ETV Bharat / state

ಬೆಚ್ಚಿಬಿದ್ದ ಬಿಸಿಲೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ವ್ಯಕ್ತಿ ಅಪಹರಣ -EXCLUSIVE

author img

By

Published : Nov 16, 2019, 5:02 PM IST

Updated : Nov 16, 2019, 5:17 PM IST

ನಾಲ್ವರು ದುರ್ಷ್ಕಮಿಗಳು ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿ ಅಪಹರಣ ಮಾಡಿರುವ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

ರಾಯಚೂರಿನಲ್ಲಿ ವ್ಯಕ್ತಿ ಅಪಹರಣ

ರಾಯಚೂರು : ನಾಲ್ವರು ದುರ್ಷ್ಕಮಿಗಳು ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

ಲಿಂಗಸುಗೂರು ಕೇಂದ್ರ ಬಸ್ ನಿಲ್ದಾಣದ ಬಳಿ ಹಾಡುಹಗಲೇ ಒಬ್ಬ ವ್ಯಕ್ತಿಯನ್ನ ಸ್ನೇಹಿತರಂತೆ ಮಾತನಾಡಿಸಿ ಚಾಕು, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಅಪಹರಿಸಿದ್ದಾರೆ. ಮಾರುತಿ ಸಿಯಾಜ್​ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಪರಿಸಿದ್ದಾರೆ. ವ್ಯಕ್ತಿಯನ್ನ ಅಪಹರಿಸುತ್ತಿದ್ದ ವೇಳೆ ತಡೆಯಲು ಮುಂದಾದ ಕೆಲ ಸ್ಥಳೀಯರ ಪ್ರಯತ್ನ ವಿಫಲವಾಗಿದೆ.

ಸಿನಿಮೀಯ ರೀತಿಯಲ್ಲಿ ವ್ಯಕ್ತಿ ಅಪಹರಣ

ಅಪಹರಣಗೊಂಡ ವ್ಯಕ್ತಿ ಹಾಗೂ ಅಪಹರಣಕಾರರು ಯಾರು ಎನ್ನುವ ಗುರುತು ಪತ್ತೆಯಾಗಿಲ್ಲ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಎಂಎಚ್(ಮಹಾರಾಷ್ಟ್ರ) ರಾಜ್ಯದ ಪಾಸಿಂಗ್​ ಹೊಂದಿರುವ MH-14, 3566 ಕಾರಿನಲ್ಲಿ ಅಪಹರಿಸಲಾಗಿದೆ. ನಾಲ್ವರು ಅಪಹರಣಾಕಾರರು ಕನ್ನಡ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ.

ಘಟನೆ ಬಳಿಕ ಸ್ಥಳ ಪರಿಶೀಲಿಸಿದ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಆದರೆ ಈ ಕುರಿತು ಇನ್ನೂ ಯಾರೊಬ್ಬರು ದೂರು ದಾಖಲಿಸಿಲ್ಲ.

ರಾಯಚೂರು : ನಾಲ್ವರು ದುರ್ಷ್ಕಮಿಗಳು ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

ಲಿಂಗಸುಗೂರು ಕೇಂದ್ರ ಬಸ್ ನಿಲ್ದಾಣದ ಬಳಿ ಹಾಡುಹಗಲೇ ಒಬ್ಬ ವ್ಯಕ್ತಿಯನ್ನ ಸ್ನೇಹಿತರಂತೆ ಮಾತನಾಡಿಸಿ ಚಾಕು, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಅಪಹರಿಸಿದ್ದಾರೆ. ಮಾರುತಿ ಸಿಯಾಜ್​ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಪರಿಸಿದ್ದಾರೆ. ವ್ಯಕ್ತಿಯನ್ನ ಅಪಹರಿಸುತ್ತಿದ್ದ ವೇಳೆ ತಡೆಯಲು ಮುಂದಾದ ಕೆಲ ಸ್ಥಳೀಯರ ಪ್ರಯತ್ನ ವಿಫಲವಾಗಿದೆ.

ಸಿನಿಮೀಯ ರೀತಿಯಲ್ಲಿ ವ್ಯಕ್ತಿ ಅಪಹರಣ

ಅಪಹರಣಗೊಂಡ ವ್ಯಕ್ತಿ ಹಾಗೂ ಅಪಹರಣಕಾರರು ಯಾರು ಎನ್ನುವ ಗುರುತು ಪತ್ತೆಯಾಗಿಲ್ಲ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಎಂಎಚ್(ಮಹಾರಾಷ್ಟ್ರ) ರಾಜ್ಯದ ಪಾಸಿಂಗ್​ ಹೊಂದಿರುವ MH-14, 3566 ಕಾರಿನಲ್ಲಿ ಅಪಹರಿಸಲಾಗಿದೆ. ನಾಲ್ವರು ಅಪಹರಣಾಕಾರರು ಕನ್ನಡ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ.

ಘಟನೆ ಬಳಿಕ ಸ್ಥಳ ಪರಿಶೀಲಿಸಿದ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಆದರೆ ಈ ಕುರಿತು ಇನ್ನೂ ಯಾರೊಬ್ಬರು ದೂರು ದಾಖಲಿಸಿಲ್ಲ.

Intro:¬ಸ್ಲಗ್: ಹಾಡುಹಗಲೇ ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿ ಅಪಹರಣ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 16-11-2019
ಸ್ಥಳ: ರಾಯಚೂರು
ಆಂಕರ್: ನಾಲ್ಕು ಅಪರಿತ ದುರ್ಷ್ಕಮಿಗಳು ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿ ಅಪಹರಣ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಜನತೆಯನ್ನ ಬಿಚ್ಚಿ ಬಿಳಿಸಿದೆ.
Body:ಜಿಲ್ಲೆಯ ಲಿಂಗಸೂಗೂರು ಪಟ್ಟಣ ಕೇಂದ್ರ ಬಸ್ ನಿಲ್ದಾಣ ಬಳಿ ಹಾಡುಹಗಲೇ ಓರ್ವ ವ್ಯಕ್ತಿಯನ್ನ ಸ್ನೇಹಿತರಂತೆ ಮಾತನಾಡಿಸಿ ಚಾಕು, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿಕೊಂಡು ಅಪಹರಿಸಿದ್ದಾರೆ. ವ್ಯಕ್ತಿಯನ್ನ ಅಪಹರಿಸಲು ಕೊಂಡುವಾಗ ತಡೆಯಲು ಕೆಲ ಸ್ಥಳೀಯರು ಮುಂದಾಗಿದ್ದಾರೆ ಬೆದರಿಕೆ ಹಾಕಿ ಅಪರಹಣಗೊಳಿಸಿ ಕರೆದುಕೊಂಡು ಹೋಗಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ ಎಂದು ಹೇಳಲಾಗುತ್ತಿದೆ. ಆದ್ರೆ ಪೊಲೀಸ್ ಖಾತರಿ ಪಡಿಸುತ್ತಿಲ್ಲ. ಅಪಹರಣ ವ್ಯಕ್ತಿ ಹಾಗೂ ಅಪಹರಣಕಾರರು ಯಾರು ಎನ್ನುವ ಗುರುತು ಪತ್ತೆಯಾಗಿಲ್ಲ. ಘಟನಾ ಸುದ್ದಿ ತಿಳಿದ ಪೊಲೀಸ್ ಸದ್ಯ ಘಟನಾ ಸ್ಥಳಕ್ಕೆ ಲಿಂಗಸೂಗೂರು ಠಾಣೆ ಪೊಲೀಸ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ಹಂತದ ಮಾಹಿತಿ ಪ್ರಕಾರ ಎಂಎಚ್(ಮಹಾರಾಷ್ಟ್ರ) ರಾಜ್ಯದ ಪಾಸ್ ಹೊಂದಿರುವ MH14, 3566 ಕಾರ್ ಎಂದು ಗುರುತಿಸಲಾಗಿದ್ದು, ಬಿಳಿಯ ಬಣ್ಣದ ಕಾರ್ ಮುದಗಲ್ ರಸ್ತೆಯ ಕಡೆ ಕಾರ್ ತೆರಳಿದೆ ಎನ್ನಲಾಗುತ್ತಿದೆ. ಸದ್ಯ ಘಟನೆಯಿಂದ ಪಟ್ಟಣದ ಜನತೆ ಬಿಚ್ಚಿ ಬಿದಿದ್ದಾರೆ. ಇದುವರೆಗೂ ಈ ಕುರಿತಂತೆ ಯಾವುದೇ ದೂರು ಬಂದಿಲ್ಲ. Conclusion:ಆದ್ರೆ ಘಟನೆಯ ಕುರಿತು ಪೊಲೀಸ್ ತನಿಖೆ ಕೈಗೊಂಡಿದ್ದಾರೆ. ಅಪಹರಣ ಮಾಡುವ ದೃಶ್ಯ ಸಿಸಿ ಕ್ಯಾಮರ್ ದಲ್ಲಿ ಸೆರೆಯಾಗಿದೆ.
Last Updated : Nov 16, 2019, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.