ETV Bharat / state

ಇಂಗ್ಲೆಂಡ್​ನಲ್ಲಿ U-19 ಕ್ರಿಕೆಟ್​: ಟೀಂ ಇಂಡಿಯಾದಲ್ಲಿ ಮಿಂಚಲಿದೆ ರಾಯಚೂರಿನ ಪ್ರತಿಭೆ - fileshot,filephoto and script

ಇಂಗ್ಲೆಂಡ್​ನಲ್ಲಿ U-19 ಕ್ರಿಕೆಟ್ ತ್ರಿಕೋನ ಏಕದಿನ ಸರಣಿಯಲ್ಲಿ ರಾಯಚೂರಿನ ಯುವಕ ಮಿಂಚಲಿದ್ದಾನೆ. ಯುವ ಬೌಲರ್​ ವಿದ್ಯಾಧರ ಪಾಟೀಲ್ ಮೇಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ.

ಪ್ರತಿಭೆ
author img

By

Published : Jul 15, 2019, 9:54 PM IST

ರಾಯಚೂರು: ಕ್ರಿಕೆಟ್ ಜನಕರ ನಾಡಲ್ಲಿ ನಿನ್ನೆಯಷ್ಟೇ ವಿಶ್ವಕಪ್​ ಮಹಾಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಜುಲೈ 21ರಿಂದ ಅಂಡರ್​-19 ತ್ರಿಕೋನ ಸರಣಿ ನಡೆಯಲಿದ್ದು, ಟೀಂ ಇಂಡಿಯಾಕ್ಕೆ ಕರುನಾಡಿನ ಇಬ್ಬರು ಪ್ರತಿಭೆಗಳು ಆಯ್ಕೆಯಾಗಿದ್ದು, ರಾಯಚೂರಿನ ಯುವ ಬೌಲರ್​ ಕೂಡ ಸ್ಥಾನ ಪಡೆದಿದ್ದಾನೆ.

ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರಲ್ಲಿ ರಾಯಚೂರು ಜಿಲ್ಲೆಯ ವಿದ್ಯಾಧರ ಪಾಟೀಲ್ ಕೂಡ ಒಬ್ಬರು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಲನಾಡಿನ ಯುವಕ ಮಿಂಚಲಿದ್ದಾನೆ. ವೇಗದ ಬೌಲರ್ ಆಗಿರುವ ವಿದ್ಯಾಧರ ಪಾಟೀಲ್ ಮೂಲತಃ ರಾಯಚೂರಿನ ಯರಮರಸ್ ಕ್ಯಾಂಪ್ ನಿವಾಸಿಯಾಗಿದ್ದಾನೆ.

ಟೀಂ ಇಂಡಿಯಾದಲ್ಲಿ ಮಿಂಚಲಿದ್ದಾನೆ ರಾಯಚೂರಿನ ಪ್ರತಿಭೆ

ರಾಯಚೂರು ನಗರದ ಸಿಟಿ ಇಲೆವೆನ್​​ (CITY-XI) ಕ್ರಿಕೆಟ್ ಕ್ಲಬ್ ಕೋಚ್​​ ಆಗಿರುವ ವೆಂಕಟರೆಡ್ಡಿಯವರೇ ವಿದ್ಯಾಧರನ ಕ್ರಿಕೆಟ್ ಗುರು. ಅಲ್ಲದೇ ರಾಯಚೂರು ವಲಯದ ವ್ಯಾಪ್ತಿಗೆ ಬರುವ 6 ಜಿಲ್ಲೆಗಳಲ್ಲಿ ರಾಷ್ಟ್ರದ ತಂಡಕ್ಕೆ ಆಯ್ಕೆಗೊಂಡ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ವಿದ್ಯಾಧರನದಾಗಿದೆ.

cricket
ವಿದ್ಯಾಧರ ಪಾಟೀಲ್

ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಕ್ರಿಕೆಟ್ ಪಟು ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂಗ್ಲೆಂಡ್​​​ನಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಭಾರತ ತಂಡವನ್ನ ಗೆಲ್ಲಿಸಬೇಕು. ಈ ಮೂಲಕ ದೇಶ, ರಾಜ್ಯ ಮತ್ತು ಜಿಲ್ಲೆಯ ಹಿರಿಮೆ ಹೆಚ್ಚಿಸಲಿ ಎಂಬುದು ವಿದ್ಯಾಧರ ಪಾಟೀಲ್ ಕೋಚ್​, ಕೆಸಿಎಸ್​​ಸಿ ಸಂಚಾಲಕರು ಹಾಗೂ ಸಹಪಾಠಿಗಳ ಆಶಯವಾಗಿದೆ.

ರಾಯಚೂರು: ಕ್ರಿಕೆಟ್ ಜನಕರ ನಾಡಲ್ಲಿ ನಿನ್ನೆಯಷ್ಟೇ ವಿಶ್ವಕಪ್​ ಮಹಾಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಜುಲೈ 21ರಿಂದ ಅಂಡರ್​-19 ತ್ರಿಕೋನ ಸರಣಿ ನಡೆಯಲಿದ್ದು, ಟೀಂ ಇಂಡಿಯಾಕ್ಕೆ ಕರುನಾಡಿನ ಇಬ್ಬರು ಪ್ರತಿಭೆಗಳು ಆಯ್ಕೆಯಾಗಿದ್ದು, ರಾಯಚೂರಿನ ಯುವ ಬೌಲರ್​ ಕೂಡ ಸ್ಥಾನ ಪಡೆದಿದ್ದಾನೆ.

ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರಲ್ಲಿ ರಾಯಚೂರು ಜಿಲ್ಲೆಯ ವಿದ್ಯಾಧರ ಪಾಟೀಲ್ ಕೂಡ ಒಬ್ಬರು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಲನಾಡಿನ ಯುವಕ ಮಿಂಚಲಿದ್ದಾನೆ. ವೇಗದ ಬೌಲರ್ ಆಗಿರುವ ವಿದ್ಯಾಧರ ಪಾಟೀಲ್ ಮೂಲತಃ ರಾಯಚೂರಿನ ಯರಮರಸ್ ಕ್ಯಾಂಪ್ ನಿವಾಸಿಯಾಗಿದ್ದಾನೆ.

ಟೀಂ ಇಂಡಿಯಾದಲ್ಲಿ ಮಿಂಚಲಿದ್ದಾನೆ ರಾಯಚೂರಿನ ಪ್ರತಿಭೆ

ರಾಯಚೂರು ನಗರದ ಸಿಟಿ ಇಲೆವೆನ್​​ (CITY-XI) ಕ್ರಿಕೆಟ್ ಕ್ಲಬ್ ಕೋಚ್​​ ಆಗಿರುವ ವೆಂಕಟರೆಡ್ಡಿಯವರೇ ವಿದ್ಯಾಧರನ ಕ್ರಿಕೆಟ್ ಗುರು. ಅಲ್ಲದೇ ರಾಯಚೂರು ವಲಯದ ವ್ಯಾಪ್ತಿಗೆ ಬರುವ 6 ಜಿಲ್ಲೆಗಳಲ್ಲಿ ರಾಷ್ಟ್ರದ ತಂಡಕ್ಕೆ ಆಯ್ಕೆಗೊಂಡ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ವಿದ್ಯಾಧರನದಾಗಿದೆ.

cricket
ವಿದ್ಯಾಧರ ಪಾಟೀಲ್

ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಕ್ರಿಕೆಟ್ ಪಟು ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂಗ್ಲೆಂಡ್​​​ನಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಭಾರತ ತಂಡವನ್ನ ಗೆಲ್ಲಿಸಬೇಕು. ಈ ಮೂಲಕ ದೇಶ, ರಾಜ್ಯ ಮತ್ತು ಜಿಲ್ಲೆಯ ಹಿರಿಮೆ ಹೆಚ್ಚಿಸಲಿ ಎಂಬುದು ವಿದ್ಯಾಧರ ಪಾಟೀಲ್ ಕೋಚ್​, ಕೆಸಿಎಸ್​​ಸಿ ಸಂಚಾಲಕರು ಹಾಗೂ ಸಹಪಾಠಿಗಳ ಆಶಯವಾಗಿದೆ.

Intro: ಸ್ಲಗ್: ಇಂಗ್ಲೆಂಡ್ ಪ್ರವಾಸಕ್ಕೆ ರಾಯಚೂರಿನ ವೇಗದ ಬೌಲರ್ ಆಯ್ಕೆ
ಫಾರ್ಮೇಟ್: ಚೀಟಚಾಟ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 15-೦7-2019
ಸ್ಥಳ: ರಾಯಚೂರು
ಆಂಕರ್: ಕ್ರಿಕೇಟ್ ಜನಕ ನೆಲದಲ್ಲಿ 2019 ಜುಲೈ 21ರಿಂದ ಇಂಗ್ಲೆಂಡ್ ನಲ್ಲಿ U-19 ತ್ರಿಕೋನ ಸರಣಿ ನಡೆಯಲಿದ್ದು, ಭಾರತ ತಂಡವು ಸಿದ್ದಗೊಂಡಿದೆ.Body:ಇಂಗ್ಲೆಂಡ್ ತ್ರಿಕೋನ ಸರಣಿ ಪಂದ್ಯಾವಳಿ ಆಟವಾಡುವುದಕ್ಕೆ ಕರ್ನಾಟಕದಿಂದ ಇಬ್ಬರು ಕ್ರಿಕೇಟ್ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಅದರಲ್ಲಿ ಪೈಕಿ ರಾಯಚೂರು ಜಿಲ್ಲೆಯ ವಿದ್ಯಾಧರ ಪಾಟೀಲ್ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದಲ್ಲಿ ರಾಯಚೂರು ಪ್ರತಿಭೆ ಮಿಂಚದಲ್ಲಿದೆ. ವೇಗದ ಬಾಲರ್ ಆಗಿರುವ ವಿದ್ಯಾಧರ ಪಾಟೀಲ್ ಮೂಲತಃ ರಾಯಚೂರಿನ ಯರಮರಸ್ ಕ್ಯಾಂಪ್ ನಿ ನಿವಾಸಿಯಾಗಿದ್ದಾನೆ. ರಾಯಚೂರು ನಗರದ CITY-XI ಕ್ರಿಕೆಟ್ ಕ್ಲಬ್ ಕೊಂಚ ಆಗಿರುವ ವೆಂಕಟ್ ರೆಡ್ಡಿಯವರ ಬಳಿ ಪಡೆದುಕೊಂಡಿದ್ದಾನೆ. ಅಲ್ಲದೇ ರಾಯಚೂರು ವಲಯದ ವ್ಯಾಪ್ತಿಗೆ ಬರುವಂತಹ ಆರು ಜಿಲ್ಲೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಗೊಂಡು ಮೊದಲ ಕ್ರಿಕೇಟ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾನೆ. ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಕ್ರಿಕೇಟ್ ಪಟ್ಟು ಎಂಬ ಹೆಮ್ಮೆ ಜಿಲ್ಲೆಗ ತಂದಿದ್ದು, ಇಂಗ್ಲೆಂಡ್ ನಲ್ಲಿ ನಡೆಯಲ್ಲಿರುವ ತ್ರಿಕೋನ ಸ್ಪರ್ಧೆಯಲ್ಲಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಭಾರತ ತಂಡವನ್ನ ಗೆಲ್ಲಿಸುವ ಮೂಲಕ ದೇಶಕ್ಕೆ ಮತ್ತು ರಾಜ್ಯ ಮತ್ತು ಜಿಲ್ಲೆಗೆ ಹೆಸರು ಎಂಬ ಆಶಯವನ್ನ ವಿದ್ಯಾಧರ ಪಾಟೀಲ್ ಕೊಂಚರನ್ನ ಕೆಸಿಎಸ ಸಿ ಸಂಚಲಕರು, ಸಹಪಾಠಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. Conclusion:ಬೈಟ್.1: ವೆಂಕಟರೆಡ್ಡಿ, ವಿದ್ಯಾಧರ ಪಾಟೀಲ್ ಕೊಂಚ, ರಾಯಚೂರು(ಬಿಳಿ ಗಡ್ಡ ಬಿಟ್ಟಿರುವ ವ್ಯಕ್ತಿ)
ಬೈಟ್.2: ಮಠಪತಿ, ವಿದ್ಯಾಧರ ಪಾಟೀಲ್ ಸಹಪಾಠಿ(ಮೆರೋನ್ ಕಲರ್ ಟಿಶರ್ಟ್ ಧರಿಸಿದ ಯುವಕ)
ಬೈಟ್.3: ಶರಣರೆಡ್ಡಿ, ಕೆಸಿಎಸ್ ಎ ಸಂಚಾಲಕ, ರಾಯಚೂರು ವಲಯ(ವೈಟ್ ಟಿಶರ್ಟ್ ಧರಿಸಿದ ವ್ಯಕ್ತಿ)

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.