ETV Bharat / state

ಸರ್ಕಾರಿ ನೌಕರರಿಗೆ ಮನೆಯಲ್ಲಿ ಕೂರಿಸಿ ಹಣ ಕೊಟ್ರಲ್ಲ ನಮಗೂ ಹಾಗೇ ವ್ಯವಸ್ಥೆ ಮಾಡಿ

ಸರ್ಕಾರಿ ನೌಕರರಿಗೆ ಮನೆಯಲ್ಲಿ ಕೂರಿಸಿ ಹಣ ಕೊಟ್ರಲ್ಲ ನಮಗೂ ಹಾಗೇ ವ್ಯವಸ್ಥೆ ಮಾಡಿ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಕೇಳಿದೆ.

author img

By

Published : Apr 23, 2021, 10:43 AM IST

Mysore Hotel Owners Association, Mysore Hotel Owners Association urged, Mysore Hotel Owners Association urged to tax money, Mysore Hotel Owners Association news, ತೆರಿಗೆ ಹಣ ಅರ್ಧ ವಾಪಸ್ ಕೊಡಿ, ತೆರಿಗೆ ಹಣ ಅರ್ಧ ವಾಪಸ್ ಕೊಡಿ ಎಂದ ಮೈಸೂರು ಹೋಟೆಲ್​ ಮಾಲೀಕರ ಸಂಘ, ಮೈಸೂರು ಹೋಟೆಲ್​ ಮಾಲೀಕರ ಸಂಘ ಸುದ್ದಿ,
ಸರ್ಕಾರಿ ನೌಕರರಿಗೆ ಮನೆಯಲ್ಲಿ ಕೂರಿಸಿ ಹಣ ಕೊಟ್ರಲ್ಲ ನಮಗೂ ಹಾಗೇ ವ್ಯವಸ್ಥೆ ಮಾಡಿ ಎಂದು ಹೋಟೆಲ್​ ಮಾಲೀಕರ ಸಂಘ ಕೇಳಿದೆ

ಮೈಸೂರು: ಸರ್ಕಾರದ ಗೊಂದಲದ ಸುತ್ತೋಲೆಗಳಿಂದ ನಾವು ಹೋಟಲ್ ಉದ್ಯಮ ನಡೆಸಲಾಗುತ್ತಿಲ್ಲ. ಆದ್ದರಿಂದ ನಾವು ರಾಜ್ಯ ಸರ್ಕಾರಕ್ಕೆ ಕಟ್ಟಿರುವ ತೆರಿಗೆ ಹಣವನ್ನು ಅರ್ಧ ವಾಪಸ್ ಕೊಡಬೇಕು ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಗ್ರಹಿಸಿದ್ದಾರೆ‌‌.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬೊಬ್ಬರು ಒಂದೊಂದು ಸುತ್ತೋಲೆ ಹೊರಡಿಸುತ್ತಾರೆ. ಮೊದಲೇ ವ್ಯಾಪಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಏಕಾಏಕಿ ಹೋಟೆಲ್​ಗಳಿಗೆ ಪಾರ್ಸಲ್ ವ್ಯವಸ್ಥೆ ಮಾಡಿರುವುದರಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ. ಸರ್ಕಾರದ ಆದೇಶಗಳಿಂದ ನಾವು ಗೊಂದಲಕ್ಕೀಡಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿಗೆ ಮನೆಯಲ್ಲಿ ಕೂರಿಸಿ ಹಣ ಕೊಟ್ರಲ್ಲ ನಮಗೂ ಹಾಗೇ ವ್ಯವಸ್ಥೆ ಮಾಡಿ

ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಉಳಿದೆಲ್ಲ ಅಂಗಡಿಗಳನ್ನು ಕ್ಲೋಸ್ ಮಾಡಿಸಿದ್ದಾರೆ. ವಾಣಿಜ್ಯ ಮಳಿಗೆಗಳು ಬಂದ್ ಆದರೆ, ಹೋಟೆಲ್​ಗಳಿಗೆ ಜನ ಬರುವುದಿಲ್ಲ. ಹೋಟೆಲ್​ಗಳಿಗೆ ಶೇ. 50ರಷ್ಟು ಜನ ಹೋಗುಬಹುದು ಎಂದು ಎರಡು ದಿನಗಳ ಹಿಂದೆ ಆದೇಶ ಮಾಡಲಾಗಿತ್ತು. ಆದರೆ ಇಂದಿನಿಂದ ಪಾರ್ಸಲ್​ಗೆ ಮಾತ್ರ ಅವಕಾಶ ಅಂತಿದ್ದಾರೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಬಹಳಷ್ಟು ಹೊಡೆತ ಬೀಳಲಿದೆ ಎಂದರು.

ಹೋಟೆಲ್​ಗಳಿಗೆ ಶೇ. 50ರಷ್ಟು ಜನ ಹೋಗುಬಹುದು ಎಂಬ ನಿಯಮ ಮತ್ತೆ ಮಾಡಿ. ಇಲ್ಲವಾದರೆ ನಾವು ಸರ್ಕಾರಕ್ಕೆ ಕಟ್ಟಿರುವ ವಿವಿಧ ತೆರಿಗೆಯ ಹಣದಲ್ಲಿ ನಮಗೆ ಅರ್ಧ ಕೊಡಿ. ಇದರಿಂದ ನಮ್ಮ ಕಾರ್ಮಿಕರಿಗೆ ಸಂಬಳ ಕೊಡಲು ಅನುಕೂಲವಾಗುತ್ತದೆ. ಸರ್ಕಾರದ ಕೆಲಸದಲ್ಲಿ ಇರುವವರಿಗೆ ಮನೆಯಲ್ಲೇ ಕೂರಿಸಿ ಸಂಬಳ ಕೊಟ್ರಲ್ಲ ಹಾಗೇ ನಮಗೂ ವ್ಯವಸ್ಥೆ ಮಾಡಿ ಎಂದು ನೋವನ್ನು ಹೊರಹಾಕಿದರು.

ಮೈಸೂರು: ಸರ್ಕಾರದ ಗೊಂದಲದ ಸುತ್ತೋಲೆಗಳಿಂದ ನಾವು ಹೋಟಲ್ ಉದ್ಯಮ ನಡೆಸಲಾಗುತ್ತಿಲ್ಲ. ಆದ್ದರಿಂದ ನಾವು ರಾಜ್ಯ ಸರ್ಕಾರಕ್ಕೆ ಕಟ್ಟಿರುವ ತೆರಿಗೆ ಹಣವನ್ನು ಅರ್ಧ ವಾಪಸ್ ಕೊಡಬೇಕು ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಗ್ರಹಿಸಿದ್ದಾರೆ‌‌.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬೊಬ್ಬರು ಒಂದೊಂದು ಸುತ್ತೋಲೆ ಹೊರಡಿಸುತ್ತಾರೆ. ಮೊದಲೇ ವ್ಯಾಪಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಏಕಾಏಕಿ ಹೋಟೆಲ್​ಗಳಿಗೆ ಪಾರ್ಸಲ್ ವ್ಯವಸ್ಥೆ ಮಾಡಿರುವುದರಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ. ಸರ್ಕಾರದ ಆದೇಶಗಳಿಂದ ನಾವು ಗೊಂದಲಕ್ಕೀಡಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿಗೆ ಮನೆಯಲ್ಲಿ ಕೂರಿಸಿ ಹಣ ಕೊಟ್ರಲ್ಲ ನಮಗೂ ಹಾಗೇ ವ್ಯವಸ್ಥೆ ಮಾಡಿ

ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಉಳಿದೆಲ್ಲ ಅಂಗಡಿಗಳನ್ನು ಕ್ಲೋಸ್ ಮಾಡಿಸಿದ್ದಾರೆ. ವಾಣಿಜ್ಯ ಮಳಿಗೆಗಳು ಬಂದ್ ಆದರೆ, ಹೋಟೆಲ್​ಗಳಿಗೆ ಜನ ಬರುವುದಿಲ್ಲ. ಹೋಟೆಲ್​ಗಳಿಗೆ ಶೇ. 50ರಷ್ಟು ಜನ ಹೋಗುಬಹುದು ಎಂದು ಎರಡು ದಿನಗಳ ಹಿಂದೆ ಆದೇಶ ಮಾಡಲಾಗಿತ್ತು. ಆದರೆ ಇಂದಿನಿಂದ ಪಾರ್ಸಲ್​ಗೆ ಮಾತ್ರ ಅವಕಾಶ ಅಂತಿದ್ದಾರೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಬಹಳಷ್ಟು ಹೊಡೆತ ಬೀಳಲಿದೆ ಎಂದರು.

ಹೋಟೆಲ್​ಗಳಿಗೆ ಶೇ. 50ರಷ್ಟು ಜನ ಹೋಗುಬಹುದು ಎಂಬ ನಿಯಮ ಮತ್ತೆ ಮಾಡಿ. ಇಲ್ಲವಾದರೆ ನಾವು ಸರ್ಕಾರಕ್ಕೆ ಕಟ್ಟಿರುವ ವಿವಿಧ ತೆರಿಗೆಯ ಹಣದಲ್ಲಿ ನಮಗೆ ಅರ್ಧ ಕೊಡಿ. ಇದರಿಂದ ನಮ್ಮ ಕಾರ್ಮಿಕರಿಗೆ ಸಂಬಳ ಕೊಡಲು ಅನುಕೂಲವಾಗುತ್ತದೆ. ಸರ್ಕಾರದ ಕೆಲಸದಲ್ಲಿ ಇರುವವರಿಗೆ ಮನೆಯಲ್ಲೇ ಕೂರಿಸಿ ಸಂಬಳ ಕೊಟ್ರಲ್ಲ ಹಾಗೇ ನಮಗೂ ವ್ಯವಸ್ಥೆ ಮಾಡಿ ಎಂದು ನೋವನ್ನು ಹೊರಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.