ETV Bharat / state

ಕೇಂದ್ರ ಸರ್ಕಾರ ಕರ್ನಾಟಕವನ್ನು ಗುಲಾಮರಂತೆ ನೋಡ್ತಿದೆ: ವಾಟಾಳ್ ನಾಗರಾಜ್ ಆಕ್ರೋಶ - mysore latest news

ನೆರೆ ಹಾವಳಿಯಿಂದ ತತ್ತರಿಸಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರಂತೆ ನೋಡ್ತಿದೆ ಎಂದು ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕವನ್ನು ಗುಲಾಮರಂತೆ ನೋಡ್ತಿದೆ: ವಾಟಲ್ ನಾಗರಾಜ್
author img

By

Published : Aug 11, 2019, 4:41 PM IST

ಮೈಸೂರು: ನೆರೆ ಹಾವಳಿಯಿಂದ ತತ್ತರಿಸಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರಂತೆ ನೋಡ್ತಿದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕವನ್ನು ಗುಲಾಮರಂತೆ ನೋಡ್ತಿದೆ: ವಾಟಾಳ್ ನಾಗರಾಜ್ ಆರೋಪ

ಮೈಸೂರಿನ ರೈಲ್ವೆ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮಿಳುನಾಡಿನಲ್ಲಿ ಪ್ರವಾಹ ಆಗಿದ್ದರೆ, ಅಲ್ಲಿಗೆ ಹೋಗಿ ನೋಡುತ್ತಿದ್ದರು. ಆದರೆ ಕರ್ನಾಟಕಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾವಣನಂತೆ ಕೆಲಸ ಮಾಡಲು ಹೊರಟ್ಟಿದ್ದಾರೆ. ರಾವಣನಿಗೆ 10 ತಲೆ, 20 ಕೈಗಳು ಇತ್ತು. ರಾವಣನಂತೆ ಯಡಿಯೂರಪ್ಪ ಪಾತ್ರ ಮಾಡದೇ, ಮಂತ್ರಿ ಮಂಡಲ ರಚನೆ ಮಾಡಿ ,ರಾಜ್ಯದ ವ್ಯವಸ್ಥೆ ಕಾಪಾಡಬೇಕಿದೆ ಎಂದು ಟೀಕಿಸಿದ್ರು.

ಮಂತ್ರಿಗಳು ಇಲ್ಲದೆ ತಮ್ಮ ಪಕ್ಷದ ಶಾಸಕರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿದ್ದಾರೆ. ಇದರಿಂದ ನೆರೆ ಸಂತ್ರಸ್ತರ ಕಾರ್ಯ ವಿಳಂಬವಾಗುತ್ತಿದೆ ಎಂದರು. ಮಳೆಯಿಂದ ಮೃತಪಟ್ಟವರಿಗೆ 5 ಲಕ್ಷ ಕೊಟ್ಟರೆ ಸಾಲುವುದಿಲ್ಲ, 25 ಲಕ್ಷ ನೀಡಬೇಕು.‌ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 50 ಸಾವಿರ ಕೋಟಿ ಪರಿಹಾರ ನೀಡಬೇಕು ಹಾಗೂ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಮೈಸೂರು: ನೆರೆ ಹಾವಳಿಯಿಂದ ತತ್ತರಿಸಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರಂತೆ ನೋಡ್ತಿದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕವನ್ನು ಗುಲಾಮರಂತೆ ನೋಡ್ತಿದೆ: ವಾಟಾಳ್ ನಾಗರಾಜ್ ಆರೋಪ

ಮೈಸೂರಿನ ರೈಲ್ವೆ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮಿಳುನಾಡಿನಲ್ಲಿ ಪ್ರವಾಹ ಆಗಿದ್ದರೆ, ಅಲ್ಲಿಗೆ ಹೋಗಿ ನೋಡುತ್ತಿದ್ದರು. ಆದರೆ ಕರ್ನಾಟಕಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾವಣನಂತೆ ಕೆಲಸ ಮಾಡಲು ಹೊರಟ್ಟಿದ್ದಾರೆ. ರಾವಣನಿಗೆ 10 ತಲೆ, 20 ಕೈಗಳು ಇತ್ತು. ರಾವಣನಂತೆ ಯಡಿಯೂರಪ್ಪ ಪಾತ್ರ ಮಾಡದೇ, ಮಂತ್ರಿ ಮಂಡಲ ರಚನೆ ಮಾಡಿ ,ರಾಜ್ಯದ ವ್ಯವಸ್ಥೆ ಕಾಪಾಡಬೇಕಿದೆ ಎಂದು ಟೀಕಿಸಿದ್ರು.

ಮಂತ್ರಿಗಳು ಇಲ್ಲದೆ ತಮ್ಮ ಪಕ್ಷದ ಶಾಸಕರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿದ್ದಾರೆ. ಇದರಿಂದ ನೆರೆ ಸಂತ್ರಸ್ತರ ಕಾರ್ಯ ವಿಳಂಬವಾಗುತ್ತಿದೆ ಎಂದರು. ಮಳೆಯಿಂದ ಮೃತಪಟ್ಟವರಿಗೆ 5 ಲಕ್ಷ ಕೊಟ್ಟರೆ ಸಾಲುವುದಿಲ್ಲ, 25 ಲಕ್ಷ ನೀಡಬೇಕು.‌ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 50 ಸಾವಿರ ಕೋಟಿ ಪರಿಹಾರ ನೀಡಬೇಕು ಹಾಗೂ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಬೇಕು ಎಂದು ಒತ್ತಾಯಿಸಿದರು.

Intro:ವಾಟಲ್


Body:ವಾಟಲ್ ನಾಗರಾಜ್


Conclusion:ಕೇಂದ್ರ ಸರ್ಕಾರ ಕರ್ನಾಟಕವನ್ನು ಗುಲಾಮರಂತೆ ನೋಡುತ್ತಿದೆ : ವಾಟಲ್ ನಾಗರಾಜ್ ಆರೋಪ
ಮೈಸೂರು: ನೆರೆ ಹಾವಳಿಯಿಂದ ತತ್ತರಿಸಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರಂತೆ ನೋಡಿತ್ತಿದೆ ಎಂದು ವಾಟಲ್ ಪಕ್ಷದ ಅಧ್ಯಕ್ಷ ವಾಟಲ್ ನಾಗರಾಜ್ ಆರೋಪಿಸಿದರು.
ಮೈಸೂರಿನ ರೈಲ್ವೆ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮಿಳುನಾಡಿನಲ್ಲಿ ಪ್ರವಾಹವಾಗಿದ್ದಾರೆ ಅಲ್ಲಿಗೆ ಹೋಗಿ ನೋಡುತ್ತಿದ್ದರು.ಆದರೆ ಕರ್ನಾಟಕಕ್ಕೆ ಬರುತ್ತಿಲ್ಲ.ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರವಿದೆ.ಒಬ್ಬನೊಬ್ಬರು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾವಣನಂತೆ ಕೆಲಸ ಮಾಡಲು ಹೊರಟ್ಟಿದ್ದಾರೆ.ರಾವಣನಿಗೆ 10 ತಲೆ,20ಕೈಗಳು ಇತ್ತು.ರಾವಣನಂತೆ ಯಡಿಯೂರಪ್ಪ ಪಾತ್ರ ಮಾಡಬಾರದು ಮಂತ್ರಿ ಮಂಡಲ ರಚನೆ ಮಾಡಿ ,ರಾಜ್ಯದ ವ್ಯವಸ್ಥೆ ಕಾಪಾಡಬೇಕಿದೆ.ಮಂತ್ರಿಗಳು ಇಲ್ಲದೆ ತಮ್ಮ ಪಕ್ಷದ ಶಾಸಕರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿದ್ದಾರೆ.ಇದರಿಂದ ನೆರೆ ಸಂತ್ರಸ್ತರ ಕಾರ್ಯವಿಳಂಬವಾಗುತ್ತಿದೆ ಎಂದು ಹೇಳಿದರು.
ಮಳೆಯಿಂದ ಮೃತಪಟ್ಟವರಿಗೆ 5ಲಕ್ಷ ಕೊಟ್ಟರೆ, ಸಾಲುವುದಿಲ್ಲ,25 ಲಕ್ಷ ನೀಡಬೇಕು.‌ಕೇಂದ್ರ ಸರ್ಕಾರ 5ಸಾವಿರ ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದ ಪ್ರವಾಹ ಸ್ಥಳಗಳಿಗೆ ಭೇಟಿ ನೀಡುತ್ತಿನಿ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.