ETV Bharat / state

ವರ್ಷ ಕಳೆದರೂ ಬಾಗಿಲು ತೆರೆಯದ ನೂತನ ರೈತರ ಸಮುದಾಯ ಭವನ - undefined

ರಾಯಚೂರಿನ ಗಂಜ್​ ಬಳಿಯ ರೈತ ಸಮುದಾಯ ಭವನ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಕಾಮಗಾರಿ ಪೂರ್ಣಗೊಂಡು, ಉದ್ಘಾಟನೆ ಆಗಿದ್ದರು ಸಾರ್ವಜನಿಕರ, ರೈತರ ಉಪಯೋಗಕ್ಕೆ ಬರುತ್ತಿಲ್ಲ ಎಂದು ರೈತ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರ್ಷ ಕಳೆದರೂ ಪೂರ್ಣಗೊಂಡ ರೈತ ಸಮುದಾಯ ಭವನ ಕಟ್ಟಡ ಉಪಯೋಗಕ್ಕೆ ಬಾರದಿರುವುದು
author img

By

Published : Jul 24, 2019, 9:29 PM IST

ರಾಯಚೂರು: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಿದೆ ಇಲ್ಲಿ ಅಕ್ಷರಶಃ ನಿಜವೆನಿಸುತ್ತದೆ. ರಾಯಚೂರು ಎಪಿಎಂಸಿ ವ್ಯಾಪ್ತಿಗೆ ಬರುವ ರೈತ ಸಮುದಾಯ ಭವನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ ವರ್ಷವಾಗುತ್ತಿದ್ದರೂ ಇನ್ನೂ ಮುಚ್ಚಿದ ಬಾಗಿಲು ತೆಗೆದೆ ಇಲ್ಲ ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ವರ್ಷ ಕಳೆದರೂ ಪೂರ್ಣಗೊಂಡ ರೈತ ಸಮುದಾಯ ಭವನ ಕಟ್ಟಡ ಉಪಯೋಗಕ್ಕೆ ಬಾರದಿರುವುದು

ನಗರದ ಗಂಜ್ ಬಳಿಯ ಹಳೆಯ ರೈತ ಭವನ ಸಾರ್ವಜನಿಕರಿಗೆ, ರೈತರಿಗೆ ಅನುಕೂಲವಾಗಿತ್ತು. ಆದರೆ, ಅದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ಕೆಡವಿ ಹೊಸ ಕಟ್ಟಡಕ್ಕೆ ಅಡಿಗಲ್ಲು ಹಾಕಿ ಕಟ್ಟಡ ಕಾರ್ಯ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಿಲ್ಲ.

ಎಪಿಎಂಸಿ ಅನುದಾನದಲ್ಲಿ 2014-15ನೇ ಕ್ರಿಯಾ ಯೋಜನೆ ಅಡಿ ಸಮುದಾಯವನ್ನು ಕೈಗೆತ್ತಿಕೊಳ್ಳಲಾಗಿತ್ತು. 2016ರಲ್ಲಿ ಅಂದಿನ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಎಪಿಎಂಸಿಯ ₹3.80 ಕೋಟಿ ಅನುದಾನ ಅಡಿ 3 ಮಹಡಿಯ ಬೃಹತ್ ಕಟ್ಟಡದ ಕೆಲಸ ಪೂರ್ಣಗೊಂಡು, 2018ರಲ್ಲಿ ಉದ್ಘಾಟನೆ ನೆರವೇರಿತು.

ಈ ಕುರಿತು ಎಪಿಎಂಸಿಯ ಆಡಳಿತ ಮಂಡಳಿಗೆ ಕೇಳಿದರೆ, ಕಾಮಗಾರಿ ಎಲ್ಲಾ ಮುಗಿದಿದ್ದು. ಸಮುದಾಯ ಭವನದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ದರ ನಿಗದಿಯ ಕುರಿತು ಚರ್ಚೆಯಾಗಬೇಕು. ಎಂಜಿನಿರ್​ಗಳಿಂದ ದರ ನಿಗದಿಯಾದ ನಂತರ ಕಾರ್ಯದರ್ಶಿಗಳಿಂದ ಅನುಮತಿ ಪಡೆದು ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದು ಹೇಳುತ್ತಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲಾಡಳಿತ ಇತ್ತ ಗಮನಹರಿಸಬೇಕು. ಇಲ್ಲವಾದರೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡದ್ದಾರೆ.

ರಾಯಚೂರು: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಿದೆ ಇಲ್ಲಿ ಅಕ್ಷರಶಃ ನಿಜವೆನಿಸುತ್ತದೆ. ರಾಯಚೂರು ಎಪಿಎಂಸಿ ವ್ಯಾಪ್ತಿಗೆ ಬರುವ ರೈತ ಸಮುದಾಯ ಭವನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ ವರ್ಷವಾಗುತ್ತಿದ್ದರೂ ಇನ್ನೂ ಮುಚ್ಚಿದ ಬಾಗಿಲು ತೆಗೆದೆ ಇಲ್ಲ ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ವರ್ಷ ಕಳೆದರೂ ಪೂರ್ಣಗೊಂಡ ರೈತ ಸಮುದಾಯ ಭವನ ಕಟ್ಟಡ ಉಪಯೋಗಕ್ಕೆ ಬಾರದಿರುವುದು

ನಗರದ ಗಂಜ್ ಬಳಿಯ ಹಳೆಯ ರೈತ ಭವನ ಸಾರ್ವಜನಿಕರಿಗೆ, ರೈತರಿಗೆ ಅನುಕೂಲವಾಗಿತ್ತು. ಆದರೆ, ಅದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ಕೆಡವಿ ಹೊಸ ಕಟ್ಟಡಕ್ಕೆ ಅಡಿಗಲ್ಲು ಹಾಕಿ ಕಟ್ಟಡ ಕಾರ್ಯ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಿಲ್ಲ.

ಎಪಿಎಂಸಿ ಅನುದಾನದಲ್ಲಿ 2014-15ನೇ ಕ್ರಿಯಾ ಯೋಜನೆ ಅಡಿ ಸಮುದಾಯವನ್ನು ಕೈಗೆತ್ತಿಕೊಳ್ಳಲಾಗಿತ್ತು. 2016ರಲ್ಲಿ ಅಂದಿನ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಎಪಿಎಂಸಿಯ ₹3.80 ಕೋಟಿ ಅನುದಾನ ಅಡಿ 3 ಮಹಡಿಯ ಬೃಹತ್ ಕಟ್ಟಡದ ಕೆಲಸ ಪೂರ್ಣಗೊಂಡು, 2018ರಲ್ಲಿ ಉದ್ಘಾಟನೆ ನೆರವೇರಿತು.

ಈ ಕುರಿತು ಎಪಿಎಂಸಿಯ ಆಡಳಿತ ಮಂಡಳಿಗೆ ಕೇಳಿದರೆ, ಕಾಮಗಾರಿ ಎಲ್ಲಾ ಮುಗಿದಿದ್ದು. ಸಮುದಾಯ ಭವನದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ದರ ನಿಗದಿಯ ಕುರಿತು ಚರ್ಚೆಯಾಗಬೇಕು. ಎಂಜಿನಿರ್​ಗಳಿಂದ ದರ ನಿಗದಿಯಾದ ನಂತರ ಕಾರ್ಯದರ್ಶಿಗಳಿಂದ ಅನುಮತಿ ಪಡೆದು ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದು ಹೇಳುತ್ತಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲಾಡಳಿತ ಇತ್ತ ಗಮನಹರಿಸಬೇಕು. ಇಲ್ಲವಾದರೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡದ್ದಾರೆ.

Intro:ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಿದೆ ಅದು ಅಕ್ಷರಶಃ ರಾಯಚೂರಿನ ಎಪಿಎಂಸಿ ಅನ್ವಯ ವಾಗುತ್ತದೆ.ಹೌದು ರಾಯಚೂರು ಎಪಿಎಂಸಿ ವ್ಯಾಪ್ತಿಗೆ ಬರುವ ರೈತ ಸಮುದಾಯ ಭವನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದ್ದರೂ ಕೂಡ ಇಂದಿನವರೆಗೆ ಉಪಯೋಗಕ್ಕೆ ಬಾರದಂತಾಗಿದೆ.


Body:ರಾಯಚೂರು ಗಂಜ್ ಬಳಿಯ ರೈತ ಭವನ ಸಾರ್ವಜನಿಕರಿಗೆ ರೈತರಿಗೆ ಅನುಕೂಲವಾಗಿತ್ತು ಆದ್ರೆ ಕಟ್ಟಡ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ಡೆಮಾಲಿಶ್ ಮಾಡಿ ಹೊಸ ಕಟ್ಟಡಕ್ಕೆ ಅಡಿಗಲ್ಲು ಹಾಕಿ ಕಟ್ಟಡ ಕಾರ್ಯ ಪೂರ್ಣಗೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯೂ ನೆರವೇರಿಸಲಾಯಿತು ಆದ್ರೆ ರೈತರಿಗೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬರಬೇಕಿದ್ದ ಕಟ್ಟಡ ಇನ್ನೂ ಬಳಕೆಗೆ ಬಾರದಂತಾಗಿದೆ ಎನ್ನುವುದು ದುರ್ದೈವದ ಸಂಗತಿ. ಆರಂಭಿಕ ಹಂತ: ರಾಯಚೂರು ಎಪಿಎಂಸಿ ಅನುದಾನದಲ್ಲಿ 2014-15ನೇ ಕ್ರಿಯಾ ಯೋಜನೆಯಡಿ ಈ ರೈತ ಸಮುದಾಯವನ್ನು ಕೈಗೆತ್ತಿಕೊಂಡು 10-1-2016 ರಂದು ಅಂದಿನ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಎಪಿಎಂಸಿಯ ರೂ.3.80 ಕೋಟಿ ಅನುದಾನದಡಿ ಮೂರು ಮಹಡಿಯ ಬೃಹತ್ ಕಟ್ಟಡದ ಕೆಲಸ ಪೂರ್ಣಗೊಂಡು ವಿಧಾನಸಭಾ ಚುನಾವಣೆಗೂ ಮುನ್ನ ಅಂದರೆ 27-2-2018 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಉದ್ಘಾಟನೆ ಮೆರವೇರಿಸಿದ್ದರೂ ಆದ್ರೆ ಉದ್ಘಾಟನೆಯಾಗಿ ವರ್ಷವಾದರೂ ರೈತರಿಗೆ ಉಪಯೋಗವಾದೇ ಅಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಎಪಿಎಂಸಿಯ ಆಡಳಿತ ಮಂಡಳಿಗೆ ಕೇಳಿದಾಗ ಕಾಮಗಾರಿ ಎಲ್ಲಾ ಮುಗುದಿದ್ದು ಸದರಿ ಸಮುದಾಯ ಭವನಕ್ಕೆ ಖಾಸಗಿ ಕಾರ್ಯಕ್ರಮವೂ ಮಾಡಬಹುದಾಗಿದ್ದು ಅದಕ್ಕೆ ದರ ನಿಗದಿಯ ಕುರಿತು ಚರ್ಚೆ ನಡೆಯುತಿದ್ದು ಸಂಭಂಧಿಸಿದ ಇಂಜಿನಿಯರ್ಗಳಿಂದ ದರ ನಿಗದಿಮಾಡಿ ನಂತರ ಎಪಿಎಂಸಿ ಕಾರ್ಯದರ್ಶಿಗಳಿಂದ ಅಪ್ರೋಲ್ ಆಗಲಿದೆ ಇದೆಲ್ಲ ಮುಗಿಸಿ ಶೀಘ್ರವೇ ಕಾರ್ಯರಂಬವಾಗಲಿದೆ ಎಂದು ಹೇಳುತ್ತಾರೆ. ಸದರಿ ಎಪಿಎಂಸಿ ವ್ಯಾಪ್ತಿಯ ಹಳೆಯ ಕಟ್ಟಡದಲ್ಲಿ ಖಾಸಗಿ ಕಾರ್ಯಕ್ರಮ,ವಿವಾಹ ಹಾಗೂ ಇತರೆ ಶುಭ ಕಾರ್ಯಗಳು ನಡೆಯುವ ಮೂಲಕ ಎಪಿಎಂಸಿಯ ಆದಾಯಕ್ಕೂ ಸಹಕಾರಿಯಾಗಿತ್ತು ಆದ್ರೆ ಶಿಥಿಲಾವಸ್ಥೆಯ ನೆಪ ಒಡ್ಡಿ ನೆಲಸಮ ಮಾಡಿ ಈಗ ಹೈಟೆಕ್ ಅಗಿ ನಿರ್ಮಾಣವಾದ್ರೂ ಬಳಕೆಗೆ ಬಂದಿಲ್ಲ ಎನ್ನೆಷ್ಟು ದಿನ ಕಾಯಬೇಕು ಎಂದು ಸಾರ್ವಜನಿಕರ ಅಳಲು. ಎಪಿಎಂಸಿಯ ಆಡಳಿತವೆಲ್ಲ ಪ್ರಸ್ತುತ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿದ್ದು ಜಿಲ್ಲಾಧಿಕಾರಿಗಳೇ ಎಪಿಎಂಸಿಯ ಅಧ್ಯಕ್ಷರಾಗಿದ್ದಾರೆ ಈ ಕೂಡಲೇ ಇತ್ತ ಗಮನಹರಿಸಿ ಕಾರ್ಯಾರಂಭ ಮಾಡಲು ಮುಂದಾಗಬೇಕೆಂದು ರೈತರ ಅಗ್ರಹವಾಗಿದೆ. ಬೈಟ್: ಲಕ್ಷ್ಮಣಗೌಡ ಕಡಗಂದೊಡ್ಡಿ. ರೈತ ಸಂಘದ ಜಿಲ್ಲಾಧ್ಯಕ್ಷ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.