ETV Bharat / state

ಭದ್ರತಾ ವೈಫಲ್ಯ ಆರೋಪ: ಯರಗೇರಾ ಸಿಪಿಐ ಅಮಾನತು ಆದೇಶ ವಾಪಸ್ - undefined

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಸಮಯದಲ್ಲಿ ಭದ್ರತಾ ವೈಫಲ್ಯವಾಗಿದೆ ಎಂಬ ಆರೋಪದಡಿ ಸಿಪಿಐ ದತ್ತಾತ್ರೇಯ ಕಾರ್ನಾಡ್​ರನ್ನು ಅಮಾನತು ಮಾಡಲಾಗಿತ್ತು. ಈಗ ಆಮಾನತು ಆದೇಶವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಿಪಿಐ
author img

By

Published : Jul 2, 2019, 12:04 PM IST

Updated : Jul 2, 2019, 4:12 PM IST

ರಾಯಚೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಡೆಸಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಭದ್ರತಾ ವೈಫಲ್ಯವಾಗಿದೆ ಎಂಬ ಆರೋಪದಡಿ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದ ಆದೇಶವನ್ನು ಪೊಲೀಸ್​ ಇಲಾಖೆ ಹಿಂಪಡೆದಿದೆ.

ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅಮಾನತು ಆದೇಶವನ್ನ ಹಿಂಪಡೆದುಕೊಂಡು, ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದ್ರೆ ಅವರ ವಿರುದ್ಧ ವಿಚಾರಣೆ ಮುಂದುವರಿಸಲಾಗುವುದು ಎಂದು ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ಇನ್ನು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಾರಿಗೆ ಬಸ್​ನಲ್ಲಿ ತೆರಳುವ ವೇಳೆ ರಾಯಚೂರು ಹೊರವಲಯದ ಯರಮರಸ್ ಬಳಿ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮತ್ತು ತುಂಗಭದ್ರಾ ಹಂಗಾಮಿ ನೌಕರರು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಭದ್ರತಾ ವೈಫಲ್ಯ ಆಗಿದೆ ಎಂದು ರಾಯಚೂರು ಗ್ರಾಮೀಣ ಠಾಣಾ ಪಿಎಸ್ಐ ನಿಂಗಪ್ಪ ಮತ್ತು ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಈ ಇಬ್ಬರ ಪೈಕಿ ಸಿಪಿಐಯವರ ಸಂಸ್ಪೆಂಡ್ ಆದೇಶ ಹಿಂಪಡೆದಿದ್ದರೆ, ಪಿಎಸ್ ಐ ನಿಂಗಪ್ಪ ಅವರ ಅಮಾನತು ಆದೇಶವನ್ನ ಮುಂದುವರಿಸಲಾಗಿದೆ. ಸಿಪಿಐ ಅಮಾನತುಗೊಳಿಸಿದ ಕ್ರಮವನ್ನು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೆ ಆದೇಶ ರದ್ದುಪಡಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

ರಾಯಚೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಡೆಸಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಭದ್ರತಾ ವೈಫಲ್ಯವಾಗಿದೆ ಎಂಬ ಆರೋಪದಡಿ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದ ಆದೇಶವನ್ನು ಪೊಲೀಸ್​ ಇಲಾಖೆ ಹಿಂಪಡೆದಿದೆ.

ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅಮಾನತು ಆದೇಶವನ್ನ ಹಿಂಪಡೆದುಕೊಂಡು, ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದ್ರೆ ಅವರ ವಿರುದ್ಧ ವಿಚಾರಣೆ ಮುಂದುವರಿಸಲಾಗುವುದು ಎಂದು ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ಇನ್ನು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಾರಿಗೆ ಬಸ್​ನಲ್ಲಿ ತೆರಳುವ ವೇಳೆ ರಾಯಚೂರು ಹೊರವಲಯದ ಯರಮರಸ್ ಬಳಿ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮತ್ತು ತುಂಗಭದ್ರಾ ಹಂಗಾಮಿ ನೌಕರರು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಭದ್ರತಾ ವೈಫಲ್ಯ ಆಗಿದೆ ಎಂದು ರಾಯಚೂರು ಗ್ರಾಮೀಣ ಠಾಣಾ ಪಿಎಸ್ಐ ನಿಂಗಪ್ಪ ಮತ್ತು ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಈ ಇಬ್ಬರ ಪೈಕಿ ಸಿಪಿಐಯವರ ಸಂಸ್ಪೆಂಡ್ ಆದೇಶ ಹಿಂಪಡೆದಿದ್ದರೆ, ಪಿಎಸ್ ಐ ನಿಂಗಪ್ಪ ಅವರ ಅಮಾನತು ಆದೇಶವನ್ನ ಮುಂದುವರಿಸಲಾಗಿದೆ. ಸಿಪಿಐ ಅಮಾನತುಗೊಳಿಸಿದ ಕ್ರಮವನ್ನು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೆ ಆದೇಶ ರದ್ದುಪಡಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

Intro:ಸ್ಲಗ್: ಸಿಪಿಐ ಅಮಾನತು ಆದೇಶ ವಾಪಸ್
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 02-೦7-2019
ಸ್ಥಳ: ರಾಯಚೂರು
ಆಂಕರ್: ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಯಚೂರು ಜಿಲ್ಲೆಗೆ ಭದ್ರತಾ ವೈಫ್ಯಲ ಹಿನ್ನಲೆಯಿಂದಾಗಿ ಅಮಾನತುಗೊಂಡಿದ್ದ ಸಿಪಿಐ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. Body:ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಡ್ ಅಮಾನುತು ಆದೇಶವನ್ನ ಹಿಂಪಡೆದುಕೊಂಡು, ಮರಳು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಜತೆಗೆ ಅವರ ಮೇಲೆ ವಿಚಾರಣೆ ಸಹ ಮುಂದೆರೆಸುವುದಾಗಿ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ. ಇನ್ನು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಾರಿಗೆ ಬಸ್ ನಲ್ಲಿ ತೆರಳುವ ವೇಳೆ ರಾಯಚೂರು ಹೊರವಲಯದ ಯರಮರಸ್ ಬಳಿ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮತ್ತು ತುಂಗಭದ್ರಾ ಹಂಗಾಮಿ ಗುತ್ತಿಗೆ ನೌಕರರು ಸಿಎಂ ಬಸ್ ತೆರಳುತ್ತಿದ್ದ ಬಸ್ ತಡೆದು ಪ್ರತಿಭಟನೆ ನಡೆಸಿದ್ರು. ಹೀಗಾಗಿ ಭದ್ರತಾ ವೈಫ್ಯಲ ಹಿನ್ನಲೆಯಲ್ಲಿ ರಾಯಚೂರು ಗ್ರಾಮೀಣ ಪಿಎಸ್ ಯ ನಿಂಗಪ್ಪ ಮತ್ತು ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಡ್ ಅಮಾನತುಗೊಳಿಸಲಾಗಿತ್ತು.Conclusion:ಆದ್ರೆ ಈ ಇಬ್ಬರ ಪೈಕಿ ಸಿಪಿಐಯವರನ್ನ ಸಂಸ್ಪೇಡ್ ಆದೇಶ ಹಿಂಪಡೆದು, ಮರಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪಿಎಸ್ ಐ ನಿಂಗಪ್ಪ ಅಮಾನತು ಆದೇಶವನ್ನ ಮುಂದುರವೆಸಲಾಗಿದೆ. ಇನ್ನು ಸಿಪಿಐ ಅಮಾನತುಗೊಳಿಸಿರುವುದಕ್ಕೆ ದಲಿತ ಸಂಘಟನೆಗಳು ತೀವ್ರ ಖಂಡಿಸಿ, ಆದೇಶ ರದ್ದುಪಡಿಸುವಂತೆ ಒತ್ತಾಯಿಸಲಾಗಿತ್ತು.

Last Updated : Jul 2, 2019, 4:12 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.