಂಗ ತಯಾರಿಕೆ ಮಾಡುತ್ತಿರುವುದು ಸಿದ್ಧಯ್ಯನವರ ಮಕ್ಕಳಾದ ಶಿವಾನಂದ ಮತ್ತು ಮಹಾದೇವ ಸ್ವಾಮಿಯವರು. ಸಿದ್ದಯ್ಯನವರು ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ ಸಿದ್ದರಾಮಣ್ಣ ಎಂಬವರಿಂದ ಇಷ್ಟಲಿಂಗಗಳನ್ನು ತಯಾರು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಬಳಿಕ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಕೆಲಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಂದಿನ ಮೈಸೂರಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಹಾಗೂ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ ಜತ್ತಿಯವರಿಗೂ ಇಷ್ಟಲಿಂಗವನ್ನು ತಯಾರಿಸಿ ನೀಡಿದ್ದರಂತೆ.

undefined

ಇನ್ನು ಯಡಿಯೂರು, ಸಕಲೇಶಪುರದ ಬೈಕೆರೆಯಲ್ಲೂ ಸಹ 6 ಅಡಿ ಎತ್ತರದ ಲಿಂಗಗಳನ್ನು ತಯಾರಿಸಿದ್ದಾರೆ. ಇನ್ನೂ ಇಷ್ಟಲಿಂಗಗಳನ್ನು ಕೊಳ್ಳಲು ರಾಜ್ಯದ ಅನೇಕ ಜಿಲ್ಲೆಗಳಿಂದ ಜನ ಬಂದು ತಮಗಿಷ್ಟದಂತೆ ಇಷ್ಟಲಿಂಗಗಳನ್ನ ಮಾಡಿಸಿಕೊಂಡು ಹೋಗುತ್ತಾರಂತೆ.

ರಾಮನಗರ : ಶಿವರಾತ್ರಿ ಶಿವನಾಮ ಸ್ಮರಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗೋದು ಅನ್ನೋದು ನಂಬಿಕೆ ಗಾಢವಾಗಿದೆ. ಇದೇ ವೇಳೆ ವೀರಶೈವ ಸಮಿದಾಯದವರು ಇಷ್ಟಲಿಂಗಗಳನ್ನ ಧರಿಸೋದು ಸಾಮಾನ್ಯ ಸಂಗತಿ. ಆಧುನಿಕತೆಯತ್ತ ಮುಖ ಮಾಡಿರುವ ಜಗತ್ತಿನಲ್ಲಿ ಈ ಇಷ್ಟಲಿಂಗಗಳು ಕಣ್ಮರೆಯಾಗುತ್ತಿವೆ. ಆದರೂ ರಾಮನಗರ ಜಿಲ್ಲೆಯಲ್ಲಿನ ಒಂದು ಕುಟುಂಬ ಇಷ್ಟಲಿಂಗ ತಯಾರಿಕೆಯನ್ನೇ ಪಾರಂಪರ್ಯವಾಗಿ ತಲೆಮಾರುಗಳಿಂದ ಮುಂದುವರೆಸಿಕೊಂಡು ಬಂದಿದೆ. ಇವರು ಮಾಡುವ ಲಿಂಗಗಳಿಗೆ ಶಿವರಾತ್ರಿ ಬಂದ್ರೆ ಸಾಕು ಎಲ್ಲಿಲ್ಲದ ಬೇಡಿಕೆ‌ ಇರುತ್ತೆ. ರಾಮನಗರ ಜಿಲ್ಲೆಯ ವಿಭೂತಿಕೆರೆ ಗ್ರಾಮದ ಸಿದ್ದಯ್ಯನವರ ಕುಟುಂಬ ಮಾಡ್ತಾ ಇದೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದವರಾದ ಸಿದ್ದಯ್ಯ ಬಹಳ ವರ್ಷಗಳ ಹಿಂದೆಯೇ ವಿಭೂತಿಕೆರೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಶಿವರಾತ್ರಿ ಹಬ್ಬ ಅಂದ್ರೆ ಶಿವನ ಭಕ್ತರಿಗೆ ಹಬ್ಬವೋ ಹಬ್ಬ. ಜಾಗರಣೆ, ವ್ರತ, ಉಪವಾಸ, ಜಾತ್ರೆ ಅಂತೆಲ್ಲಾ ಬ್ಯುಸಿಉಯಾಗ್ತಾರೆ. ಅಂತೇಯೇ ಈ ಶಿವರಾತ್ರಿಯಲ್ಲಿ ಧರಿಸುವ ಇಷ್ಟಲಿಂಗಗಳು ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತೆ. ಅದರಲ್ಲೂ ವೀರಶೈವ ಸಮುದಾಯದವರಂತೂ ಈ ಶಿವರಾತ್ರಿಯನ್ನ ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಧರಿಸುವ ಇಷ್ಟಲಿಂಗಗಳಿಗೆ ಸಾಕಷ್ಟು ಮಹತ್ವವನ್ನ ನೀಡ್ತಾರೆ. ದೇವಲಿಂಗಗಳಿಗೆ ಪೂಜೆ ಸಲ್ಲಿಸುವುದಲ್ಲದೇ ಧರಿಸುವ ಇಷ್ಟಲಿಂಗಗಳಿಗೂ ಸಹ ಶಿವರಾತ್ರಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸ್ತಾರೆ. ಆಧುನಿಕ ಜಗತ್ತಿನ ವೇಗಕ್ಕೆ ಸಿಲುಕಿ ಈ ಇಷ್ಟಲಿಂಗಗಳ ತಯಾರಿಕೆ ಮಾಡುವುದು ಕಣ್ಮರೆಯಾಗುತ್ತಿದ್ದರೂ ಸಹ ಕುಟುಂಬವೊಂದು ಸುಮಾರು ೨೦ ವರ್ಷಗಳಿಂದ ನಿರಂತರವಾಗಿ ಲಿಂಗವನ್ನು ತಯಾರಿಕೆ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಇವರು ಜನರ ಇಚ್ಛೆಗೆ ತಕ್ಕಂತೆ ಲಿಂಗಗಳನ್ನು ತಯಾರು ಮಾಡಿಕೊಡ್ತಿದ್ದಾರೆ. ಶಿವಲಿಂಗ ತಯಾರಿಕೆ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು ಜಾಗೃತೆಯಿಂದ ತಯಾರು ಮಾಡಬೇಕು. ಗೇರು ಬೀಜ, ಕರ್ಪೂರ, ತುಪ್ಪ, ರಾಳು, ಶಿಲಾರಸ,ಪಾದರಸ, ಶಾಂತರಸವನ್ನು ಉಪಯೋಗಿಸಿ ಲಿಂಗ ತಯಾರಿಸಲಾಗುತ್ತೇ. ಈ ಲಿಂಗಗಳನ್ನು ಧರಿಸುವುದರಿಂದ ಚರ್ಮವ್ಯಾಧಿ ಕೂಡಾ ಗುಣವಾಗುತ್ತೆ ಅನ್ನೋ ಪ್ರತೀತಿಯಿದೆ. ಅಂದಹಾಗೇ ಈ ಲಿಂಗ ತಯಾರಿಕೆಯನ್ನ ಸಿದ್ದಯ್ಯನವರ ಮಕ್ಕಳಾದ ಶಿವಾನಂದ ಮತ್ತು ಮಹಾದೇವ ಸ್ವಾಮಿ ಸೋದರರು ಇದೀಗ ಇಷ್ಟಲಿಂಗಗಳ ತಯಾರಿಕೆಯನ್ನ ಮಾಡ್ತಿದ್ದಾರೆ. ಸಿದ್ದಯ್ಯನವರು ಚನ್ನಪಟ್ಟಣ ತಾಲ್ಲೂಕಿನ ಬೇವೂರಿನ ಸಿದ್ದರಾಮಣ್ಣ ಎಂಬುವವರಿಂದ ಇಷ್ಟಲಿಂಗಗಳ ತಯಾರು ಮಾಡುವುದನ್ನ ಕಲಿತುಕೊಂಡ್ರು. ಆನಂತರ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಕಾಯಕವನ್ನು ನಡೆಸ್ತಾ ಇದ್ರು. ಈ ಸಮಯದಲ್ಲೇ ಅಂದಿನ ಮೈಸೂರಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ರವರಿಗೆ ನಂತರ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ ಜತ್ತಿಯವರಿಗೂ ಸಹ ಇಷ್ಟಲಿಂಗವನ್ನು ತಯಾರಿಸಿ ನೀಡಿದ್ರು. ರಾಜ್ಯದಾದ್ಯಂತ ಇವರು ತಯಾರಿಸಿದ ಲಿಂಗಗಳನ್ನು ಕಾಣಬಹುದಾಗಿದೆ. ಅಲ್ಲದೇ ಯಡಿಯೂರು, ಸಕಲೇಶಪುರದ ಬೈಕೆರೆಯಲ್ಲೂ ಸಹ ೬ ಅಡಿ ಎತ್ತರದ ಲಿಂಗಗಳನ್ನು ತಯಾರಿಸಿದ್ದಾರೆ. ಇನ್ನೂ ಇಷ್ಟಲಿಂಗಗಳನ್ನು ಕೊಳ್ಳಲು ರಾಜ್ಯದ ಅನೇಕ ಜಿಲ್ಲೆಗಳಿಂದ ಜನ ಬಂದು ತಮಗಿಷ್ಟದಂತೆ ಇಷ್ಟಲಿಂಗಗಳನ್ನ ಮಾಡಿಸಿಕೊಂಡು ಹೋಗ್ತಾರೆ. ಇವರ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುವ ಲಿಂಗ ತಯಾರಿಕೆ ಉದ್ಯೋಗವೇ ಇವರ ಬದುಕಿನ ನೊಗಭಾರ ಇಳಿಸುತ್ತಿದೆ. ಪ್ರಕಾಶ ಎಂ.ಹೆಚ್. ಈ ಟಿವಿ‌ಭಾರತ್ ರಾಮನಗರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.