ರಾಯಚೂರು: ತಾಲೂಕಿನ ಮನ್ಸಲಾಪೂರ ಗ್ರಾಮದ ಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಗ್ರಾಮದ ನಾಗರಾಜ ಎಂಬ ಯುವಕ ಮೊಸಳೆಯನ್ನು ನೋಡಿದ್ದು, ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
ಮೊಸಳೆ ಕಂಡ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮೊಸಳೆ ಇರುವುದನ್ನು ಖಚಿತ ಪಡಿಸಿದ್ದಾರೆ. ಗ್ರಾಮದಲ್ಲಿ ಇದೀಗ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ಇರುವುದರಿಂದ ಜನರು ಕೆರೆಯ ಹತ್ತಿರದ ರಸ್ತೆಯ ಮೂಲಕವೇ ತೆರಳುತ್ತಾರೆ. ಈ ಹಿನ್ನೆಲೆ ಕೆರೆಯ ಸುತ್ತಮುತ್ತ ಜನರು ಸುಳಿಯದಂತೆ ಸೂಚನಾ ಫಲಕ ಹಾಕಲಾಗಿದ್ದು, ಜೊತೆಗೆ ಡಂಗೂರ ಸಾರಿ ಕೆರೆಯ ಹತ್ತಿರ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.