ETV Bharat / state

ಪೋಷಕರಿಂದಲೇ ಬಾಲಕಿಗೆ ಮದುವೆ ನಿಶ್ಚಯ: ಬಾಲ್ಯ ವಿವಾಹಕ್ಕೆ ಅಧಿಕಾರಿಗಳಿಂದ ಬಿತ್ತು ಬ್ರೇಕ್​ - undefined

ಅಪ್ರಾಪ್ತ ವಯಸ್ಸಿನ ಪುತ್ರಿಗೆ ಪೋಷಕರೇ ವಿವಾಹ ನಿಶ್ಚಯಿಸಿದ್ದರು. ಆದ್ರೆ ಸಿಡಿಪಿಒ ಹಾಗೂ ಲಿಂಗಸುಗೂರು ಪೊಲೀಸರು ಈ ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಡದು ಮುಚ್ಚಳಿಕೆ ಬರೆಸಿಕೊಂಡ ಅಧಿಕಾರಿಗಳು
author img

By

Published : May 27, 2019, 7:25 PM IST

ರಾಯಚೂರು: ಇತ್ತೀಚೆಗಷ್ಟೇ ಎಸ್​ಎಸ್ಎಲ್​ಸಿ ಮುಗಿಸಿದ್ದ ಅಪ್ರಾಪ್ತ ವಯಸ್ಸಿನ ಮಗಳನ್ನು ಪೋಷಕರೇ ವಿವಾಹ ಮಾಡಲು ನಿಶ್ಚಯಿಸಿದ್ದರು. ಆದ್ರೆ ಪೋಷಕರನ್ನು ತಡೆದ ಸಿಡಿಪಿಒ ಹಾಗೂ ಲಿಂಗಸುಗೂರು ಪೊಲೀಸರು ಬಾಲಕಿಯ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

ಲಿಂಗಸುಗೂರು ತಾಲೂಕಿನ‌ ಕಾಳಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ಮದುವೆ ಮಾಡಲು ನಿಶ್ಚಯಿಸಿದ್ದನ್ನು ಖಚಿತಪಡಿಸಿಕೊಂಡ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಬಾಲ್ಯ ವಿವಾಹ ತಡೆದಿದ್ದಾರೆ.

child marriage preparation
ತಂದೆ ಚೆನ್ನಬಸ್ಸಪ್ಪ ಅವರಿಂದ ಮುಚ್ಚಳಿಕೆ ಬರೆಸಿಕೊಂಡ ಎಎಸ್ಐ ಗದ್ದೆಪ್ಪ

ಬಾಲಕಿಯ ವಿವಾಹದ ವಿಷಯವನ್ನು ಖಚಿತಪಡಿಸಿಕೊಂಡ ಸಿಡಿಪಿಒ ಅಧಿಕಾರಿಗಳು ಹಾಗೂ ಲಿಂಗಸುಗೂರು ಪೊಲೀಸ್ ಠಾಣೆಯ ಎಎಸ್ಐ ಗದ್ದೆಪ್ಪ ಅವರು ಧಿಡೀರ್​​​ ಭೇಟಿ ನೀಡಿ ಪೋಷಕರಿಗೆ ಬೆವರಿಳಿಸಿದ್ದಾರೆ. ಅಲ್ಲದೆ, ಸದ್ಯ ವಿವಾಹವನ್ನು ನಿಲ್ಲಿಸಿದ ಎಎಸ್ಐ ಗದ್ದೆಪ್ಪ ಅವರು ಬಾಲ್ಯ ವಿವಾಹ ಕಾನೂನು ಪ್ರಕಾರ ತಪ್ಪು ಅನ್ನೋದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ರಾಯಚೂರು: ಇತ್ತೀಚೆಗಷ್ಟೇ ಎಸ್​ಎಸ್ಎಲ್​ಸಿ ಮುಗಿಸಿದ್ದ ಅಪ್ರಾಪ್ತ ವಯಸ್ಸಿನ ಮಗಳನ್ನು ಪೋಷಕರೇ ವಿವಾಹ ಮಾಡಲು ನಿಶ್ಚಯಿಸಿದ್ದರು. ಆದ್ರೆ ಪೋಷಕರನ್ನು ತಡೆದ ಸಿಡಿಪಿಒ ಹಾಗೂ ಲಿಂಗಸುಗೂರು ಪೊಲೀಸರು ಬಾಲಕಿಯ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

ಲಿಂಗಸುಗೂರು ತಾಲೂಕಿನ‌ ಕಾಳಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ಮದುವೆ ಮಾಡಲು ನಿಶ್ಚಯಿಸಿದ್ದನ್ನು ಖಚಿತಪಡಿಸಿಕೊಂಡ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಬಾಲ್ಯ ವಿವಾಹ ತಡೆದಿದ್ದಾರೆ.

child marriage preparation
ತಂದೆ ಚೆನ್ನಬಸ್ಸಪ್ಪ ಅವರಿಂದ ಮುಚ್ಚಳಿಕೆ ಬರೆಸಿಕೊಂಡ ಎಎಸ್ಐ ಗದ್ದೆಪ್ಪ

ಬಾಲಕಿಯ ವಿವಾಹದ ವಿಷಯವನ್ನು ಖಚಿತಪಡಿಸಿಕೊಂಡ ಸಿಡಿಪಿಒ ಅಧಿಕಾರಿಗಳು ಹಾಗೂ ಲಿಂಗಸುಗೂರು ಪೊಲೀಸ್ ಠಾಣೆಯ ಎಎಸ್ಐ ಗದ್ದೆಪ್ಪ ಅವರು ಧಿಡೀರ್​​​ ಭೇಟಿ ನೀಡಿ ಪೋಷಕರಿಗೆ ಬೆವರಿಳಿಸಿದ್ದಾರೆ. ಅಲ್ಲದೆ, ಸದ್ಯ ವಿವಾಹವನ್ನು ನಿಲ್ಲಿಸಿದ ಎಎಸ್ಐ ಗದ್ದೆಪ್ಪ ಅವರು ಬಾಲ್ಯ ವಿವಾಹ ಕಾನೂನು ಪ್ರಕಾರ ತಪ್ಪು ಅನ್ನೋದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಲಿಂಗಸೂಗೂರಿನಲ್ಲಿ ಕೊರಳಿಗೆ ಬೀಳಬೇಕಿದ್ದ ತಾಳಿ;  ಅಧಿಕಾರಿಗಳಿಂದ ದಾಳಿ  ಬಾಲಕಿಯ ರಕ್ಷಣೆ
ರಾಯಚೂರು. ಮೇ.27
ಜಿಲ್ಲೆಯ ಲಿಂಗಸುಗೂರು ತಾಲೂಕಿನ‌ ಕಾಳಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ನಡೆಸಲು ತೀರ್ಮಾನಿಸಿದ್ದನ್ನು ಖಚಿತ  ಮೇರೆಗೆ  ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಗಮಿಸಿ   ಬಾಲ್ಯ ವಿವಾಹ ತಡೆದ ಘಟನೆ ಬೆಳಕಿಗೆ ಬಂದಿದೆ.
ಕಾಳಪುರ ಗ್ರಾಮದ ಚನ್ನಬಸ್ಸಪ್ಪ ಎಂಬುವರು ತಮ್ಮ ಸ್ವಾಗ್ರಾಮದಲ್ಲಿ  ಎಸ್ಎಸ್ಎಲ್ಸಿ ಮುಗಿಸಿದ  ಮಗಳನ್ನು ವಿವಾಹ ಮಾಡಲು ನಿಶ್ಚಯಿಸಿದ್ದರು  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಡಿಪಿಓ ಹಾಗೂ ಲಿಂಗಸುಗೂರು ಪೋಲೀಸ್ ಠಾಣೆಯ ಎಎಸ್ಐ ಗದ್ದೆಪ್ಪ ಅವರು ಬಾಲ್ಯ ವಿವಾಹದ ಕುರಿತು ಮನವರಿಕೆ ಮಾಡಿಕೊಟ್ಟು ಬಾಲ್ಯ ವಿವಾಹ ತಡೆದು ತಂದೆ ಚೆನ್ನಬಸ್ಸಪ್ಪ ಅವರಿಂದ ಮುಚ್ಚಳಿಕೆ ಬರೆದುಕೊಂಡರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.