ETV Bharat / state

ಒಕ್ಕಲಿಗ ಸಮುದಾಯದ ಮುಖಂಡರು ಪ್ರಾಕ್ಟಿಕಲ್​ ಆಗಿ ಯೋಚಿಸಿ: ಸಿ.ಟಿ. ರವಿ

author img

By

Published : Sep 10, 2019, 12:53 PM IST

ನಾನೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ. ಹಾಗೇನಾದರೂ ಭಾವಿಸಿದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಒಕ್ಕಲಿಗ ಸಮುದಾಯದ ಮುಖಂಡರು ಭಾವುಕರಾಗಿ ಯೋಚನೆ ಮಾಡುವುದಕ್ಕಿಂತ ಸತ್ಯ ಏನೆಂದು ಯೋಚನೆ ಮಾಡಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ​ ಹೇಳಿದ್ದಾರೆ.

ಸಿ.ಟಿ.ರವಿ ಟಾಂಗ್

ಮೈಸೂರು: ಒಕ್ಕಲಿಗ ಸಮುದಾಯದ ಮುಖಂಡರು ಭಾವುಕರಾಗಿ ಯೋಚನೆ ಮಾಡುವುದಕ್ಕಿಂತ ಸತ್ಯ ಏನೆಂದು ಯೋಚಿಸಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮನವಿ ಮಾಡಿದ್ದಾರೆ.

ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ

ಅರಮನೆಯ ಆವರಣದಲ್ಲಿ ಮಾವುತರು ಹಾಗೂ ಕಾವಾಡಿಗರ ಉಪಹಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಡೆದಿದ್ದರೆ ಮಾತ್ರ ಭಯ ಬೀಳಬೇಕು. ಪ್ರಾಮಾಣಿಕವಾಗಿದ್ದರೆ ಏಕೆ ಭಯ? ತನಿಖೆ ಬೇಡ ಎಂದರೆ ಹೇಗೆ? ಇದರಿಂದ ಸಾಮಾನ್ಯ ಜನರಿಗೂ ಅನುಮಾನ ಬರುತ್ತದೆ. ಅಕ್ರಮ ನಡೆದ ವಿಷಯಗಳನ್ನು ತನಿಖೆ ನಡೆಸಿದರೆ ಸೇಡಿನ ರಾಜಕೀಯ ಎನ್ನುತ್ತಾರೆ ಎಂದು ಕಾಂಗ್ರೆಸಿಗರಿಗೆ ಟಾಂಗ್​ ಕೊಟ್ಟರು.

ನಾನೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ. ಹಾಗೇನಾದರೂ ಭಾವಿಸಿದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಒಕ್ಕಲಿಗ ಸುಮುದಾಯದ ಮುಖಂಡರು ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ಸತ್ಯ ಏನೆಂದು ಯೋಚಿಸಿದರೆ ಗೊತ್ತಾಗುತ್ತದೆ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ಕಾಂಗ್ರೆಸ್ ಅವರು ಸಂವಿಧಾನದ ಅಡಿಯಿರುವ ಸಂಸ್ಥೆಗಳ ಮೂಲಕ ತನಿಖೆಯಾಗಬಾರದು ಎಂದು ಹೇಳಿದರೆ ಹೇಗೆ ಎಂದು ಸಿ. ಟಿ. ರವಿ ಪ್ರಶ್ನಿಸಿದರು.

ಮೈಸೂರು: ಒಕ್ಕಲಿಗ ಸಮುದಾಯದ ಮುಖಂಡರು ಭಾವುಕರಾಗಿ ಯೋಚನೆ ಮಾಡುವುದಕ್ಕಿಂತ ಸತ್ಯ ಏನೆಂದು ಯೋಚಿಸಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮನವಿ ಮಾಡಿದ್ದಾರೆ.

ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ

ಅರಮನೆಯ ಆವರಣದಲ್ಲಿ ಮಾವುತರು ಹಾಗೂ ಕಾವಾಡಿಗರ ಉಪಹಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಡೆದಿದ್ದರೆ ಮಾತ್ರ ಭಯ ಬೀಳಬೇಕು. ಪ್ರಾಮಾಣಿಕವಾಗಿದ್ದರೆ ಏಕೆ ಭಯ? ತನಿಖೆ ಬೇಡ ಎಂದರೆ ಹೇಗೆ? ಇದರಿಂದ ಸಾಮಾನ್ಯ ಜನರಿಗೂ ಅನುಮಾನ ಬರುತ್ತದೆ. ಅಕ್ರಮ ನಡೆದ ವಿಷಯಗಳನ್ನು ತನಿಖೆ ನಡೆಸಿದರೆ ಸೇಡಿನ ರಾಜಕೀಯ ಎನ್ನುತ್ತಾರೆ ಎಂದು ಕಾಂಗ್ರೆಸಿಗರಿಗೆ ಟಾಂಗ್​ ಕೊಟ್ಟರು.

ನಾನೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ. ಹಾಗೇನಾದರೂ ಭಾವಿಸಿದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಒಕ್ಕಲಿಗ ಸುಮುದಾಯದ ಮುಖಂಡರು ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ಸತ್ಯ ಏನೆಂದು ಯೋಚಿಸಿದರೆ ಗೊತ್ತಾಗುತ್ತದೆ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ಕಾಂಗ್ರೆಸ್ ಅವರು ಸಂವಿಧಾನದ ಅಡಿಯಿರುವ ಸಂಸ್ಥೆಗಳ ಮೂಲಕ ತನಿಖೆಯಾಗಬಾರದು ಎಂದು ಹೇಳಿದರೆ ಹೇಗೆ ಎಂದು ಸಿ. ಟಿ. ರವಿ ಪ್ರಶ್ನಿಸಿದರು.

Intro:ಒಕ್ಕಲಿಗ ಸಮುದಾಯ ಮುಖಂಡರು ಎಮೊಷನಲ್ ಆಗಿ ಯೋಚನೆ ಮಾಡುವುದಕ್ಕಿಂತ ಸತ್ಯ ಏನೆಂದು ಯೋಚನೆ ಮಾಡಿ ಎಂದು ಸಚಿವ ಸಿ.ಟಿ.ರವಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.


Body:ಇಂದು ಅರಮನೆಯ ಆವರಣದಲ್ಲಿ ಮಾವುತರು ಹಾಗೂ ಕಾವಾಡಿಗರ ಉಪಹಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಸಿ.ಟಿ.ರವಿ ಭ್ರಷ್ಟಾಚಾರ ನಡೆದಿದ್ದರೆ ಮಾತ್ರ ಭಯ ಬೀಳಬೇಕು.
ಪ್ರಾಮಣಿಕ ಎಂದರೆ ಏಕೆ ಭಯ ಬೀಳಬೇಕು, ತನಿಖೆ ಬೇಡ ಎಂದರೆ ಹೇಗೆ ಇದರಿಂದ ಸಾಮಾನ್ಯ ಜನರಿಗೂ ಅನುಮಾನ ಬರುತ್ತದೆ ಎಂದು ಪೋನ್ ಟ್ಯಾಪಿಂಗ್ ತನಿಖೆಯನ್ನು ವಿರೋಧಿಸುತ್ತಿರುವವರಿಗೆ ವ್ಯಂಗ್ಯವಾಗಿ ಹೇಳಿದರು.
ಇನ್ನೂ ಆಕ್ರಮ ನಡೆದ ಆರ್.ಡಿ.ಪಿ.ಆರ್.ಐ ನಲ್ಲಿ ತನಿಖೆ ನಡೆದರೆ ಸೇಡಿನ ರಾಜಕೀಯ ಎನ್ನುತ್ತಾರೆ ಎಂದರು. ಸಿದ್ದರಾಮಯ್ಯ ಅವರ ವಾಚ್ ಹಾಗೂ ಅರ್ಕಾವತಿ ಡಿನೋಟಿಫಿಕೇಷನ್ ಬಗ್ಗೆ ನಡೆಸಿದ ತನಿಖೆಯ ಬಗ್ಗೆ ವಿವರಿಸಿದ ಅವರು ನಾನು ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವನು ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ, ಹಾಗೇನಾದರೂ ಭಾವಿಸಿದರೆ ಸಂವಿಧಾನ ಬಗೆಗಿನ ಅಪಚಾರ ಮಾಡಿದಂತೆ ಆಗುತ್ತದೆ.
ನಾನು ಒಕ್ಕಲಿಗ ಸುಮುದಾಯದ ಮುಖಂಡರಿಗರ ಹೇಳುವುದು ಏನೆಂದರೆ ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ಸತ್ಯ ಏನೆಂದು ಯೋಚನೆ ಮಾಡಿದರೆ ಗೊತ್ತಾಗುತ್ತದೆ.
ಕಾನೂನು ತನ್ನ ಕೆಲಸವನ್ನು ಮಾಡುತ್ತದೆ.
ಇನ್ನೂ ಕಾಂಗ್ರೆಸ್ ಅವರು ಸಂವಿಧಾನದ ಅಡಿಯಿರುವ ಸಂಸ್ಥೆಗಳ ಮೂಲಕ ತನಿಖೆಯಾಗಬಾರದು ಎಂದು ಹೇಳಿದರೆ ಹೇಗೆ ಎಂದು ವಾಸ್ತವವಾಗಿ ಯೋಚನೆ ಮಾಡಿ.
ನನ್ನ ಮನೆಯಲ್ಲಿ ೧೦ ಕೋಟಿ ಹಣವಿದ್ದರೆ ನಾನು ಪ್ರಾಮಾಣಿಕ ಎಂದು ಹೇಳಲು ಆಗುವುದಿಲ್ಲ, ಇದನ್ನು ತನಿಖೆ ಮಾಡಬಾರದು ಎಂದರೆ ಹೇಗೆ ಎಂದು ನಾಳೆ ಬೆಂಗಳೂರಿನಲ್ಲಿ ಒಕ್ಕಲಿಗ ಮುಖಂಡರು ಡಿಕೆಶಿ ಬಂಧನ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಒಕ್ಕಲಿಗ ಮುಖಂಡರು ಯೋಚನೆ ಮಾಡಿ ಎಂದು ಪರೋಕ್ಷವಾಗಿ ಸಿ.ಟಿ.ರವಿ ಹೇಳಿಕೆ ನೀಡಿದರು.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.