ETV Bharat / state

ಒಂದೇ ದಿನ ನಾಲ್ವರು ಬಲಿ: ಹುಣಸೂರಿನ ನಾಲ್ಕು ಗ್ರಾಮಗಳು ಸೀಲ್‌ಡೌನ್​

author img

By

Published : Apr 28, 2021, 11:54 AM IST

ಕೊರೊನಾ ಸೋಂಕಿತರು ಹೆಚ್ಚಿರುವ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಲ್ಲಹಳ್ಳಿ, ಗಾವಡಗೆರೆ ಹೋಬಳಿಯ ಮುಳ್ಳೂರು, ಕೃಷ್ಣಾಪುರ ಹಾಗೂ ಬಿಳಿಕರೆ ಹೋಬಳಿಯ ಕೆಂಪಮ್ಮನ ಹೊಸೂರು ಗ್ರಾಮಗಳನ್ನು ಸೀಲ್​ಡೌನ್​ ಮಾಡಲಾಗಿದೆ.

Hunsur Taluk 4 Villages sealed
ಹುಣಸೂರು ತಾಲೂಕಿನ 4 ಗ್ರಾಮಗಳು ಸೀಲ್​ ಡೌನ್​

ಮೈಸೂರು: ಹುಣಸೂರು ತಾಲೂಕಿನಲ್ಲಿ ಮಂಗಳವಾರ ನಾಲ್ವರು ಸೋಂಕಿಗೆ ಬಲಿಯಾಗಿದ್ದು, ನಾಲ್ಕು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಹುಣಸೂರು ತಾಲೂಕಿನ ನಾಲ್ಕು ಗ್ರಾಮಗಳು ಸೀಲ್​ ಡೌನ್​

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ನಾಲ್ವರು ಸೋಂಕಿಗೆ ಮೃತಪಟ್ಟಿದ್ದು, ಈವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ.

ಪರೀಕ್ಷಾ ವರದಿ ವಿಳಂಬ:

ಸಾರ್ವಜನಿಕರು ತಮ್ಮ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿಕೊಂಡರೂ ವರದಿ ಬರುವುದು ತಡವಾಗುತ್ತಿದೆ. ಇದರಿಂದ ಸೋಂಕು ಇತರರಿಗೆ ಹರಡಲು ಕಾರಣವಾಗುತ್ತಿದೆ.

ಗ್ರಾಮಗಳು ಸೀಲ್ ಡೌನ್:
ಕೊರೊನಾ ಸೋಂಕಿತರು ಹೆಚ್ಚಿರುವ ತಾಲೂಕಿನ ಹನಗೋಡು ಹೋಬಳಿಯ ಕಲ್ಲಹಳ್ಳಿ, ಗಾವಡಗೆರೆ ಹೋಬಳಿಯ ಮುಳ್ಳೂರು, ಕೃಷ್ಣಾಪುರ ಹಾಗೂ ಬಿಳಿಕರೆ ಹೋಬಳಿಯ ಕೆಂಪಮ್ಮನ ಹೊಸೂರು ಗ್ರಾಮಗಳನ್ನು ಸೀಲ್​ಡೌನ್​ ಮಾಡಲಾಗಿದೆ.

ಈ ಗ್ರಾಮಗಳಿಗೆ ತೆರಳಿದ ತಹಶೀಲ್ದಾರ್ ಬಸವರಾಜ್, ತಾ.ಪಂ.ಇ.ಓ.ಗಿರೀಶ್ ನೇತೃತ್ವದ ತಂಡ ಗ್ರಾಮಗಳನ್ನು ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ಸಹಕಾರದಿಂದ ನಿರ್ಬಂಧಿಸಿ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ. ಹಾಲಿನ ಡೈರಿಯನ್ನು ಸಹ ಮುಚ್ಚಿಸಲಾಗಿದೆ. ಹೊರಗಿನ ಜನರು ಗ್ರಾಮದೊಳಕ್ಕೆ ಬಾರದಂತೆ ನಿರ್ಬಂಧಿಸಲಾಗಿದೆ. ಸದ್ಯ ಈ ಗ್ರಾಮಗಳಲ್ಲಿ ಕೊರೊನಾ ಪರೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಹೊಸದಾಗಿ 22 ಸಾವಿರ ಮಂದಿಗೆ ಕೋವಿಡ್

ಮೈಸೂರು: ಹುಣಸೂರು ತಾಲೂಕಿನಲ್ಲಿ ಮಂಗಳವಾರ ನಾಲ್ವರು ಸೋಂಕಿಗೆ ಬಲಿಯಾಗಿದ್ದು, ನಾಲ್ಕು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಹುಣಸೂರು ತಾಲೂಕಿನ ನಾಲ್ಕು ಗ್ರಾಮಗಳು ಸೀಲ್​ ಡೌನ್​

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ನಾಲ್ವರು ಸೋಂಕಿಗೆ ಮೃತಪಟ್ಟಿದ್ದು, ಈವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ.

ಪರೀಕ್ಷಾ ವರದಿ ವಿಳಂಬ:

ಸಾರ್ವಜನಿಕರು ತಮ್ಮ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿಕೊಂಡರೂ ವರದಿ ಬರುವುದು ತಡವಾಗುತ್ತಿದೆ. ಇದರಿಂದ ಸೋಂಕು ಇತರರಿಗೆ ಹರಡಲು ಕಾರಣವಾಗುತ್ತಿದೆ.

ಗ್ರಾಮಗಳು ಸೀಲ್ ಡೌನ್:
ಕೊರೊನಾ ಸೋಂಕಿತರು ಹೆಚ್ಚಿರುವ ತಾಲೂಕಿನ ಹನಗೋಡು ಹೋಬಳಿಯ ಕಲ್ಲಹಳ್ಳಿ, ಗಾವಡಗೆರೆ ಹೋಬಳಿಯ ಮುಳ್ಳೂರು, ಕೃಷ್ಣಾಪುರ ಹಾಗೂ ಬಿಳಿಕರೆ ಹೋಬಳಿಯ ಕೆಂಪಮ್ಮನ ಹೊಸೂರು ಗ್ರಾಮಗಳನ್ನು ಸೀಲ್​ಡೌನ್​ ಮಾಡಲಾಗಿದೆ.

ಈ ಗ್ರಾಮಗಳಿಗೆ ತೆರಳಿದ ತಹಶೀಲ್ದಾರ್ ಬಸವರಾಜ್, ತಾ.ಪಂ.ಇ.ಓ.ಗಿರೀಶ್ ನೇತೃತ್ವದ ತಂಡ ಗ್ರಾಮಗಳನ್ನು ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ಸಹಕಾರದಿಂದ ನಿರ್ಬಂಧಿಸಿ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ. ಹಾಲಿನ ಡೈರಿಯನ್ನು ಸಹ ಮುಚ್ಚಿಸಲಾಗಿದೆ. ಹೊರಗಿನ ಜನರು ಗ್ರಾಮದೊಳಕ್ಕೆ ಬಾರದಂತೆ ನಿರ್ಬಂಧಿಸಲಾಗಿದೆ. ಸದ್ಯ ಈ ಗ್ರಾಮಗಳಲ್ಲಿ ಕೊರೊನಾ ಪರೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಹೊಸದಾಗಿ 22 ಸಾವಿರ ಮಂದಿಗೆ ಕೋವಿಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.