ETV Bharat / state

ಸ್ವಲ್ಪ ಹೊತ್ತು ನೋಡಿಕೊಳ್ಳಿ ಎಂದು ಯುವಕನಿಗೆ 9 ತಿಂಗಳ ಮಗು ಕೊಟ್ಟು ಮಹಿಳೆ ಪರಾರಿ!.. ಮುಂದೇನಾಯ್ತು? - child rescued by youth

ಮಹಿಳೆಯೊಬ್ಬಳು 9 ತಿಂಗಳ ಮಗುವನ್ನು ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಬಳಿಕ ಕಂದಮ್ಮನನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ.

woman-escaped-after-giving-child-to-youth-in-raichur
ಯುವಕನಿಗೆ 9 ತಿಂಗಳ ಮಗು ಕೊಟ್ಟು ಮಹಿಳೆ ಪರಾರಿ
author img

By

Published : May 9, 2022, 9:50 PM IST

Updated : May 9, 2022, 10:25 PM IST

ಮೈಸೂರು: ಮಹಿಳೆಯೊಬ್ಬರು 9 ತಿಂಗಳ ಮಗುವನ್ನು ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿದ್ದು, ಬಳಿಕ ಯುವಕ ಕಂದಮ್ಮನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ. ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ತಾಯಿಯಿಂದ ಬೇರ್ಪಟ್ಟ ಮಗುವನ್ನು ಆರೈಕೆ ಮಾಡಿ, ಬಾಲಮಂದಿರಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಯುವಕ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದ. ಕೆಲಸ ಮುಗಿಸಿ ಮೈಸೂರಿಗೆ ಹಿಂದಿರುಗಲೆಂದು ರಾಯಚೂರಿನ ಬಸ್ ನಿಲ್ದಾಣದಲ್ಲಿ ಬಸ್​​ಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಆತನ ಬಳಿ ಬಂದ ಮಧ್ಯವಯಸ್ಕ ಮಹಿಳೆಯೊಬ್ಬಳು ತನ್ನ ಬಳಿಯಿದ್ದ 9 ತಿಂಗಳ ಮಗುವನ್ನು ಆತನ ಕೈಗಿಟ್ಟು ಸ್ವಲ್ಪ ಹೊತ್ತು ನೋಡಿಕೊಳ್ಳಿ, ವಾಪಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಾಳೆ.

ಆದರೆ ಎರಡು-ಮೂರು ಗಂಟೆ ಕಳೆದರೂ ಕೂಡ ಆಕೆ ವಾಪಸ್ ಬಂದಿರಲಿಲ್ಲ. ಹೀಗಾಗಿ ರಘು ಮಗುವಿನ ಸಮೇತ ಮೈಸೂರಿಗೆ ಬಂದಿದ್ದಾನೆ. ಲಷ್ಕರ್ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದು, ಇನ್ಸ್​​ಪೆಕ್ಟರ್ ಸಂತೋಷ್, ರಘು ಬಳಿ ಸಂಪೂರ್ಣ ಮಾಹಿತಿ ಪಡೆದು ರಾಯಚೂರಿನ ಬಸ್​​ ನಿಲ್ದಾಣ ವ್ಯಾಪ್ತಿಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೂ ಮಹಿಳೆಯ ಮಾಹಿತಿ ಪತ್ತೆಯಾಗಿಲ್ಲ. ಆದ್ದರಿಂದ ಠಾಣೆಯ ಸಿಬ್ಬಂದಿ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಒಂದು ಸುಳ್ಳು, ಸಾವು ಮತ್ತು ಡಿಎನ್​ಎ.. 9 ತಿಂಗಳ ನಂತ್ರ ಕಳ್ಳತನ ಪ್ರಕರಣದ ಆರೋಪಿ ಅರೆಸ್ಟ್

ಮೈಸೂರು: ಮಹಿಳೆಯೊಬ್ಬರು 9 ತಿಂಗಳ ಮಗುವನ್ನು ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿದ್ದು, ಬಳಿಕ ಯುವಕ ಕಂದಮ್ಮನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ. ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ತಾಯಿಯಿಂದ ಬೇರ್ಪಟ್ಟ ಮಗುವನ್ನು ಆರೈಕೆ ಮಾಡಿ, ಬಾಲಮಂದಿರಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಯುವಕ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದ. ಕೆಲಸ ಮುಗಿಸಿ ಮೈಸೂರಿಗೆ ಹಿಂದಿರುಗಲೆಂದು ರಾಯಚೂರಿನ ಬಸ್ ನಿಲ್ದಾಣದಲ್ಲಿ ಬಸ್​​ಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಆತನ ಬಳಿ ಬಂದ ಮಧ್ಯವಯಸ್ಕ ಮಹಿಳೆಯೊಬ್ಬಳು ತನ್ನ ಬಳಿಯಿದ್ದ 9 ತಿಂಗಳ ಮಗುವನ್ನು ಆತನ ಕೈಗಿಟ್ಟು ಸ್ವಲ್ಪ ಹೊತ್ತು ನೋಡಿಕೊಳ್ಳಿ, ವಾಪಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಾಳೆ.

ಆದರೆ ಎರಡು-ಮೂರು ಗಂಟೆ ಕಳೆದರೂ ಕೂಡ ಆಕೆ ವಾಪಸ್ ಬಂದಿರಲಿಲ್ಲ. ಹೀಗಾಗಿ ರಘು ಮಗುವಿನ ಸಮೇತ ಮೈಸೂರಿಗೆ ಬಂದಿದ್ದಾನೆ. ಲಷ್ಕರ್ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದು, ಇನ್ಸ್​​ಪೆಕ್ಟರ್ ಸಂತೋಷ್, ರಘು ಬಳಿ ಸಂಪೂರ್ಣ ಮಾಹಿತಿ ಪಡೆದು ರಾಯಚೂರಿನ ಬಸ್​​ ನಿಲ್ದಾಣ ವ್ಯಾಪ್ತಿಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೂ ಮಹಿಳೆಯ ಮಾಹಿತಿ ಪತ್ತೆಯಾಗಿಲ್ಲ. ಆದ್ದರಿಂದ ಠಾಣೆಯ ಸಿಬ್ಬಂದಿ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಒಂದು ಸುಳ್ಳು, ಸಾವು ಮತ್ತು ಡಿಎನ್​ಎ.. 9 ತಿಂಗಳ ನಂತ್ರ ಕಳ್ಳತನ ಪ್ರಕರಣದ ಆರೋಪಿ ಅರೆಸ್ಟ್

Last Updated : May 9, 2022, 10:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.