ETV Bharat / state

ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ: ಆಘಾತದಿಂದ ವೃದ್ಧೆ ಸಾವು

ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ - ಸಾವಿನ ಸುದ್ದಿ ಕೇಳಿ ವೃದ್ಧೆ ಸಾವು - ಮೈಸೂರು ಸಮೀಪದ ಕಾಡಂಚಿನ ಗ್ರಾಮ ಕೊಳುವಿಗೆಯಲ್ಲಿ ಘಟನೆ

author img

By

Published : Feb 13, 2023, 6:28 PM IST

Updated : Feb 13, 2023, 7:06 PM IST

kodagu
ವೃದ್ಧೆ ಸಾವು

ಮೈಸೂರು: ಕೊಡಗಿನಲ್ಲಿ ಕೇವಲ 24 ಗಂಟೆಗಳಲ್ಲಿ ಹುಲಿಯೊಂದು ಅಜ್ಜ ಮತ್ತು ಮೊಮ್ಮಗನ್ನು ಬಲಿ ಪಡೆದಿತ್ತು. ಇಬ್ಬರ ಸಾವಿನ ಸುದ್ದಿಯಿಂದ ಅಘಾತಕ್ಕೊಳಗಾಗಿ ಇತ್ತ ಅಜ್ಜಿಯೂ ಸಾವನಪ್ಪಿರುವ ಘಟನೆ ಮೈಸೂರು ಸಮೀಪದ ಕಾಡಂಚಿನ ಗ್ರಾಮ ಕೊಳುವಿಗೆಯಲ್ಲಿ ಸೋಮವಾರ ನಡೆದಿದೆ. ಕೊಳವಿಗೆ ಹಾಡಿಯ ಜೇನು ಕುರುಬ ಮಹಿಳೆ ಜಯಮ್ಮ ಕೋಂ ತಮ್ಮಯ್ಯ( 54) ಮೃತಪಟ್ಟಿದ್ದಾರೆ.

ಹುಲಿ ದಾಳಿಯಿಂದ ಮೃತ ಪಟ್ಟಿರುವವರ ಬಗ್ಗೆ ಇಂದು ಮಧ್ಯಾಹ್ನ ವಿಧಾನಮಂಡಲ ಅಧಿವೇಶನದಲ್ಲಿ ಹುಣಸೂರಿನ ಶಾಸಕ ಎಚ್.ಪಿ ಮಂಜುನಾಥ್​ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಕಾಗೇರಿಯವರಿಗೆ ಮಾಹಿತಿ ನೀಡಿ ವಿಷಯ ಪ್ರಸ್ತಾಪಿಸಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ, ನಿರ್ಲಕ್ಷ ವಹಿಸಿರುವ ಹಿರಿಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಜ್ಜ, ಮೊಮ್ಮಗನನ್ನು ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಕೇವಲ 24 ಗಂಟೆಯಲ್ಲಿ ಹುಲಿಯೊಂದು ಇಬ್ಬರನ್ನು ಬಲಿ ಪಡೆದಿದೆ. ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚೂರಿಕಾಡು ನೆಲ್ಲರ ಪೂಣಚ್ಚ ಎಂಬವರ ಮನೆಯಲ್ಲಿ ಕೆಲಸ ಮಾಡಲೆಂದು 12 ವರ್ಷದ ಬಾಲಕ ಚೇತನ್​ ಮತ್ತು ಪೋಷಕರು ತೆರಳಿದ್ದರು. ಭಾನುವಾರ ಸಂಜೆ ಆರೇಳು ಗಂಟೆಯ ಸುಮಾರಿಗೆ ಕಾಫಿ ತೋಟದ ಮನೆಯ ಮುಂಭಾದಲ್ಲೇ ಚೇತನ್​ ಆಟವಾಡುತ್ತಿದ್ದನು. ಈ ವೇಳೆ ಹುಲಿ ಬಾಲಕನ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವ್ನನಪ್ಪಿದ್ದನು. ಹುಣಸೂರು ಸಮೀಪದ ಪಂಚವಳ್ಳಿ ಗ್ರಾಮದಿಂದ ಕೂಲಿ ಮಾಡಲು ಬಂದಿದ್ದ ಕಾರ್ಮಿಕ ಕುಟುಂಬದ ಕೂಸು ಚೇತನ್​ ಆಗಿದ್ದ.

ಇದನ್ನೂ ಓದಿ: ಹುಲಿ ದಾಳಿ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ

ಇದಾದ ಬಳಿಕ ಮೃತಪಟ್ಟ ಮೊಮ್ಮಗನನ್ನು ನೋಡಲು ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಚೇತನ್​ ತಾತ ರಾಜು(70) ಮನೆಯಿಂದ ಹೊರಬಂದ ವೇಳೆ ಹುಲಿ ದಾಳಿ ಮಾಡಿ ಅವರನ್ನು ಎಳೆದೊಯ್ದಿತ್ತು. ರಾಜು ಅವರ ತಲೆ ಭಾಗಕ್ಕೆ ಹುಲಿಯು ಕಚ್ಚಿದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಇದೀಗ ಹುಲಿಯ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ಜನರಲ್ಲಿ ಹೆಚ್ಚಿದ ಆತಂಕ: ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇವುಗಳು ಬೆಳೆ ನಾಶ ಮಾಡುವುದಲ್ಲದೇ ಜನರನ್ನು ಬಲಿ ಪಡೆಯುತ್ತಿದೆ. ಕಾಡಿನಿಂದ ನಾಡಿಗೆ ಆಗಮಿಸುತ್ತಿರುವ ಕಾಡು ಪ್ರಾಣಿಗಳಿಂದಾಗಿ ಬೆಳೆಗಾರರು, ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಜನರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿರುವ ಹುಲಿಯು ಕಾರ್ಯಾಚರಣೆಯ ವೇಳೆ ಕಾಣಿಸಿಕೊಂಡಿದೆ. ಇದು ಜನರನ್ನು ಮತ್ತಷ್ಟು ಭಯಭೀತವಾಗಿಸಿದೆ. ಅಲ್ಲದೇ ಹುಲಿ ಹಿಡಿಯುವಂತೆ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಜನರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಳಿಯಾಳ-ಯಲ್ಲಾಪುರ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಗಜರಾಜನ ದರ್ಶನ- ವಿಡಿಯೋ

ಮೈಸೂರು: ಕೊಡಗಿನಲ್ಲಿ ಕೇವಲ 24 ಗಂಟೆಗಳಲ್ಲಿ ಹುಲಿಯೊಂದು ಅಜ್ಜ ಮತ್ತು ಮೊಮ್ಮಗನ್ನು ಬಲಿ ಪಡೆದಿತ್ತು. ಇಬ್ಬರ ಸಾವಿನ ಸುದ್ದಿಯಿಂದ ಅಘಾತಕ್ಕೊಳಗಾಗಿ ಇತ್ತ ಅಜ್ಜಿಯೂ ಸಾವನಪ್ಪಿರುವ ಘಟನೆ ಮೈಸೂರು ಸಮೀಪದ ಕಾಡಂಚಿನ ಗ್ರಾಮ ಕೊಳುವಿಗೆಯಲ್ಲಿ ಸೋಮವಾರ ನಡೆದಿದೆ. ಕೊಳವಿಗೆ ಹಾಡಿಯ ಜೇನು ಕುರುಬ ಮಹಿಳೆ ಜಯಮ್ಮ ಕೋಂ ತಮ್ಮಯ್ಯ( 54) ಮೃತಪಟ್ಟಿದ್ದಾರೆ.

ಹುಲಿ ದಾಳಿಯಿಂದ ಮೃತ ಪಟ್ಟಿರುವವರ ಬಗ್ಗೆ ಇಂದು ಮಧ್ಯಾಹ್ನ ವಿಧಾನಮಂಡಲ ಅಧಿವೇಶನದಲ್ಲಿ ಹುಣಸೂರಿನ ಶಾಸಕ ಎಚ್.ಪಿ ಮಂಜುನಾಥ್​ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಕಾಗೇರಿಯವರಿಗೆ ಮಾಹಿತಿ ನೀಡಿ ವಿಷಯ ಪ್ರಸ್ತಾಪಿಸಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ, ನಿರ್ಲಕ್ಷ ವಹಿಸಿರುವ ಹಿರಿಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಜ್ಜ, ಮೊಮ್ಮಗನನ್ನು ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಕೇವಲ 24 ಗಂಟೆಯಲ್ಲಿ ಹುಲಿಯೊಂದು ಇಬ್ಬರನ್ನು ಬಲಿ ಪಡೆದಿದೆ. ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚೂರಿಕಾಡು ನೆಲ್ಲರ ಪೂಣಚ್ಚ ಎಂಬವರ ಮನೆಯಲ್ಲಿ ಕೆಲಸ ಮಾಡಲೆಂದು 12 ವರ್ಷದ ಬಾಲಕ ಚೇತನ್​ ಮತ್ತು ಪೋಷಕರು ತೆರಳಿದ್ದರು. ಭಾನುವಾರ ಸಂಜೆ ಆರೇಳು ಗಂಟೆಯ ಸುಮಾರಿಗೆ ಕಾಫಿ ತೋಟದ ಮನೆಯ ಮುಂಭಾದಲ್ಲೇ ಚೇತನ್​ ಆಟವಾಡುತ್ತಿದ್ದನು. ಈ ವೇಳೆ ಹುಲಿ ಬಾಲಕನ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವ್ನನಪ್ಪಿದ್ದನು. ಹುಣಸೂರು ಸಮೀಪದ ಪಂಚವಳ್ಳಿ ಗ್ರಾಮದಿಂದ ಕೂಲಿ ಮಾಡಲು ಬಂದಿದ್ದ ಕಾರ್ಮಿಕ ಕುಟುಂಬದ ಕೂಸು ಚೇತನ್​ ಆಗಿದ್ದ.

ಇದನ್ನೂ ಓದಿ: ಹುಲಿ ದಾಳಿ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ

ಇದಾದ ಬಳಿಕ ಮೃತಪಟ್ಟ ಮೊಮ್ಮಗನನ್ನು ನೋಡಲು ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಚೇತನ್​ ತಾತ ರಾಜು(70) ಮನೆಯಿಂದ ಹೊರಬಂದ ವೇಳೆ ಹುಲಿ ದಾಳಿ ಮಾಡಿ ಅವರನ್ನು ಎಳೆದೊಯ್ದಿತ್ತು. ರಾಜು ಅವರ ತಲೆ ಭಾಗಕ್ಕೆ ಹುಲಿಯು ಕಚ್ಚಿದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಇದೀಗ ಹುಲಿಯ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ಜನರಲ್ಲಿ ಹೆಚ್ಚಿದ ಆತಂಕ: ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇವುಗಳು ಬೆಳೆ ನಾಶ ಮಾಡುವುದಲ್ಲದೇ ಜನರನ್ನು ಬಲಿ ಪಡೆಯುತ್ತಿದೆ. ಕಾಡಿನಿಂದ ನಾಡಿಗೆ ಆಗಮಿಸುತ್ತಿರುವ ಕಾಡು ಪ್ರಾಣಿಗಳಿಂದಾಗಿ ಬೆಳೆಗಾರರು, ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಜನರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿರುವ ಹುಲಿಯು ಕಾರ್ಯಾಚರಣೆಯ ವೇಳೆ ಕಾಣಿಸಿಕೊಂಡಿದೆ. ಇದು ಜನರನ್ನು ಮತ್ತಷ್ಟು ಭಯಭೀತವಾಗಿಸಿದೆ. ಅಲ್ಲದೇ ಹುಲಿ ಹಿಡಿಯುವಂತೆ ಅರಣ್ಯಾ ಇಲಾಖೆ ಅಧಿಕಾರಿಗಳಿಗೆ ಜನರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಳಿಯಾಳ-ಯಲ್ಲಾಪುರ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಗಜರಾಜನ ದರ್ಶನ- ವಿಡಿಯೋ

Last Updated : Feb 13, 2023, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.