ಮೈಸೂರು : ಹೆಚ್ ಡಿ ಕೋಟೆ ತಾಲೂಕಿನ ಕಳಸೂರು, ಮೂರುಬಂದ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿಯೊಂದು ಕಾಣಿಸಿದ್ದು, ಸಾಕಾನೆಗಳ ಮೂಲಕ ಅರಣ್ಯ ಇಲಾಖೆಯು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಶುರು ಮಾಡಿದೆ. ಕಳೆದ 6 ದಿನಗಳಿಂದ ಅರಣ್ಯ ಇಲಾಖೆಯು ಹುಲಿಯ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆ ಚುರುಕುಗೊಳಿಸಲು ಬುಧವಾರ ಸಾಕಾನೆಗಳನ್ನು ಕರೆತರಲಾಯಿತು.
![Forest officers searching for a tiger](https://etvbharatimages.akamaized.net/etvbharat/prod-images/kn-mys-05-tiger-karyacharane-vis-ka10003_02092020202453_0209f_1599058493_493.jpg)
ತಾಲೂಕಿನ ಎನ್ ಬೇಗೂರು ವಲಯದ ಹುಲಿಯೊಂದು ಕಾಡಿನಿಂದ ಹೊರಬಂದಿರುವ ಸುಳಿವು ಪಡೆದುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ಸತತ ಪ್ರಯತ್ನ ನಡೆಸಿದ್ದಾರೆ. ಹುಲಿ ಸೆರೆಯಾಗದ ಪರಿಣಾಮ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಇಂದು ರಾಂಪುರ ಆನೆ ಶಿಬಿರದಿಂದ ಗಣೇಶ, ಪಾರ್ಥ ಹಾಗೂ ಜಯಪ್ರಕಾಶ ಎಂಬ ನಾಮಾಂಕಿತ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಿದ್ದಾರೆ.
![Forest officers searching for a tiger](https://etvbharatimages.akamaized.net/etvbharat/prod-images/kn-mys-05-tiger-karyacharane-vis-ka10003_02092020202453_0209f_1599058493_110.jpg)
ಎನ್.ಬೇಗೂರು ವಲಯದ ಸುಮಾರು 10 ವರ್ಷದ ಗಂಡು ಹುಲಿ ಎಂದು ಹೇಳಲಾಗುತ್ತಿದ್ದು, ಕಾಡಂಚಿನ ಅಕ್ಕ-ಪಕ್ಕದ ಜಮೀನುಗಳಲ್ಲಿ ಮೇಯಲು ಬರುವ ಜಾನುವಾರಗಳನ್ನು ಹಿಡಿಯಲು ಕಾಡಿನಿಂದ ಹೊರ ಬಂದಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಇಂದು ನಡೆದ ಕಾರ್ಯಾಚರಣೆಯಲ್ಲಿ ಎನ್.ಬೇಗೂರು ವಲಯ ಅರಣ್ಯಧಿಕಾರಿ ಚೇತನ್, ವಿಶೇಷ ಹುಲಿ ಸಂರಕ್ಷಣಾ ಪಡೆಯ ಡಿಆರ್ಎಫ್ಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು.
![Forest officers searching for a tiger](https://etvbharatimages.akamaized.net/etvbharat/prod-images/kn-mys-05-tiger-karyacharane-vis-ka10003_02092020202453_0209f_1599058493_291.jpg)