ETV Bharat / state

ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ರಾಯಚೂರಲ್ಲಿ ನಡೆದಿದೆ.

author img

By

Published : Jan 9, 2021, 5:05 PM IST

Updated : Jan 9, 2021, 5:16 PM IST

ಕಲ್ಲು ಕ್ವಾರಿಯಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು
Two boys died in Raichur

ರಾಯಚೂರು: ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈಜಲು ಹೋಗಿ ಸಾವನ್ನಪ್ಪಿದ ಬಾಲಕರು

ದೇವದುರ್ಗ ತಾಲೂಕಿನ ಮಲ್ಲೇದವರಗುಡ್ಡ ಗ್ರಾಮದ ಬಳಿ ಬರುವ ಪೂಜಾರಿ ಸೀತಮ್ಮತಾಂಡದಲ್ಲಿ ಈ ಘಟನೆ ಜರುಗಿದೆ. ಸಂತೋಷ ರಾಠೋಡ್(15), ಮಂಜುನಾಥ ರಾಠೋಡ(13) ಮೃತ ಬಾಲಕರು. ತಾಂಡದಲ್ಲಿ ಕಲ್ಲಿನ ಕ್ವಾರಿಯಗಳಲ್ಲಿ ನೀರು ಸಂಗ್ರಹವಾಗಿದ್ದು, ಈ ನೀರನಲ್ಲಿ ಈಜಲು ಬಾಲಕರು ತೆರಳಿದ್ದರು. ಈ ವೇಳೆ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಓದಿ: ವಿಜಯಪುರದಲ್ಲಿ ಐಪಿಎಸ್ ಅಧಿಕಾರಿ ಅಲೋಕ್​ ಕುಮಾರ್​​ ಗಾನ ಬಜಾನ!

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಗ್ರಾಮಸ್ಥರ ಸಹಾಯದಿಂದ ಬಾಲಕರ ಮೃತದೇಹಗಳನ್ನು ಮೇಲಕ್ಕೆ ತಂದಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಯಚೂರು: ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈಜಲು ಹೋಗಿ ಸಾವನ್ನಪ್ಪಿದ ಬಾಲಕರು

ದೇವದುರ್ಗ ತಾಲೂಕಿನ ಮಲ್ಲೇದವರಗುಡ್ಡ ಗ್ರಾಮದ ಬಳಿ ಬರುವ ಪೂಜಾರಿ ಸೀತಮ್ಮತಾಂಡದಲ್ಲಿ ಈ ಘಟನೆ ಜರುಗಿದೆ. ಸಂತೋಷ ರಾಠೋಡ್(15), ಮಂಜುನಾಥ ರಾಠೋಡ(13) ಮೃತ ಬಾಲಕರು. ತಾಂಡದಲ್ಲಿ ಕಲ್ಲಿನ ಕ್ವಾರಿಯಗಳಲ್ಲಿ ನೀರು ಸಂಗ್ರಹವಾಗಿದ್ದು, ಈ ನೀರನಲ್ಲಿ ಈಜಲು ಬಾಲಕರು ತೆರಳಿದ್ದರು. ಈ ವೇಳೆ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಓದಿ: ವಿಜಯಪುರದಲ್ಲಿ ಐಪಿಎಸ್ ಅಧಿಕಾರಿ ಅಲೋಕ್​ ಕುಮಾರ್​​ ಗಾನ ಬಜಾನ!

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಗ್ರಾಮಸ್ಥರ ಸಹಾಯದಿಂದ ಬಾಲಕರ ಮೃತದೇಹಗಳನ್ನು ಮೇಲಕ್ಕೆ ತಂದಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Jan 9, 2021, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.