ETV Bharat / state

2 ವರ್ಷದ ಹಿಂದೆ ನಡೆದ ವಿದ್ಯಾರ್ಥಿ ಕೊಲೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ಆರೋಪ - undefined

ಪಿಯುಸಿ ವ್ಯಾಸಂಗ ಮಾಡುತಿದ್ದ ಜಂಬಲದಿನ್ನಿಯ ವಿದ್ಯಾರ್ಥಿ ಧೂಳಯ್ಯನ ಕೊಲೆಯಾಗಿ 2 ವರ್ಷ ಕಳೆದಿದೆ. ಆದರೆ ಈವರೆಗೂ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕೊಲೆಯಾದ ವಿದ್ಯಾರ್ಥಿ ಸಂಬಂಧಿ ನಾಗಪ್ಪ ಆರೋಪಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿದ್ಯಾರ್ಥಿಯ ಸಂಬಂಧಿ ನಾಗಪ್ಪ
author img

By

Published : Jul 3, 2019, 8:13 PM IST

ರಾಯಚೂರು: ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ವಾಸವಾಗಿದ್ದ ಧೂಳಯ್ಯ ಎಂಬ ವಿದ್ಯಾರ್ಥಿಯ ಕೊಲೆ ಪ್ರಕರಣ ಸಂಬಂಧ ಎರಡು ವರ್ಷವಾದ್ರೂ ತಪ್ಪಿತಸ್ಥರನ್ನು ಬಂದಿಸದೇ ನಿರ್ಲಕ್ಷ್ಯ ವಹಿಸಿದ್ದು, ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿಯ ಸಂಬಂಧಿ ನಾಗಪ್ಪ ಆರೋಪಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೊಲೆಯಾದ ವಿದ್ಯಾರ್ಥಿಯ ಸಂಬಂಧಿ ನಾಗಪ್ಪ

ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಂಬಲದಿನ್ನಿಯ ವಿದ್ಯಾರ್ಥಿ ಧೂಳಯ್ಯನ ಕೊಲೆ 4-8-2017ರಲ್ಲಿ ನಡೆದಿದೆ. ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತಿದ್ದ ಈತ ಪ್ರತಿಭಾನ್ವಿತ ಹಾಗೂ ಶಿಕ್ಷಣದಲ್ಲಿಯೂ ಮುಂದೆ ಇದ್ದ. ಈತನನ್ನು ಉಪ್ಪಾರ ಸಮಾಜದ ಪಾಗುಂಟಪ್ಪ, ದೊಡ್ಡ ನರಸಿಂಹಲು, ವಿರುಪಾಕ್ಷಿ, ಶ್ರೀನಿವಾಸ, ಕಿಷ್ಣಪ್ಪ ಎಂಬುವರು ಸೇರಿ ಮನೆಯಿಂದ ಕರೆದುಕೊಂಡು ಹೋಗಿ ಹಳ್ಳದಲ್ಲಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ದೂರಿದರು.

ಈ ಪ್ರಕರಣದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸದೆ, ತನಿಖೆಯ ಹಾದಿ ತಪ್ಪಿಸಿ ಕೊಲೆಗೈದವರನ್ನು ರಕ್ಷಿಸಲಾಗುತ್ತಿದೆ. ಕೊಲೆ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮಾತ್ರವಲ್ಲದೇ ಸಮಾಜದ ಜನಪ್ರತಿನಿಧಿಗಳು ಇತರರನ್ನು ಒತ್ತಾಯಿಸಿದರೆ ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಹಣದ ಆಮಿಷ ತೋರಿಸಿದ್ದಾರೆ ಹೊರತು ನ್ಯಾಯ ದೊರೆಕಿಸಿಲ್ಲ ಎಂದು ಆರೋಪಿಸಿದರು.

ರಾಯಚೂರು: ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ವಾಸವಾಗಿದ್ದ ಧೂಳಯ್ಯ ಎಂಬ ವಿದ್ಯಾರ್ಥಿಯ ಕೊಲೆ ಪ್ರಕರಣ ಸಂಬಂಧ ಎರಡು ವರ್ಷವಾದ್ರೂ ತಪ್ಪಿತಸ್ಥರನ್ನು ಬಂದಿಸದೇ ನಿರ್ಲಕ್ಷ್ಯ ವಹಿಸಿದ್ದು, ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿಯ ಸಂಬಂಧಿ ನಾಗಪ್ಪ ಆರೋಪಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೊಲೆಯಾದ ವಿದ್ಯಾರ್ಥಿಯ ಸಂಬಂಧಿ ನಾಗಪ್ಪ

ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಂಬಲದಿನ್ನಿಯ ವಿದ್ಯಾರ್ಥಿ ಧೂಳಯ್ಯನ ಕೊಲೆ 4-8-2017ರಲ್ಲಿ ನಡೆದಿದೆ. ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತಿದ್ದ ಈತ ಪ್ರತಿಭಾನ್ವಿತ ಹಾಗೂ ಶಿಕ್ಷಣದಲ್ಲಿಯೂ ಮುಂದೆ ಇದ್ದ. ಈತನನ್ನು ಉಪ್ಪಾರ ಸಮಾಜದ ಪಾಗುಂಟಪ್ಪ, ದೊಡ್ಡ ನರಸಿಂಹಲು, ವಿರುಪಾಕ್ಷಿ, ಶ್ರೀನಿವಾಸ, ಕಿಷ್ಣಪ್ಪ ಎಂಬುವರು ಸೇರಿ ಮನೆಯಿಂದ ಕರೆದುಕೊಂಡು ಹೋಗಿ ಹಳ್ಳದಲ್ಲಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ದೂರಿದರು.

ಈ ಪ್ರಕರಣದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸದೆ, ತನಿಖೆಯ ಹಾದಿ ತಪ್ಪಿಸಿ ಕೊಲೆಗೈದವರನ್ನು ರಕ್ಷಿಸಲಾಗುತ್ತಿದೆ. ಕೊಲೆ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮಾತ್ರವಲ್ಲದೇ ಸಮಾಜದ ಜನಪ್ರತಿನಿಧಿಗಳು ಇತರರನ್ನು ಒತ್ತಾಯಿಸಿದರೆ ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ ಪ್ರಕರಣದಲ್ಲಿ ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಹಣದ ಆಮಿಷ ತೋರಿಸಿದ್ದಾರೆ ಹೊರತು ನ್ಯಾಯ ದೊರೆಕಿಸಿಲ್ಲ ಎಂದು ಆರೋಪಿಸಿದರು.

Intro:ರಾಯಚೂರು ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ವಾಸವಾಗಿದ್ದ ಧೂಳಯ್ಯ ಎಂಬ ವಿದ್ಯಾರ್ಥಿಯ ಕೊಲೆ ಪ್ರಕರಣಕ್ಕೆ ಸಂಬಂಧ ಎರಡು ವರ್ಷವಾದ್ರೂ ತಪ್ಪಿತಸ್ಥರನ್ನು ಬಂದಿಸದೇ ನಿರ್ಲಕ್ಷ್ಯ ವಹಿಸಿದ್ದು ಪ್ರಕರಣ ಮುಚ್ಚಿಹಾಕಲು ಹುನ್ನಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿಯ ಸಂಬಂಧಿ ನಾಗಪ್ಪ ಆರೋಪಿಸಿದರು.


Body:ಜಂಬಲದಿನ್ನಿ ಯ ವಿದ್ಯಾರ್ಥಿ ಧೂಳಯ್ಯನ ಕೊಲೆ 4-8-2017 ರಲ್ಲಿ ನಡೆದುದ್ದು ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತಿದ್ದ ಯಲ್ಲಿ ಪ್ರತಿಭವಾನ್ವಿತರಾಗಿದ್ದ ಈತನು ಶಿಕ್ಷಣದಲ್ಲಿಯೂ ಮುಂದೆ ಇದ್ದ ಈತನನ್ನು ಉಪ್ಪಾರ ಸಮಾಜದ ಪಾಗುಂಟಪ್ಪ, ದೊಡ್ಡ ನರಸಿಂಹಲು,ವಿರುಪಾಕ್ಷಿ,ಶ್ರೀನಿವಾಸ,ಕಿಷ್ಣಪ್ಪ ಅವರು ಸೇರಿ ಮನೆಯಿಂದ ಕರೆದುಕೊಂಡು ಹೋಗಿ ಹಳ್ಳದಲ್ಲಿ ಕೊಲೆ ಮಾಡಿದ್ದಾರೆ ಈ ಬಗ್ಗೆ ಇಡಪನೂರು ಪೋಲೀಸ್ ಠಾಣೆಯಲ್ಲಿ ದೂರು ನೀಡಿದರೂ ಆರೋಪಿಗಳನ್ನು ಬಂದಿಸಿ ವಿಚಾರಣೆ ನಡೆಸಿಲ್ಲ ಎಂದು ದೂರಿದರು. ಸದರಿ ಪ್ರಕರಣದಲ್ಲಿ ಸಿಪಿಐ ದತ್ತಾತ್ರೆಯ ಕಾರ್ನಾಡ್ ,ಪಿಎಸ್ಐ ಡಕೇಶ್ ( ಉಪ್ಪಾರ) ತನಿಖೆಯ ನಡೆಸದೇ ಆರೋಪಿಗಳನ್ನು ಬಚಾವ್ ಮಾಡಲು ಹುನ್ನಾರ ನಡೆಸಿದ್ದಾರೆ ಪಿಎಸ್ಐ ಉಪ್ಪಾರ ಸಮಾಜದವರಾಗಿದ್ದರಿಂದ ಜಾತಿ ಮೋಹಕ್ಕೆ ಸಿಲುಕಿ ತನಿಖೆಯ ಹಾದಿ ತಪ್ಪಿಸುತಿದ್ದಾರೆ.ಅಲ್ಲದೇ ಈ ಪ್ರಕರಣಕ್ಕೆ ಸಂಬಂಧ ಉಪ್ಪಾರ ಸಮಾಜದಿಂದ ನಿರಂತರ ದೌರ್ಜನ್ಯ ನಡೆಸಲಾಗ್ತಿದೆ ಎಂದು ಆರೋಪಿಸಿದರು. ಸದರಿ ಪ್ರಕರಣದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸದೇ ಕೊಲೆಯಾದ ಕುಟುಂಬ ಸದಸ್ಯರನ್ನು ತನಿಖೆಯ ಹಾದಿ ತಪ್ಪಿಸಿ ಕೊಲೆಗೈದವರನ್ನು ರಕ್ಷಿಸಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧ ನ್ಯಾಯಕ್ಕಾಗಿ ಪೋಲೀಸ್ ಠಾಣೆ ಮಾತ್ರವಲ್ಲದೇ ಸಮಜದ ಜನಪ್ರತಿನಿಧಿಗಳಾದ ಮಾಜಿ ಸಂಸದ ಬಿ.ವಿ.ನಾಯಕ ಹಾಗು ಇತರರನ್ನು ಒತ್ತಾಯಿಸಿದರೆ ಕ್ಯಾರೆ ಎನ್ನುತ್ತಿಲ್ಲ ಅಲ್ಲದೇ ಪ್ರಕರಣದಲ್ಲಿ ಬಿ.ವಿ ನಾಯಕ ಅವರು ರಾಜಿ ಸಂದಾನ ಮಾಡಿಕೊಳ್ಳಿ ಎಂದು ಹಣದ ಆಮೀಷ ತೋರಿಸಿದ್ದಾರೆ ಹೊರತು ನ್ಯಾಯ ದೊರೆಕಿಸಿಲ್ಲ ನಮಗೆ ನ್ಯಾಯಬೇಕು ಹಣವಲ್ಲ ಎಂದು ಸ್ಪಷ್ಟಪಡಿಸಿದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.