ಮೈಸೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮಾನವೀಯ ಕಾರ್ಯಗಳಿಂದಲೇ ಜನರ ಪ್ರೀತಿ ಗಳಿಸಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೊಳಗಾದ ಶ್ರೀಚಾಮರಾಜೇಂದ್ರ ಮೃಗಾಲಯದ 239 ದಿನಗೂಲಿ ನೌಕರರಿಗೆ ತಲಾ 10 ಸಾವಿರ ರೂಪಾಯಿ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.
![sudhamurthy-donates-10-thousand-for-every-employee-of-mysuru-zoo](https://etvbharatimages.akamaized.net/etvbharat/prod-images/kn-mys-04-sudhamurthy-vis-ka10003_09102021132824_0910f_1633766304_618.jpg)
ಇದಕ್ಕೂ ಮೊದಲು ಲಾಕ್ಡೌನ್ನಲ್ಲಿ ಮೃಗಾಲಯ ನಿರ್ವಹಣೆಗಾಗಿ 20 ಲಕ್ಷದಂತೆ ಮೂರು ಬಾರಿ ಧನಸಹಾಯ ಮಾಡಿದ್ದರು. ಇದೀಗ ಅಲ್ಲಿನ ನೌಕರರಿಗೆ ಸಹಾಯದ ಹಸ್ತ ಚಾಚಿದ್ದು, ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ.