ETV Bharat / state

ರಾಯಚೂರಲ್ಲಿ ದೇಗುಲದ ಬಾಗಿಲು ಮುಚ್ಚಿದ್ದರೂ ಹರಿದುಬಂದ ಜನ.. ಭಕ್ತಿ ಪರಾಕಾಷ್ಠೆಯಲ್ಲಿ ಮಾಸ್ಕ್​, ಸಾಮಾಜಿಕ ಅಂತರ ಮಂಗಮಾಯ!

author img

By

Published : Jun 24, 2021, 1:46 PM IST

ಕಾರಹುಣ್ಣೆಮೆ ಪ್ರಯುಕ್ತ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ದೇವಾಲಯದ ಮುಂದೆ ಜನ ಗುಂಪು ಸೇರಿರುವ ದೃಶ್ಯ ರಾಯಚೂರು ನಗರದಲ್ಲಿ ಕಂಡುಬಂದಿದೆ.

Crowd in front of temple
ದೇವಾಲಯದ ಮುಂದೆ ಕಂಡು ಬಂದ ಜನಸಂದಣಿ

ರಾಯಚೂರು : ಕೋವಿಡ್ ಕಾರಣದಿಂದ ದೇವಾಲಯಗಳ ಬಾಗಿಲು ಮುಚ್ಚಿದ್ದರೂ, ಕಾರ ಹುಣ್ಣಿಮೆ ದಿನವಾದ ಇಂದು ಭಕ್ತರು ದೇವಾಲಯದ ಗೇಟ್ ಮುಂದೆ ಕಾಯಿ ಒಡೆಯುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂತು.

ನಗರದ ಶ್ರೀ ಕಂದಗಡ್ಡೆ ಮಾರೆಮ್ಮದೇವಿ ದೇವಾಲಯದ ಮುಂದೆ ಕಾರ ಹುಣ್ಣಿಮೆ ಪ್ರಯುಕ್ತ ಭಕ್ತರು ಪೂಜೆ ಸಲ್ಲಿಸಿದರು. ನೈವೇದ್ಯ ಮಾಡಿ, ತೆಂಗಿನಕಾಯಿ ಒಡೆದು ತಮ್ಮ ಭಕ್ತಿ ಸಮರ್ಪಿಸಿದರು.

ದೇವಾಲಯದ ಮುಂದೆ ಕಂಡು ಬಂದ ಜನಸಂದಣಿ

ಕೋವಿಡ್ ಮುನ್ನೆಚ್ಚರಿಕ ಕ್ರಮವಾಗಿ ದೇವಾಲಯಗಳನ್ನು ಮುಚ್ಚಲಾಗಿದೆ. ಆದರೆ, ಜನ ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಗೇಟ್​ ಮುಂದೆ ಗುಂಪು ಗುಂಪಾಗಿ ಸೇರಿದ್ದರು. ಜನ ಜಂಗುಳಿಯ ನಡುವೆ ಸಾಮಾಜಿಕ ಅಂತರ ಮಾಯವಾಗಿತ್ತು.

ಓದಿ : ಲಿಂಗಸುಗೂರು ಬಸ್​ ನಿಲ್ದಾಣ ಬಳಿ ವ್ಹೀಲಿಂಗ್​ ಮಾಡಿದ ಟಿಪ್ಪರ್! Video

ರಾಯಚೂರು : ಕೋವಿಡ್ ಕಾರಣದಿಂದ ದೇವಾಲಯಗಳ ಬಾಗಿಲು ಮುಚ್ಚಿದ್ದರೂ, ಕಾರ ಹುಣ್ಣಿಮೆ ದಿನವಾದ ಇಂದು ಭಕ್ತರು ದೇವಾಲಯದ ಗೇಟ್ ಮುಂದೆ ಕಾಯಿ ಒಡೆಯುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂತು.

ನಗರದ ಶ್ರೀ ಕಂದಗಡ್ಡೆ ಮಾರೆಮ್ಮದೇವಿ ದೇವಾಲಯದ ಮುಂದೆ ಕಾರ ಹುಣ್ಣಿಮೆ ಪ್ರಯುಕ್ತ ಭಕ್ತರು ಪೂಜೆ ಸಲ್ಲಿಸಿದರು. ನೈವೇದ್ಯ ಮಾಡಿ, ತೆಂಗಿನಕಾಯಿ ಒಡೆದು ತಮ್ಮ ಭಕ್ತಿ ಸಮರ್ಪಿಸಿದರು.

ದೇವಾಲಯದ ಮುಂದೆ ಕಂಡು ಬಂದ ಜನಸಂದಣಿ

ಕೋವಿಡ್ ಮುನ್ನೆಚ್ಚರಿಕ ಕ್ರಮವಾಗಿ ದೇವಾಲಯಗಳನ್ನು ಮುಚ್ಚಲಾಗಿದೆ. ಆದರೆ, ಜನ ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಗೇಟ್​ ಮುಂದೆ ಗುಂಪು ಗುಂಪಾಗಿ ಸೇರಿದ್ದರು. ಜನ ಜಂಗುಳಿಯ ನಡುವೆ ಸಾಮಾಜಿಕ ಅಂತರ ಮಾಯವಾಗಿತ್ತು.

ಓದಿ : ಲಿಂಗಸುಗೂರು ಬಸ್​ ನಿಲ್ದಾಣ ಬಳಿ ವ್ಹೀಲಿಂಗ್​ ಮಾಡಿದ ಟಿಪ್ಪರ್! Video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.