ETV Bharat / state

ಡಿಕೆಶಿ ಬಂಧನ ಹಿನ್ನೆಲೆ: ಇಂದು ರಾಮನಗರ ಬಂದ್​​​​​

author img

By

Published : Sep 5, 2019, 8:21 AM IST

Updated : Sep 5, 2019, 10:28 AM IST

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​​ ಮತ್ತು ಜೆಡಿಎಸ್ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿದ್ದು, ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಸರ್ಪಗಾವಲು ಜೋರಾಗಿದೆ. ಯಾವುದೇ ಅಹಿತಕರ‌ ಘಟನೆ ನಡೆಯದಂತೆ‌ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತ‌, ಶಾಲಾ-ಕಾಲೇಜುಗಳಿಗೆ ರಜೆ‌ ಘೋಷಿಸಿದೆ.

Ramanagar bandh,ರಾಮನಗರ ಬಂದ್​

ರಾಮನಗರ‌: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​​ ಮತ್ತು ಜೆಡಿಎಸ್ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿರುವುದು

ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಸರ್ಪಗಾವಲು ಜೋರಾಗಿದೆ. ಯಾವುದೇ ಅಹಿತಕರ‌ ಘಟನೆ ನಡೆಯದಂತೆ‌ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತ‌, ಶಾಲಾ-ಕಾಲೇಜುಗಳಿಗೆ ರಜೆ‌ ಘೋಷಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ 3 ಮಂದಿ ಐಪಿಎಸ್, ಒಬ್ಬರು ಎಸ್ಪಿ, 10 ಡಿವೈಎಸ್ಪಿ, 30 ಮಂದಿ‌ ಇನ್ಸ್​ಪೆಕ್ಟರ್ ಸೇರಿದಂತೆ ಒಂದು ಸಾವಿರ ಪೊಲೀಸರ ಕಣ್ಗಾವಲಿನಲ್ಲಿ ಬಂದ್ ನಡೆಯುತ್ತಿದೆ. ಬಂದ್​ ಹಿನ್ನೆಲೆಯಲ್ಲಿ ಯಾವುದೇ ಪೆಟ್ರೋಲ್ ಬಂಕ್​ಗಳಲ್ಲಿಯೂ ಪೆಟ್ರೋಲ್ ಹಾಕುತ್ತಿಲ್ಲ. ಕೆಲವೆಡೆ ಮಾತಿನ ಚಮಮಕಿ ನಡೆದಿದೆ.

ಮುಂಜಾನೆಯಿಂದಲೇ ಅಂಗಡಿ-ಮುಂಗಟ್ಟುಗಳು ಬಾಗಿಲು‌ ಮುಚ್ಚಿದ್ದು, ಬಸ್​ಗಳು ರಸ್ತೆಗಿಳಿದಿಲ್ಲ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಕೆಲವೇ ಕೆಲವು ಬಸ್​ಗಳು ಸಂಚಾರ ನಡೆಸುತ್ತಿದ್ದು, ಕೆಲಸಕ್ಕೆ ಹೋಗುವ ಮಂದಿ ಪರದಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಅಪರೂಪಕ್ಕೆ ಕೆಎಸ್ಆರ್​​ಡಿಸಿ ಬಸ್​ಗಳು ನಿಲ್ದಾಣದೊಳಗೆ ಪ್ರವೇಶಿಸಿದರೂ ಪ್ರಯಾಣಿಕರಿಗೆ ನಿಲುಗಡೆ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

ರಾಮನಗರ‌: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​​ ಮತ್ತು ಜೆಡಿಎಸ್ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಕಾರ್ಯಕರ್ತರು ರಾಮನಗರ ಬಂದ್​ಗೆ ಕರೆ ನೀಡಿರುವುದು

ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಸರ್ಪಗಾವಲು ಜೋರಾಗಿದೆ. ಯಾವುದೇ ಅಹಿತಕರ‌ ಘಟನೆ ನಡೆಯದಂತೆ‌ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತ‌, ಶಾಲಾ-ಕಾಲೇಜುಗಳಿಗೆ ರಜೆ‌ ಘೋಷಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ 3 ಮಂದಿ ಐಪಿಎಸ್, ಒಬ್ಬರು ಎಸ್ಪಿ, 10 ಡಿವೈಎಸ್ಪಿ, 30 ಮಂದಿ‌ ಇನ್ಸ್​ಪೆಕ್ಟರ್ ಸೇರಿದಂತೆ ಒಂದು ಸಾವಿರ ಪೊಲೀಸರ ಕಣ್ಗಾವಲಿನಲ್ಲಿ ಬಂದ್ ನಡೆಯುತ್ತಿದೆ. ಬಂದ್​ ಹಿನ್ನೆಲೆಯಲ್ಲಿ ಯಾವುದೇ ಪೆಟ್ರೋಲ್ ಬಂಕ್​ಗಳಲ್ಲಿಯೂ ಪೆಟ್ರೋಲ್ ಹಾಕುತ್ತಿಲ್ಲ. ಕೆಲವೆಡೆ ಮಾತಿನ ಚಮಮಕಿ ನಡೆದಿದೆ.

ಮುಂಜಾನೆಯಿಂದಲೇ ಅಂಗಡಿ-ಮುಂಗಟ್ಟುಗಳು ಬಾಗಿಲು‌ ಮುಚ್ಚಿದ್ದು, ಬಸ್​ಗಳು ರಸ್ತೆಗಿಳಿದಿಲ್ಲ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಕೆಲವೇ ಕೆಲವು ಬಸ್​ಗಳು ಸಂಚಾರ ನಡೆಸುತ್ತಿದ್ದು, ಕೆಲಸಕ್ಕೆ ಹೋಗುವ ಮಂದಿ ಪರದಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಅಪರೂಪಕ್ಕೆ ಕೆಎಸ್ಆರ್​​ಡಿಸಿ ಬಸ್​ಗಳು ನಿಲ್ದಾಣದೊಳಗೆ ಪ್ರವೇಶಿಸಿದರೂ ಪ್ರಯಾಣಿಕರಿಗೆ ನಿಲುಗಡೆ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

Intro:Body:ರಾಮನಗರ‌ : ಡಿ.ಕೆ.ಶಿವಕುಮಾರ್ ಬಂಧನ ಹಿನ್ನಲೆಯಲ್ಲಿ ಇಂದು ಕಾಂಗ್ರೇಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಂದ್ ಗೆ ಕರೆ ನೀಡಿದ್ದಾರೆ. ಬಂದ್ ಹಿನ್ನಲೆಯಲ್ಲಿ ಖಾಕಿ ಸರ್ಪಗಾವಲು ಜೋರಾಗಿದ್ದು ಯಾವುದೇ ಅಹಿತಕರ‌ ಘಟನೆಗೆ ಅವಕಾಶವಾಗದಂತೆ‌ ಕಟ್ಟೆಚ್ಚರ ವಹಿಸಿರುವ ಜಿಲ್ಲಾಢಳಿತ‌ ಈಗಾಗಲೆ ಶಾಲಾ ಕಾಲೇಜುಗಳಿಗೆ ರಜೆ‌ ಘೋಷಿಸಿದೆ.
3 ಮಂದಿ ಐಪಿಎಸ್ , ಒಂದು ಎಎಸ್ಪಿ , ಹತ್ತು ಡಿವೈಎಸ್ಪಿ 30 ಮಂದಿ‌ ಇನ್ಸ್ಪೆಕ್ಟರ್ ಸೇರಿದಂತೆ ಒಂದು ಸಾವಿರ ಪೋಲೀಸರ ಕಣ್ಗಾವಲಿನಲ್ಲಿ ಬಂದ್ ನಡೆಯುತ್ತಿದ್ದು‌ ಬಂದ್ ಹಿನ್ನೆಲೆಯಲ್ಲಿನಯಾವುದೇ ಪೆಟ್ರೋಲ್ ಬಂಕ್ ಗಳಲ್ಲಿಯೂ ಪೆಟ್ರೋಲ್ ಹಾಕುತ್ತಿಲ್ಲವೆಂದು ಕೆಲವೆಡೆ ಮಾತಿನ ಚಮಮಕಿ ನಡೆಯುತ್ತಿದೆ. ಮುಂಜಾನೆಯೇ ಬಾಗಿಲುನತೆರೆಯುತ್ತಿದ್ದ ಕೆಲ‌ ಅಂಗಡಿಗಳೂ ಇಂದು ಬಾಗಿಲು‌ಮುಚ್ಚಿದ್ದು ಬಸ್ ಗಳು ರಸ್ತೆಗಿಳಿದಿಲ್ಲ. ಬೆಂಗಳೂರು ಮೈಸೂರು ಮಾರ್ಗದಲ್ಲಿ ಕೆಲವು ಬಸ್ ಗಳು ಸಂಚರಿಸುತ್ತಿದ್ದು ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ . ಅಲ್ಲದೆ ಅನಿವಾರ್ಯ ಎನ್ನುವಂತೆ ಕೆಲಸಕ್ಕೆ ಹೋಗಲೇ ಬೇಕೆಂದು ಬಸ್ ನಿಲ್ದಾಣಕ್ಕೆ‌ ಬಂದವರು ಪರದಾಡುತ್ತಿರುವ ಸುದ್ದಿ ಸಾಮಾನ್ಯವಾಗಿದೆ.
ಅಂಗಡಿ‌ ಮುಗ್ಗಟ್ಟುಗಳು ತೆರೆದಿಲ್ಲ ಪ್ರತಿಭಟನಾಕಾರರು ರೌಂಡಪ್ ಆರಂಬಿಸಿದ್ದು ಬಂದ್ ಸಂಪೂರ್ಣ ಯಶಸ್ವಿಗೆ ಸಿದ್ದಗೊಂಡಿದ್ದಾರೆ.
Conclusion:
Last Updated : Sep 5, 2019, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.