ETV Bharat / state

ಬೂದನೂರು ಗ್ರಾಮಕ್ಕೆ ನುಗ್ಗಿದ ಆನೆ: ಅರಣ್ಯ ಇಲಾಖೆ ಸಿಬ್ಬಂದಿ-ಗ್ರಾಮಸ್ಥರ ನಡುವೆ ನೂಕುನುಗ್ಗಲು - ಗನ್​ ಮುರಿದ ಹಾಕಿದ ಗ್ರಾಮಸ್ಥರು

ಹೆಚ್ ಡಿ ಕೋಟೆ ತಾಲೂಕಿನ ಕಾಡಂಚಿನ ಗ್ರಾಮ ಬೂದನೂರಿಗೆ ಆನೆಯೊಂದು ಸೋಮವಾರ ಬೆಳಗ್ಗೆ ನುಗ್ಗಿತ್ತು. ಇದನ್ನು ಓಡಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಗ್ರಾಮಸ್ಥರು ತಳ್ಳಾಟ ನಡೆಸಿರುವ ಘಟನೆ ನಡೆದಿದೆ.

Villagers Beat Forest Guards
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರ ಹಲ್ಲೆ
author img

By

Published : Sep 20, 2022, 1:30 PM IST

Updated : Sep 20, 2022, 2:05 PM IST

ಮೈಸೂರು: ಆನೆ ಓಡಿಸಲು ಬಂದ ಅರಣ್ಯ ಸಿಬ್ಬಂದಿ ಜೊತೆ ಗ್ರಾಮಸ್ಥರು‌ ತಳ್ಳಾಟ ನಡೆಸಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ‌ ಬೂದನೂರು ಗ್ರಾಮದಲ್ಲಿ ನಡೆದಿದೆ. ಸಿಬ್ಬಂದಿ ಕೈಯಲ್ಲಿದ್ದ ಬಂದೂಕು ಕಿತ್ತುಕೊಂಡು, ಅದನ್ನು ಮುರಿದು ಹಾಕಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕಾಡಂಚಿನ ಗ್ರಾಮ ಬೂದನೂರಿಗೆ ಸೋಮವಾರ ಸಲಗವೊಂದು ನುಗ್ಗಿದ್ದು, ಹಲವು ಮನೆಗಳಿಗೆ ಹಾನಿ ಮಾಡಿದೆ. ಇದನ್ನು ಓಡಿಸಲು ಬಂದಿದ್ದ ಮೇಟಿಕುಪ್ಪೆ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದರು.

ಸಿಬ್ಬಂದಿ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿ, ಬಂದೂಕು ಕಸಿದುಕೊಂಡು ಮುರಿದು ಹಾಕಿದರು. ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಓಡಿಸಲು ತಡವಾಗಿ ಬಂದರು ಎಂಬ ಕಾರಣಕ್ಕೆ ಗ್ರಾಮಸ್ಥರು ಈ ರೀತಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೆಚ್‌.ಡಿ.ಕೋಟೆ: ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ರಂಪಾಟ; ಮನೆ, ಎತ್ತಿನ ಗಾಡಿ ಜಖಂ

ಮೈಸೂರು: ಆನೆ ಓಡಿಸಲು ಬಂದ ಅರಣ್ಯ ಸಿಬ್ಬಂದಿ ಜೊತೆ ಗ್ರಾಮಸ್ಥರು‌ ತಳ್ಳಾಟ ನಡೆಸಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ‌ ಬೂದನೂರು ಗ್ರಾಮದಲ್ಲಿ ನಡೆದಿದೆ. ಸಿಬ್ಬಂದಿ ಕೈಯಲ್ಲಿದ್ದ ಬಂದೂಕು ಕಿತ್ತುಕೊಂಡು, ಅದನ್ನು ಮುರಿದು ಹಾಕಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕಾಡಂಚಿನ ಗ್ರಾಮ ಬೂದನೂರಿಗೆ ಸೋಮವಾರ ಸಲಗವೊಂದು ನುಗ್ಗಿದ್ದು, ಹಲವು ಮನೆಗಳಿಗೆ ಹಾನಿ ಮಾಡಿದೆ. ಇದನ್ನು ಓಡಿಸಲು ಬಂದಿದ್ದ ಮೇಟಿಕುಪ್ಪೆ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದರು.

ಸಿಬ್ಬಂದಿ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿ, ಬಂದೂಕು ಕಸಿದುಕೊಂಡು ಮುರಿದು ಹಾಕಿದರು. ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಓಡಿಸಲು ತಡವಾಗಿ ಬಂದರು ಎಂಬ ಕಾರಣಕ್ಕೆ ಗ್ರಾಮಸ್ಥರು ಈ ರೀತಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೆಚ್‌.ಡಿ.ಕೋಟೆ: ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ರಂಪಾಟ; ಮನೆ, ಎತ್ತಿನ ಗಾಡಿ ಜಖಂ

Last Updated : Sep 20, 2022, 2:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.