ರಾಯಚೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರಳವಾಗಿ ವಿವಾಹವಾಗಿ ನವದಂಪಾತ್ಯಕ್ಕೆ ಜೋಡಿ ಕಾಲಿಟ್ಟಿದೆ.
ರಾಯಚೂರು ತಾಲೂಕಿನ ಚಂದ್ರಬಂಡಾ ಹೊಬಳಿ ವ್ಯಾಪ್ತಿಯಲ್ಲಿ ಬರುವ ಶಾಖವಾದಿ ಗ್ರಾಮದಲ್ಲಿ ಇಂದು ಬೆಳಗ್ಗೆ 4:30 ಕ್ಕೆ ವಿವಾಹ ಜರುಗಿದೆ. ಕೊರೊನಾ ಸೋಂಕಿನ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯ ನೆರವೇರಿಸಲಾಗಿದೆ.
ಈ ವಿವಾಹಕ್ಕೆ ಸಾಕ್ಷಿಯಾದದ್ದು ಒಟ್ಟು 15 ಜನರು ಮಾತ್ರ. ಯಾವುದೇ ಆಡಂಬರವಿಲ್ಲದೆ, ಸರಳವಾಗಿ ಮದುವೆಯಾಗಿ ಈ ಜೋಡಿ ಇತರರಿಗೂ ಮಾದರಿಯಾಗಿದೆ.