ETV Bharat / state

ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ: ರೈತರಲ್ಲಿ ಆತಂಕ

author img

By

Published : Dec 26, 2020, 5:42 PM IST

ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ನದಿ ತೀರದ ರೈತರಲ್ಲಿ ಆತಂಕ ಮೂಡಿದೆ.

Crocodile has been found
ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ..

ರಾಯಚೂರು: ತಾಲೂಕಿನ ಶಕ್ತಿನಗರ ಹೈದರಾಬಾದ್-ರಾಯಚೂರು ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯ ಬಲ ಭಾಗದಲ್ಲಿ ನೂರಾರು ಕಿಲೋ ಮೀಟರ್ ಉದ್ದದಷ್ಟು ಕೃಷ್ಣಾ ನದಿ ಹರಿಯುತ್ತಿದ್ದು, ಇಂದು ಶಕ್ತಿನಗರದ 2ನೇ ಕ್ರಾಸ್ ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿ ತೀರದಲ್ಲಿ ಹೊಲ-ಗದ್ದೆಗಳಿದ್ದು, ಅಲ್ಲಿನ ರೈತರು ವ್ಯವಸಾಯ ಚಟುವಟಿಕೆಗಳಿಗೆ ತೊಡಗುತ್ತಾರೆ. ಅಲ್ಲದೇ ಜಾನುವಾರುಗಳನ್ನ ಸಹ ಮೇಯಿಸಲು ಹೋಗುತ್ತಾರೆ. ಮೊಸಳೆ ಆಹಾರ ಅರಸಿಕೊಂಡು ನದಿಯ ದಡಕ್ಕೆ ಬಂದಿದ್ದು, ಸುತ್ತಮುತ್ತಲಿನ ಜಮೀನಿನ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಮೊಸಳೆ ಕಂಡು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರ ಸೆರೆ ಹಿಡಿದ್ದಾರೆ.

ರಾಯಚೂರು: ತಾಲೂಕಿನ ಶಕ್ತಿನಗರ ಹೈದರಾಬಾದ್-ರಾಯಚೂರು ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯ ಬಲ ಭಾಗದಲ್ಲಿ ನೂರಾರು ಕಿಲೋ ಮೀಟರ್ ಉದ್ದದಷ್ಟು ಕೃಷ್ಣಾ ನದಿ ಹರಿಯುತ್ತಿದ್ದು, ಇಂದು ಶಕ್ತಿನಗರದ 2ನೇ ಕ್ರಾಸ್ ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿ ತೀರದಲ್ಲಿ ಹೊಲ-ಗದ್ದೆಗಳಿದ್ದು, ಅಲ್ಲಿನ ರೈತರು ವ್ಯವಸಾಯ ಚಟುವಟಿಕೆಗಳಿಗೆ ತೊಡಗುತ್ತಾರೆ. ಅಲ್ಲದೇ ಜಾನುವಾರುಗಳನ್ನ ಸಹ ಮೇಯಿಸಲು ಹೋಗುತ್ತಾರೆ. ಮೊಸಳೆ ಆಹಾರ ಅರಸಿಕೊಂಡು ನದಿಯ ದಡಕ್ಕೆ ಬಂದಿದ್ದು, ಸುತ್ತಮುತ್ತಲಿನ ಜಮೀನಿನ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಮೊಸಳೆ ಕಂಡು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರ ಸೆರೆ ಹಿಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.