ETV Bharat / state

ರಾಜ್ಯದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂಖ್ಯೆ: ಬಫರ್​ ವಲಯದ ಅರಣ್ಯ ಪ್ರದೇಶ ವಿಸ್ತರಣೆ

author img

By

Published : Oct 17, 2019, 2:56 PM IST

ಹುಣಸೂರು, ಗುಂಡ್ಲುಪೇಟೆ ಹಾಗೂ ಹೆಚ್.ಡಿ. ಕೋಟೆ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಆಗಾಗ ಹುಲಿಗಳು ಕಾಣಿಸಿಕೊಂಡು ಜನ-ಜಾನುವಾರುಗಳನ್ನು ಬಲಿ ಪಡೆದಿವೆ. ಹೀಗಾಗಿ ಸ್ಥಳೀಯರಿಗೆ ವ್ಯಾಘ್ರಗಳ ಉಪಟಳ ಹೆಚ್ಚಾಗಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಬಫರ್​ ಪ್ರದೇಶ ವ್ಯಾಪ್ತಿಯಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತರಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂಖ್ಯೆ: ಬಫರ್​ ವಲಯದ ಅರಣ್ಯ ಪ್ರದೇಶ ವಿಸ್ತರಣೆ

ಮೈಸೂರು: ಹುಲಿಗಳ ಸಂತತಿ ಹೆಚ್ಚಾಗುತ್ತಿರುವ ಹಿನ್ನಲೆ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳನ್ನು ವಿಸ್ತರಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ರಾಜ್ಯದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂಖ್ಯೆ: ಬಫರ್​ ವಲಯದ ಅರಣ್ಯ ಪ್ರದೇಶ ವಿಸ್ತರಣೆ

ಹುಣಸೂರು, ಗುಂಡ್ಲುಪೇಟೆ ಹಾಗೂ ಹೆಚ್.ಡಿ. ಕೋಟೆ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಆಗಾಗ ಹುಲಿಗಳು ಕಾಣಿಸಿಕೊಂಡು ಜನ-ಜಾನುವಾರುಗಳನ್ನು ಬಲಿ ಪಡೆದಿವೆ. ಹೀಗಾಗಿ ಸ್ಥಳೀಯರಿಗೆ ವ್ಯಾಘ್ರಗಳ ಉಪಟಳ ಹೆಚ್ಚಾಗಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಬಫರ್​ ಪ್ರದೇಶ ವ್ಯಾಪ್ತಿಯಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತರಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

ನಾಗರಹೊಳೆ ವ್ಯಾಪ್ತಿಗೆ ಬರುವ ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ 600 ಎಕರೆ ಪ್ರದೇಶವನ್ನು ಹಾಗೂ ಗುಂಡ್ಲುಪೇಟೆ ಪ್ರದೇಶದಲ್ಲಿ 150 ಎಕರೆ ಪ್ರದೇಶವನ್ನು ಬಫರ್ ವಲಯವೆಂದು ಈಗಾಗಲೇ ಗುರುತಿಸಲಾಗಿದೆ. ಅವಶ್ಯಕತೆ ಬಿದ್ದಾಗ ಪ್ರಾಣಿಗಳ ಅನುಕೂಲಕ್ಕಾಗಿ ಈ ಬಫರ್​ ಪ್ರದೇಶದ ವ್ಯಾಪ್ತಿಯಲ್ಲಿ ಕಾಡುಗಳನ್ನು ವಿಸ್ತರಣೆ ಮಾಡಲಾಗುತ್ತದೆ.

ಈ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಹಾಗೂ ಚೌಡಹಳ್ಳಿ ಕಾಡಂಚಿನ ಗ್ರಾಮದಲ್ಲಿ ನರಭಕ್ಷಕ ಹುಲಿ ಇಬ್ಬರು ರೈತರನ್ನು ತಿಂದು ಹಾಕಿತ್ತು. ಇನ್ನು ಅಂತರಸಂತೆಯಿಂದ ಇಲ್ಲಿಗೆ ಬಂದಿದ್ದ ಹುಲಿಗಳು, ತಮ್ಮ ವ್ಯಾಪ್ತಿಯ ವಿಸ್ತರಣೆಗಾಗಿ ಆಗಾಗ ಸ್ಥಳಾಂತರ ಮಾಡುತ್ತಿರುವೆ ಎಂದು ಅರಣ್ಯಾಧಿಕಾರಿಗಳೇ ಮಾಧ್ಯಮಗಳೆದುರು ಹೇಳಿಕೆ ಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ, ದಿನದಿಂದ ದಿನಕ್ಕೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಅವುಗಳ ಅವಾಸ ಸ್ಥಾನವು ವಿಸ್ತರಣೆಯಾಗಬೇಕು. ಇಲ್ಲವಾದರೆ ಹುಲಿಗಳಿಗೆ ಮತ್ತು ಮನುಷ್ಯರಿಗೆ ಸಂಕಷ್ಟ ಎದುರಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಮೈಸೂರು: ಹುಲಿಗಳ ಸಂತತಿ ಹೆಚ್ಚಾಗುತ್ತಿರುವ ಹಿನ್ನಲೆ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳನ್ನು ವಿಸ್ತರಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ರಾಜ್ಯದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂಖ್ಯೆ: ಬಫರ್​ ವಲಯದ ಅರಣ್ಯ ಪ್ರದೇಶ ವಿಸ್ತರಣೆ

ಹುಣಸೂರು, ಗುಂಡ್ಲುಪೇಟೆ ಹಾಗೂ ಹೆಚ್.ಡಿ. ಕೋಟೆ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಆಗಾಗ ಹುಲಿಗಳು ಕಾಣಿಸಿಕೊಂಡು ಜನ-ಜಾನುವಾರುಗಳನ್ನು ಬಲಿ ಪಡೆದಿವೆ. ಹೀಗಾಗಿ ಸ್ಥಳೀಯರಿಗೆ ವ್ಯಾಘ್ರಗಳ ಉಪಟಳ ಹೆಚ್ಚಾಗಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಬಫರ್​ ಪ್ರದೇಶ ವ್ಯಾಪ್ತಿಯಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತರಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

ನಾಗರಹೊಳೆ ವ್ಯಾಪ್ತಿಗೆ ಬರುವ ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ 600 ಎಕರೆ ಪ್ರದೇಶವನ್ನು ಹಾಗೂ ಗುಂಡ್ಲುಪೇಟೆ ಪ್ರದೇಶದಲ್ಲಿ 150 ಎಕರೆ ಪ್ರದೇಶವನ್ನು ಬಫರ್ ವಲಯವೆಂದು ಈಗಾಗಲೇ ಗುರುತಿಸಲಾಗಿದೆ. ಅವಶ್ಯಕತೆ ಬಿದ್ದಾಗ ಪ್ರಾಣಿಗಳ ಅನುಕೂಲಕ್ಕಾಗಿ ಈ ಬಫರ್​ ಪ್ರದೇಶದ ವ್ಯಾಪ್ತಿಯಲ್ಲಿ ಕಾಡುಗಳನ್ನು ವಿಸ್ತರಣೆ ಮಾಡಲಾಗುತ್ತದೆ.

ಈ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಹಾಗೂ ಚೌಡಹಳ್ಳಿ ಕಾಡಂಚಿನ ಗ್ರಾಮದಲ್ಲಿ ನರಭಕ್ಷಕ ಹುಲಿ ಇಬ್ಬರು ರೈತರನ್ನು ತಿಂದು ಹಾಕಿತ್ತು. ಇನ್ನು ಅಂತರಸಂತೆಯಿಂದ ಇಲ್ಲಿಗೆ ಬಂದಿದ್ದ ಹುಲಿಗಳು, ತಮ್ಮ ವ್ಯಾಪ್ತಿಯ ವಿಸ್ತರಣೆಗಾಗಿ ಆಗಾಗ ಸ್ಥಳಾಂತರ ಮಾಡುತ್ತಿರುವೆ ಎಂದು ಅರಣ್ಯಾಧಿಕಾರಿಗಳೇ ಮಾಧ್ಯಮಗಳೆದುರು ಹೇಳಿಕೆ ಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ, ದಿನದಿಂದ ದಿನಕ್ಕೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಅವುಗಳ ಅವಾಸ ಸ್ಥಾನವು ವಿಸ್ತರಣೆಯಾಗಬೇಕು. ಇಲ್ಲವಾದರೆ ಹುಲಿಗಳಿಗೆ ಮತ್ತು ಮನುಷ್ಯರಿಗೆ ಸಂಕಷ್ಟ ಎದುರಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

Intro:ಅರಣ್ಯ ವಿಸ್ತರಣೆBody:ಮೈಸೂರು: ಹುಲಿಗಳ ಸಂತತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳನ್ನು ವಿಸ್ತರಣೆ ಮಾಡಲು ಅರಣ್ಯಾಧಿಕಾರಿಗಳು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಹುಣಸೂರು, ಗುಂಡ್ಲುಪೇಟೆ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಆಗಾಗ ಹುಲಿಗಳು ಕಾಣಿಸಿಕೊಂಡು ಜಾನುವಾರುಗಳನ್ನು ತಿಂದು, ಸ್ಥಳೀಯರಿಗೆ ಉಪಟಳ ನೀಡುತ್ತಿರುವುದರಿಂದ ಬಫೆರ್‌ವಲಯದ ಅರಣ್ಯ ಪ್ರದೇಶವನ್ನು ವಿಸ್ತರಣೆ ಮಾಡಲು ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತರಣೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡ ಕಾರ್ಯನಿರತರಾಗಿದ್ದಾರೆ.
ನಾಗರಹೊಳೆ ವ್ಯಾಪ್ತಿಗೆ ಬರುವ ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ೬೦೦ ಎಕರೆ ಪ್ರದೇಶವನ್ನು ಬಫೆರ್ ವಲಯದೆಂದು ಈಗಾಗಲೇ ಗುರುತಿಸಿದ್ದು, ಅದನ್ನು ಪ್ರಾಣಿಗಳ ಅನುಕೂಲಕ್ಕಾಗಿ ಕಾಡುಗಳ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೇ ಗುಂಡ್ಲುಪೇಟೆ ಪ್ರದೇಶದಲ್ಲಿ ೧೫೦ ಎಕರೆ ಪ್ರದೇಶದಲ್ಲಿ ಬಫೆರ್ ವಲಯವನ್ನು ಗುರುತಿಸಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರ ಹಾಗೂ ಚೌಡಹಳ್ಳಿ ಕಾಡಂಚಿನ ಗ್ರಾಮದಲ್ಲಿ ನರಭಕ್ಷಕ ಹುಲಿ ಇಬ್ಬರು ರೈತರನ್ನು ತಿಂದು ಹಾಕಿತ್ತು. ಅಂತರಸಂತೆಯಿಂದ ಇಲ್ಲಿಗೆ ಬಂದಿದ್ದ ಹುಲಿ, ತನ್ನ ವ್ಯಾಪ್ತಿಯ ವಿಸ್ತರಣೆಗಾಗಿ ಆಗಾಗ ಸ್ಥಳಾಂತರ ಮಾಡುತ್ತವೆ ಎಂದು ಅರಣ್ಯಾಧಿಕಾರಿಗಳೇ ಮಾಧ್ಯಮಗಳೊಂದಿಗೆ ಹೇಳಿಕೆ ಕೊಟ್ಟಿರುವುದನ್ನು ಗಮನಿಸಿದರೆ, ದೇಶದಲ್ಲಿಯೇ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ದಿನದಿಂದ ದಿನಕ್ಕೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅವುಗಳ ಅವಾಸ ಸ್ಥಾನವು ವಿಸ್ತರಣೆಯಾಗಬೇಕು. ಇಲ್ಲವಾದರೆ ಹುಲಿಗಳ ಸಂಘರ್ಷ ಒಂದು ಕಡೆಯಾದರೆ, ಮಾನವ ಸಂಘರ್ಷದಿಂದಲ್ಲೂ ಹುಲಿಗಳು ಮೃತಪಡುತ್ತಿವೆ. ಹುಲಿಗಳ ಸಂಖ್ಯೆ ಹೆಚ್ಚಾಳವಾಗುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಅರಣ್ಯ ಪ್ರದೇಶವು ವಿಸ್ತರಣೆಯಾಗಬೇಕು.ಆಗ ಮಾತ್ರ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಕಡಿಮೆಯಾಗುತ್ತದೆ. Conclusion:ಅರಣ್ಯ ವಿಸ್ತರಣೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.