ಮೈಸೂರು: ಅರಮನೆಯ ಆನೆ ಮೇಲಿಂದ ಬಿದ್ದು ಮಾವುತ ದುರ್ಮರಣಕ್ಕೀಡಾಗಿರುವ ಘಟನೆ ಮೈಸೂರು ಅರಮನೆಯ ಒಳಗಡೆ ನಡೆದಿದೆ.
ಮೈಸೂರು ರಾಜರಿಗೆ ಸೇರಿದ್ದ ಹೆಣ್ಣು ಆನೆ "ರೂಬಿ" ಯನ್ನು ನೋಡಿಕೊಳ್ಳುತ್ತಿದ್ದ ಕಾಳಯ್ಯ ಎಂಬಾತನೇ ದುರ್ಮರಣಕ್ಕೀಡಾದ ಮಾವುತ.
ಈತ ಹುಷಾರಿಲ್ಲದ ಸಂದರ್ಭದಲ್ಲೂ ಕೂಡಾ ಆನೆಯನ್ನು ನೋಡಿಕೊಳ್ಳಲು ಹೋಗಿದ್ದಾನೆ. ಅಷ್ಟೇ ಅಲ್ಲದೇ ಆನೆಯ ಮೇಲೆ ಕುಳಿತು ಬರುವಾಗ ಆಯ ತಪ್ಪಿ ಕೆಳಗೆ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗುತ್ತಿದೆ. ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದ್ದು, ನಾಳೆ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದಸ್ಥರಿಗೆ ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಮಾವುತನ ಸಾವಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಂತಾಪ ಸೂಚಿಸಿದ್ದಾರೆ.