ETV Bharat / state

ನನ್ನ ಮಗ‌ ತಪ್ಪು ಮಾಡಿಲ್ಲವೆಂದು ಕಣ್ಣೀರಿಟ್ಟ ಡಿಕೆಶಿ ತಾಯಿ... ಗೌರಮ್ಮಗೆ ಹೆಚ್​ಡಿಕೆ ಅಭಯ - DKS Residence

ಇಂದು ಡಿಕೆಶಿ‌ ನಿವಾಸಕ್ಕೆ ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ‌ ನೀಡಿದ್ದರು. ಇನ್ನು ಹದಿನೈದು ದಿನಗಳಲ್ಲಿ ನಿಮ್ಮ ಮಗ ನಿಮ್ಮ ಬಳಿ‌ ಇರ್ತಾರೆ. ಧೈರ್ಯವಾಗಿರಿ ಎಂದು ಡಿಕೆಶಿ ತಾಯಿ ಗೌರಮ್ಮ ಅವರಿಗೆ ಸಾಂತ್ವನ ಹೇಳಿದ್ರು.

ನನ್ನ ಮಗ‌ ತಪ್ಪು ಮಾಡಿಲ್ಲ ಎಂದು ಕಣ್ಣೀರಿಟ್ಟ ಡಿಕೆಶಿ ತಾಯಿ
author img

By

Published : Sep 6, 2019, 7:07 PM IST

Updated : Sep 6, 2019, 8:04 PM IST

ರಾಮನಗರ: ನನ್ನ ಮಗ‌ ಯಾವುದೇ ತಪ್ಪು ಮಾಡಿಲ್ಲ. ನಾವು ಯಾರಿಗೂ‌ ಮೋಸ‌ ಮಾಡಿಲ್ಲ. ಸುಖಾಸುಮ್ಮನೆ ನನ್ನ ಮಕ್ಕಳಿಗೆ ಹಿಂಸೆ ಕೊಡ್ತಿದ್ದಾರೆ. ನೀವೇ ಅವರನ್ನ ಕಾಪಾಡಬೇಕು. ಅವರಿಗೇನೂ ಗೊತ್ತಿಲ್ಲ ಎನ್ನುತ್ತಾ ಡಿಕೆಶಿ ತಾಯಿ ಗೌರಮ್ಮ ಅಸಹಾಯಕರಾಗಿ‌ ಮಾಜಿ ಸಿಎಂ ಕುಮಾರಸ್ವಾಮಿ ಬಳಿ ನೋವು ತೋಡಿಕೊಂಡರು.

ನನ್ನ ಮಗ‌ ತಪ್ಪು ಮಾಡಿಲ್ಲ ಎಂದು ಕಣ್ಣೀರಿಟ್ಟ ಡಿಕೆಶಿ ತಾಯಿ

ಕನಕಪುರ ತಾಲೂಕಿನ ಕೋಡಿಹಳ್ಳಿಯ‌ಲ್ಲಿರುವ ಡಿಕೆಶಿ‌ ನಿವಾಸಕ್ಕೆ ಭೇಟಿ‌ ನೀಡಿದ್ದ ಮಾಜಿ ಸಿಎಂ ಹೆಚ್​ಡಿಕೆ ಅವರನ್ನು ಭಾವುಕರಾಗಿಯೇ ಸ್ವಾಗತಿಸಿದ ಡಿಕೆಶಿ ತಾಯಿ ಗೌರಮ್ಮ, ತಮ್ಮ ಮಕ್ಕಳ ಸ್ಥಿತಿ‌ ಬಗ್ಗೆ ಮರುಕ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ (2006) ಹೆಚ್​ಡಿಕೆ-ಡಿಕೆಶಿ ರಾಜಕೀಯದಲ್ಲಿ ಕಟ್ಟಾ ವಿರೋಧಿಗಳಾಗಿದ್ದರು. ಆಗ ನೀಡಿದ್ದ ಒಂದು ವಿವಾದಾತ್ಮಕ ಹೇಳಿಕೆಯಿಂದ ಡಿಕೆಶಿಯವರ ತಾಯಿ ಗೌರಮ್ಮರು ಕಾಲಿಗೆರಗಿದ್ದರು ಕುಮಾರಸ್ವಾಮಿ. ಅಲ್ಲದೆ ತನ್ನ ತಾಯಿ ಸಮಾನರಾಗಿರುವ ಅವರ ಬಗ್ಗೆ ಮಾತಿನ ನಡುವೆ ಈ ಪದ ಬಳಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

ಆದ್ರೆ ಇಂದು ಡಿಕೆಶಿ ಮನೆಗೆ ಭೇಟಿದ್ದ ಹೆಚ್​ಡಿಕೆ ಅವರು ಗೌರಮ್ಮ ಅವರ ಕಾಲಿಗೆ ಎರಗಿ ನಮಸ್ಕರಿಸಿದರು. ಈ ವೇಳೆ ತಮ್ಮ ಮಗನನ್ನು ಕಾಪಾಡುವಂತೆ ಗೌರಮ್ಮ ಬೇಡಿಕೊಂಡರು. ನಂತರ ಭಾವುಕರಾಗಿ‌ ಮಾತನಾರಂಭಿಸಿದ ಗೌರಮ್ಮನನ್ನು ಕುಮಾರಸ್ವಾಮಿ ಸಮಾಧಾನಪಡಿಸಿ, ಯಾವುದೇ ಕಾರಣಕ್ಕೂ ಕೈ ಬಿಡುವ‌ ಪ್ರಶ್ನೆಯೇ ಇಲ್ಲ. ಇನ್ನು 15 ದಿನಗಳಲ್ಲಿ ಡಿ ಕೆ ಶಿವಕುಮಾರ್​ ನಿಮ್ಮ ಬಳಿ‌ ಇರ್ತಾರೆ. ಧೈರ್ಯವಾಗಿರಿ ಎಂದು ಅಭಯ ನೀಡಿದ್ರು. ಅಲ್ಲದೆ ಡಿಕೆಶಿ ಜೊತೆಗೆ ಕಾನೂನು ಸಮರಕ್ಕೆ‌ ಸಾಥ್ ನೀಡೋದಾಗಿ‌ ಘೋಷಿಸಿದ್ರು.

ರಾಮನಗರ: ನನ್ನ ಮಗ‌ ಯಾವುದೇ ತಪ್ಪು ಮಾಡಿಲ್ಲ. ನಾವು ಯಾರಿಗೂ‌ ಮೋಸ‌ ಮಾಡಿಲ್ಲ. ಸುಖಾಸುಮ್ಮನೆ ನನ್ನ ಮಕ್ಕಳಿಗೆ ಹಿಂಸೆ ಕೊಡ್ತಿದ್ದಾರೆ. ನೀವೇ ಅವರನ್ನ ಕಾಪಾಡಬೇಕು. ಅವರಿಗೇನೂ ಗೊತ್ತಿಲ್ಲ ಎನ್ನುತ್ತಾ ಡಿಕೆಶಿ ತಾಯಿ ಗೌರಮ್ಮ ಅಸಹಾಯಕರಾಗಿ‌ ಮಾಜಿ ಸಿಎಂ ಕುಮಾರಸ್ವಾಮಿ ಬಳಿ ನೋವು ತೋಡಿಕೊಂಡರು.

ನನ್ನ ಮಗ‌ ತಪ್ಪು ಮಾಡಿಲ್ಲ ಎಂದು ಕಣ್ಣೀರಿಟ್ಟ ಡಿಕೆಶಿ ತಾಯಿ

ಕನಕಪುರ ತಾಲೂಕಿನ ಕೋಡಿಹಳ್ಳಿಯ‌ಲ್ಲಿರುವ ಡಿಕೆಶಿ‌ ನಿವಾಸಕ್ಕೆ ಭೇಟಿ‌ ನೀಡಿದ್ದ ಮಾಜಿ ಸಿಎಂ ಹೆಚ್​ಡಿಕೆ ಅವರನ್ನು ಭಾವುಕರಾಗಿಯೇ ಸ್ವಾಗತಿಸಿದ ಡಿಕೆಶಿ ತಾಯಿ ಗೌರಮ್ಮ, ತಮ್ಮ ಮಕ್ಕಳ ಸ್ಥಿತಿ‌ ಬಗ್ಗೆ ಮರುಕ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ (2006) ಹೆಚ್​ಡಿಕೆ-ಡಿಕೆಶಿ ರಾಜಕೀಯದಲ್ಲಿ ಕಟ್ಟಾ ವಿರೋಧಿಗಳಾಗಿದ್ದರು. ಆಗ ನೀಡಿದ್ದ ಒಂದು ವಿವಾದಾತ್ಮಕ ಹೇಳಿಕೆಯಿಂದ ಡಿಕೆಶಿಯವರ ತಾಯಿ ಗೌರಮ್ಮರು ಕಾಲಿಗೆರಗಿದ್ದರು ಕುಮಾರಸ್ವಾಮಿ. ಅಲ್ಲದೆ ತನ್ನ ತಾಯಿ ಸಮಾನರಾಗಿರುವ ಅವರ ಬಗ್ಗೆ ಮಾತಿನ ನಡುವೆ ಈ ಪದ ಬಳಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

ಆದ್ರೆ ಇಂದು ಡಿಕೆಶಿ ಮನೆಗೆ ಭೇಟಿದ್ದ ಹೆಚ್​ಡಿಕೆ ಅವರು ಗೌರಮ್ಮ ಅವರ ಕಾಲಿಗೆ ಎರಗಿ ನಮಸ್ಕರಿಸಿದರು. ಈ ವೇಳೆ ತಮ್ಮ ಮಗನನ್ನು ಕಾಪಾಡುವಂತೆ ಗೌರಮ್ಮ ಬೇಡಿಕೊಂಡರು. ನಂತರ ಭಾವುಕರಾಗಿ‌ ಮಾತನಾರಂಭಿಸಿದ ಗೌರಮ್ಮನನ್ನು ಕುಮಾರಸ್ವಾಮಿ ಸಮಾಧಾನಪಡಿಸಿ, ಯಾವುದೇ ಕಾರಣಕ್ಕೂ ಕೈ ಬಿಡುವ‌ ಪ್ರಶ್ನೆಯೇ ಇಲ್ಲ. ಇನ್ನು 15 ದಿನಗಳಲ್ಲಿ ಡಿ ಕೆ ಶಿವಕುಮಾರ್​ ನಿಮ್ಮ ಬಳಿ‌ ಇರ್ತಾರೆ. ಧೈರ್ಯವಾಗಿರಿ ಎಂದು ಅಭಯ ನೀಡಿದ್ರು. ಅಲ್ಲದೆ ಡಿಕೆಶಿ ಜೊತೆಗೆ ಕಾನೂನು ಸಮರಕ್ಕೆ‌ ಸಾಥ್ ನೀಡೋದಾಗಿ‌ ಘೋಷಿಸಿದ್ರು.

Intro:Body:ರಾಮನಗರ : ನನ್ನ ಮಗ‌ತಪ್ಪು ಮಾಡಿಲ್ಲ …. ನಾವು ಯಾರಿಗೂ‌ ಮೋಸ‌ಮಾಡಿಲ್ಲ‌ ಸುಖಾ‌ಸುಮ್ಮನೆ ನನ್ನ‌ಮಕ್ಕಳಿಗೆ ಹಿಂಸೆ ಕೊಡ್ತಿದ್ದಾರೆ ….. ನೀವೇ ಅವರನ್ನ ಕಾಪಾಡಬೇಕು…. ಅವರಿಗೇನೂ ಗೊತ್ತಿಲ್ಲಾ ಎನ್ನುತ್ತಾ ಡಿಕೆಶಿ ತಾಯಿ ಗೌರಮ್ಮ‌ಅಸಹಾಯಕರಾಗಿ‌ ಹೆಚ್ಡಿಕೆ ಬಳಿ ನ ನೋವು ತೋಡಿಕೊಂಡ ಪರಿ ಇದು….
ಕನಕಪುರ ತಾಲೂಕಿನ ಕೋಡಿಹಳ್ಳಿಯ‌ ಡಿಕೆಶಿ‌ ಮನೆಗೆ ಬೇಟಿ‌ ನೀಡಿದ್ದ ಮಾಜಿ‌ ಸಿ.ಎಂ. ಕುಮಾರಸ್ವಾಮಿ ಗೌರಮ್ಮ ಅವರಿಗೆ ಸಾಂತ್ವನ ಹೇಳಲೆಂದು ಬಂದಿದ್ದರು ಈ ವೇಳೆ ಬಾವುಕರಾಗಿ ಸ್ವಾಗತಿಸಿದ ಗೌರಮ್ಮ ತನ್ನ ಮಕ್ಕಳ ಸ್ಥಿತಿ‌ ಬಗ್ಗೆ ನೋವು ತೋಡಿಕೊಂಡರು..
ಒಂದು ಕಾಲದಲ್ಲಿ (2006) ಹೆಚ್ಡಿಕೆ ಡಿಕೆಶಿಗೆ ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಎನ್ನುವ ಪದ ಬಳಕೆ ಮಾಡಿದ್ದ ವೇಳೆ ಅಂದು ಇಬ್ಬರೂ ಕಟ್ಟಾ ವಿರೋಧಿಗಳಾಗಿದ್ದರು ಅದರ ಸಂಭಂದ ಒಂದು ವೇದಿಕೆಯಲ್ಲಿ ಡಿಕೆಶಿ ತಾಯಿಯ‌ನ್ನ ಕರೆತಂದು ಹುಟ್ಟಿನ ಬಗ್ಗೆ ಹೇಳುವಂತೆ ಸವಾಲು ಹಾಕಿದ್ದರು… ಅಂದು ಡಿಕೆಶಿ ತಾಯಿ ಗೌರಮ್ಮ‌ಕಾಲಿಗೆರಗಿದ್ದ ಕುಮಾರಸ್ವಾಮಿ ತನ್ನ ತಾಯಿ ಸಮಾನರು ಮಾತಿನ ನಡುವೆ ಪದ ಬಳಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. ಅಂದು ಡಿಕೆಶಿ ಮತ್ತು ಹೆಚ್ಡಿಕೆ‌ ಹೈ ಡ್ರಾಮಾಕ್ಕೆ‌ ಇಡೀ ರಾಜ್ಯ ಕೌತುಕದಿಂದ‌ ನೋಡಿತ್ತು.ಅಲ್ಲದೆ ಆ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಪೋಲೀಸರ ಸರ್ಪಗಾವಲಿನಲ್ಲಿ ನಡೆದಿತ್ತು.

ಇಂದು ಡಿಕೆಶಿ ಮನೆಗೆ ಬೇಟಿದ್ದ ಹೆಚ್ಡಿಕೆ ಗೌರಮ್ಮ‌ ಅವರ ಕಾಲಿಗೆರಗಿ ನಮಸ್ಕರಿಸಿದರು…. ನಂತರ ಭಾವುಕರಾಗಿ‌ ಮಾತನಾರಂಬಿಸಿದ ಗೌರಮ್ಮ ಗೆ ಸಮಾಧಾನಪಡಿಸಿ ಯಾವುದೇ ಕಾರಣಕ್ಕೂ ಕೈ ಬಿಡುವ‌ಪ್ರಶ್ನೆಯೇ ಇಲ್ಲ‌ ಇನ್ನು ಹದಿನೈದು ದಿನಗಳಲ್ಲಿ ಅವರು‌ ನಿಮ್ಮ ಬಳಿ‌ ಇರ್ತಾರೆ ದೈರ್ಯವಾಗಿರಿ ಎಂದರು. ಅಲ್ಲದೆ ಡಿಕೆಶಿ ಜೊತೆಗೆ ಕಾನೂನು ಸಮರಕ್ಕೆ‌ ಸಾಥ್ ನೀಡೋದಾಗಿ‌ ಘೋಷಿಸಿದರು.Conclusion:
Last Updated : Sep 6, 2019, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.