ETV Bharat / state

ಮುಖ್ಯಮಂತ್ರಿಗೆ ಮಾನಸಿಕ ಸ್ಥಿಮಿತ ಇಲ್ಲ: ಶಾಸಕ ನಾಗನಗೌಡ - undefined

ರಾಯಚೂರು ಜಿಲ್ಲೆ ರಾಮದುರ್ಗ ತಾಲೂಕಿನ ಕರೇಗುಡ್ಡದಲ್ಲಿ ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ. ಅವರಿಗೆ ಮನವಿ ಸಲ್ಲಿಸಲು ಹೊರಟಿದ್ದ ಬಿಜೆಪಿ ಶಾಸಕ ಶಿವನಗೌಡ ನಾಯಕ ನೇತೃತ್ವದ ಪಾದಯಾತ್ರೆಯಲ್ಲಿ ಶಾಸಕ ಸೇರಿ ಹಲವರನ್ನು ಬಂಧಿಸಲಾಗಿದೆ.

ಪೊಲೀಸರ ನಿಬಂಧನೆಗೆ ಒಪ್ಪದ ಶಾಸಕ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು
author img

By

Published : Jun 26, 2019, 7:41 PM IST

ರಾಯಚೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಜನರ ಕುಂದು ಕೊರತೆ ಕೇಳುವುದಾಗಿ ಗ್ರಾಮ ವಾಸ್ತವ್ಯ ಮಾಡುತ್ತೇವೆ ಎಂದು ಮನವಿ ಕೊಡಲು ಹೋದವರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸುತ್ತಾರೆ ಎಂದು ಏಕವಚನದಲ್ಲಿಯೇ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಶಿವನಗೌಡ ನಾಯಕ ಕಿಡಿಕಾರಿದ್ದಾರೆ.

ಗ್ರಾಮ ವಾಸ್ತವ್ಯ ಕೈಗೊಂಡ ಸಿಎಂ ಮೇಲೆ ಹರಿಹಾಯ್ದ ಬಿಜೆಪಿ ಶಾಸಕ ಶಿವನಗೌಡ ನಾಯಕ

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಕೈಗೊಂಡ ಕರೇಗುಡ್ಡದವರೆಗೆ ಜನರ ಕುಂದು ಕೊರತೆ ತೆಗೆದುಕೊಂಡು ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಬುಧವಾರ ಪಾದಯಾತ್ರೆ ಕೈಗೊಳ್ಳಲಾಗಿತ್ತು.

ತಂದೆ, ಮಕ್ಕಳು ಸೇರಿ ರಾಜ್ಯದಲ್ಲಿ ತುಂಡು ಗುತ್ತಿಗೆ ನೀಡಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆದವರು ಸಾರ್ವಜನಿಕರ ಸಮಸ್ಯೆ ಆಲಿಸುವ ಬದಲು ಅವರನ್ನೇ ನಿಂದಿಸುವುದು ಯಾವ ನ್ಯಾಯವೆಂದು ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನು ಪದೇ ಪದೆ ಏಕ ವಚನದಿಂದಲೇ ಶಾಸಕ ಶಿವನಗೌಡ ಕುಟುಕಿದರು.

ಗ್ರಾಮದಿಂದ 6 ಕಿ.ಮೀ. ದೂರದ ಬಸವಣ್ಣ ಕ್ಯಾಂಪ್​ ಹತ್ತಿರದ ಹೊಲದಲ್ಲಿ ಶಾಸಕರೊಂದಿಗೆ ಪೊಲೀಸರು ಮಾತನಾಡಿ, 10 ಜನರಿಗೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದೇ ಗ್ರಾಮಸ್ಥರು, ಕಾರ್ಯಕರ್ತರು ಮುನ್ನುಗ್ಗಿದ್ದರಿಂದ ಶಾಸಕರನ್ನು ಒಳಗೊಂಡಂತೆ ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.

ಜನರ ಸಮಸ್ಯೆಗಳನ್ನು ಕೇಳಲು ಬಂದಿರುವ ಸಿಎಂ, ಮಾರ್ಗ ಮಧ್ಯೆ ನಮ್ಮನ್ನು ಬಂಧಿಸಿರುವುದು ಖಂಡನೀಯ. ಬಲ್ಲಟಗಿಯಿಂದ ಮುಖ್ಯಮಂತ್ರಿಗಳ ಬಳಿ ಕುಂದು ಕೊರತೆ ಹೇಳಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಹೊರಟಿದ್ದೆವು ಎಂದು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಜನರ ಕುಂದು ಕೊರತೆ ಕೇಳುವುದಾಗಿ ಗ್ರಾಮ ವಾಸ್ತವ್ಯ ಮಾಡುತ್ತೇವೆ ಎಂದು ಮನವಿ ಕೊಡಲು ಹೋದವರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸುತ್ತಾರೆ ಎಂದು ಏಕವಚನದಲ್ಲಿಯೇ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಶಿವನಗೌಡ ನಾಯಕ ಕಿಡಿಕಾರಿದ್ದಾರೆ.

ಗ್ರಾಮ ವಾಸ್ತವ್ಯ ಕೈಗೊಂಡ ಸಿಎಂ ಮೇಲೆ ಹರಿಹಾಯ್ದ ಬಿಜೆಪಿ ಶಾಸಕ ಶಿವನಗೌಡ ನಾಯಕ

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಕೈಗೊಂಡ ಕರೇಗುಡ್ಡದವರೆಗೆ ಜನರ ಕುಂದು ಕೊರತೆ ತೆಗೆದುಕೊಂಡು ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಬುಧವಾರ ಪಾದಯಾತ್ರೆ ಕೈಗೊಳ್ಳಲಾಗಿತ್ತು.

ತಂದೆ, ಮಕ್ಕಳು ಸೇರಿ ರಾಜ್ಯದಲ್ಲಿ ತುಂಡು ಗುತ್ತಿಗೆ ನೀಡಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆದವರು ಸಾರ್ವಜನಿಕರ ಸಮಸ್ಯೆ ಆಲಿಸುವ ಬದಲು ಅವರನ್ನೇ ನಿಂದಿಸುವುದು ಯಾವ ನ್ಯಾಯವೆಂದು ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನು ಪದೇ ಪದೆ ಏಕ ವಚನದಿಂದಲೇ ಶಾಸಕ ಶಿವನಗೌಡ ಕುಟುಕಿದರು.

ಗ್ರಾಮದಿಂದ 6 ಕಿ.ಮೀ. ದೂರದ ಬಸವಣ್ಣ ಕ್ಯಾಂಪ್​ ಹತ್ತಿರದ ಹೊಲದಲ್ಲಿ ಶಾಸಕರೊಂದಿಗೆ ಪೊಲೀಸರು ಮಾತನಾಡಿ, 10 ಜನರಿಗೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದೇ ಗ್ರಾಮಸ್ಥರು, ಕಾರ್ಯಕರ್ತರು ಮುನ್ನುಗ್ಗಿದ್ದರಿಂದ ಶಾಸಕರನ್ನು ಒಳಗೊಂಡಂತೆ ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.

ಜನರ ಸಮಸ್ಯೆಗಳನ್ನು ಕೇಳಲು ಬಂದಿರುವ ಸಿಎಂ, ಮಾರ್ಗ ಮಧ್ಯೆ ನಮ್ಮನ್ನು ಬಂಧಿಸಿರುವುದು ಖಂಡನೀಯ. ಬಲ್ಲಟಗಿಯಿಂದ ಮುಖ್ಯಮಂತ್ರಿಗಳ ಬಳಿ ಕುಂದು ಕೊರತೆ ಹೇಳಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಹೊರಟಿದ್ದೆವು ಎಂದು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Intro:ಅಪ್ಡೆಟ್ ಸುದ್ದಿ.
ರಾಯಚೂರು ಜೂ.26
ದೇವದುರ್ಗ ತಾಲೂಕಿನ ಗುಗಲ್ನಿಂದ ಸಿ.ಎಂ ಕುಮಾರಸ್ವಾಮಿ ವಾಸ್ತವ್ಯ ಮಾಡಿದ ಕರೆಗುಡ್ಡದ ವರೆಗೆ ಪಾದಯಾತ್ರೆಯ ಅಂಗವಾಗಿ ಇಂದು ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದ ಪಾದಯಾತ್ರೆ ಹಮ್ಮಿಕೊಂಡಿದ್ದು ಮಾರ್ಗ ಮಧ್ಯೆ ಶಾಸಕರನ್ನು ಬಂದಿಸಲಾಯಿತು.
ಬಸವಣ್ಣ ಕ್ಯಾಂಪ್ ಹತ್ತಿರ ಕರೆಗುಡ್ಡ ಗ್ರಾಮದಿಂದ 6 ಕಿ‌ಮೀ ಸಮೀಪದ ಹೊಲದಲ್ಲಿ ಮಾತುಕತೆ ನಡೆಸಲಾಯಿತು ಆದರೆ ಶಾಸಕರು ಸೇರಿ 10 ಜನರನ್ನು ಮಾತ್ರ ಮುಖ್ಯಮಂತ್ರಿಗಳು ಭೇಟಿಯಾಗಲು ಅವಕಾಶ ನೀಡುತ್ತೆವೆ ಇಲ್ಲವಾದರೆ ಬಂಧಿಸಲಾಗುವುದು ಎಂದು ಹೇಳಲಾಯಿತು ಇದರಿಂದ ನಮ್ಮ ನ್ಯಾಯಾಯುತ ಬೇಡಿಕೆ ಅಭಿವೃದ್ಧಿ ಕಾಮಗಾರಿಗಳ ಮನವಿ ಸಲ್ಲುಸಲು ಸಿ.ಎಂ ಇಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು .
ಜನರ ಸಮಸ್ಯೆಗಳನ್ನು ಕೇಳಲು ಬಂದಿರುವೆ ಎಂದು ಹೇಳಿರುವ ಅವರು ನಮ್ಮನ್ನು ಏಕೆ ತಡೆಯುತಿದ್ದಾರೆ ಎಂದು ಕಿಡಿಕಾರಿದರು.
ಬಲ್ಲಟಗಿಯಿಂದ ಪಾದಯಾತ್ರೆ ಮಾಡಿದ್ದು ಮಾರ್ಗಮಧ್ಯೆ ಅವರನ್ನು ತಡೆದು ಬಂದಿಸಲಾಯಿತು.Body:ನಡೆಸಲಾಯಿತು ಆದರೆ ಶಾಸಕರು ಸೇರಿ 10 ಜನರನ್ನು ಮಾತ್ರ ಮುಖ್ಯಮಂತ್ರಿಗಳು ಭೇಟಿಯಾಗಲು ಅವಕಾಶ ನೀಡುತ್ತೆವೆ ಇಲ್ಲವಾದರೆ ಬಂಧಿಸಲಾಗುವುದು ಎಂದು ಹೇಳಲಾಯಿತು ಇದರಿಂದ ನಮ್ಮ ನ್ಯಾಯಾಯುತ ಬೇಡಿಕೆ ಅಭಿವೃದ್ಧಿ ಕಾಮಗಾರಿಗಳ ಮನವಿ ಸಲ್ಲುಸಲು ಸಿ.ಎಂ ಇಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು .
ಜನರ ಸಮಸ್ಯೆಗಳನ್ನು ಕೇಳಲು ಬಂದಿರುವೆ ಎಂದು ಹೇಳಿರುವ ಅವರು ನಮ್ಮನ್ನು ಏಕೆ ತಡೆಯುತಿದ್ದಾರೆ ಎಂದು ಕಿಡಿಕಾರಿದರು.
ಬಲ್ಲಟಗಿಯಿಂದ ಪಾದಯಾತ್ರೆ ಮಾಡಿದ್ದು ಮಾರ್ಗಮಧ್ಯೆ ಅವರನ್ನು ತಡೆದು ಬಂದಿಸಲಾಯಿತುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.