ETV Bharat / state

ದರ್ಶನ್​ ನಿವಾಸದ ಮೇಲೆ ನಡೆಯಿತಾ ದಾಳಿ?: ಯಾರೂ ಬಂದಿಲ್ಲ ಎಂದ ದರ್ಶನ್​ ತಾಯಿ

author img

By

Published : Apr 15, 2019, 2:41 PM IST

ನಟ ದರ್ಶನ್ ಅವರ ಟಿ.‌ನರಸಿಪುರದಲ್ಲಿರುವ ದರ್ಶನ್ ಫಾರ್ಮ್​ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ ಸುದ್ದಿ ಹರಿದಾಡಿದೆ. ಆದರೆ ಅವರ ತಾಯಿ ಮಾತ್ರ ಯಾರೂ ಬಂದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ನಟ ದರ್ಶನ್

ಮೈಸೂರು: ನಟ ದರ್ಶನ್ ಅವರ ಟಿ.‌ನರಸಿಪುರದಲ್ಲಿರುವ ದರ್ಶನ್ ಫಾರ್ಮ್​ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ದರ್ಶನ್​ ತಾಯಿ ಸ್ಪಷ್ಟನೆ ನೀಡಿದ್ದು, ಫಾರ್ಮ್​ ಹೌಸ್​ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸಿಪುರ ರಸ್ತೆಯಲ್ಲಿರುವ ನಟ ದರ್ಶನ್ ತೂಗೂದೀಪ್​ ಅವರ ಫಾರ್ಮ್​ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಐಟಿ ಇಲಾಖೆ ಅಧಿಕಾರಿಗಳ ಜತೆ ಆಗಮಿಸಿ ತಪಾಸಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಈ ಫಾರ್ಮ್​ ಹೌಸ್ ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ ಎಂದೂ ಹೇಳಲಾಗುತ್ತಿದೆ. ನಟ ದರ್ಶನ್ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಈ ಟಿವಿ ಭಾರತದ ಜೊತೆ ಫೋನ್​ನಲ್ಲಿ ಮಾತನಾಡಿದ ನಟ ದರ್ಶನ್ ತಾಯಿ ಮೀನಾ ತೂಗುದೀಪ್, ನಮ್ಮ ಫಾರ್ಮ್​ ಹೌಸ್​ನಲ್ಲಿ ಯಾವುದೇ ಐಟಿ ದಾಳಿ ನಡೆದಿಲ್ಲ. ಹಾಗೊಮ್ಮೆ ನಡೆದಿದೆ ಎಂದು ನೀವು ನಂಬುವುದಾದರೆ ಅಲ್ಲಿ ಸಿಗುವುದು ಕೇವಲ ಹಸು - ಕರು, ಕುದುರೆಗಳು ಸಿಗುತ್ತವಷ್ಟೇ ಎಂದು ಹೇಳಿದ್ದಾರೆ.

ಮೈಸೂರು: ನಟ ದರ್ಶನ್ ಅವರ ಟಿ.‌ನರಸಿಪುರದಲ್ಲಿರುವ ದರ್ಶನ್ ಫಾರ್ಮ್​ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ದರ್ಶನ್​ ತಾಯಿ ಸ್ಪಷ್ಟನೆ ನೀಡಿದ್ದು, ಫಾರ್ಮ್​ ಹೌಸ್​ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸಿಪುರ ರಸ್ತೆಯಲ್ಲಿರುವ ನಟ ದರ್ಶನ್ ತೂಗೂದೀಪ್​ ಅವರ ಫಾರ್ಮ್​ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಐಟಿ ಇಲಾಖೆ ಅಧಿಕಾರಿಗಳ ಜತೆ ಆಗಮಿಸಿ ತಪಾಸಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಈ ಫಾರ್ಮ್​ ಹೌಸ್ ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ ಎಂದೂ ಹೇಳಲಾಗುತ್ತಿದೆ. ನಟ ದರ್ಶನ್ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಈ ಟಿವಿ ಭಾರತದ ಜೊತೆ ಫೋನ್​ನಲ್ಲಿ ಮಾತನಾಡಿದ ನಟ ದರ್ಶನ್ ತಾಯಿ ಮೀನಾ ತೂಗುದೀಪ್, ನಮ್ಮ ಫಾರ್ಮ್​ ಹೌಸ್​ನಲ್ಲಿ ಯಾವುದೇ ಐಟಿ ದಾಳಿ ನಡೆದಿಲ್ಲ. ಹಾಗೊಮ್ಮೆ ನಡೆದಿದೆ ಎಂದು ನೀವು ನಂಬುವುದಾದರೆ ಅಲ್ಲಿ ಸಿಗುವುದು ಕೇವಲ ಹಸು - ಕರು, ಕುದುರೆಗಳು ಸಿಗುತ್ತವಷ್ಟೇ ಎಂದು ಹೇಳಿದ್ದಾರೆ.

Intro:ಮೈಸೂರು: ನಟ ದರ್ಶನ್ ಅವರ ಟಿ.‌ನರಸಿಪುರ ದರ್ಶನ್ ಫಾರಮ್ ಹೌಸ್ ಮೇಲೆ ಚುನಾವಣ ಅಧಿಕಾರಿಗಳು ದಾಳಿ ಮಾಡಿದ್ದಾರೆ.Body:ಮೈಸೂರು ಟಿ.ನರಸಿಪುರ ರಸ್ತೆಯಲ್ಲಿರುವ ನಟ ದರ್ಶನ್ ಅವರ ತೂಗೂದೀಪ ಫಾರಮ್ ಹೌಸ್ ಮೇಲೆ ದೂರು ಬಂದ ಹಿನ್ನಲೆಯಲ್ಲಿ ಚುನಾವಣ ಅಧಿಕಾರಿಗಳು ದಾಳಿ ಮಾಡಿದ್ದು ಇವರ ಜೊತೆ ಐಟಿ ಅಧಿಕಾರಿಗಳು ಸಹ ಇದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಆದರೆ ಫಾರಮ್ ಹೌಸ್ ನ ಒಳಗಡೆ ಇರುವ ಚಿಕ್ಕ ಮನೆಯಲ್ಲಿ ಚುನಾವಣ ಅಧಿಕಾರಿಗಳು ದಾಖಲೆಯನ್ನು ಪರಿಶೀಲನೆ ನಡೆಸಿದ್ದಾರೆ.
ಈ ಫಾರಮ್ ಹೌಸ್ ಚಾಮರಾಜ ನಗರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ.
ನಟ ದರ್ಶನ್ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಾಲತ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಈ ಟಿವಿ ಭಾರತದ ಜೊತೆ ಫೋನ್ ನಲ್ಲಿ ಮಾತನಾಡಿದ ನಟ ದರ್ಶನ್ ತಾಯಿ ಮೀನಾ ತೂಗುದೀಪ್ ನಮ್ಮ ಫಾರಮ್ ಹೌಸ್ ನಲ್ಲಿ ಯಾವುದೇ ಐಟಿದಾಳಿ ನಡೆದಿಲಲ್ಲ ದಾಳಿ ನಡೆದಿದ್ದರು ಹಸು ಕರು ಕುದುರೆ ಸಿಗುತ್ತದೆ ಎಂದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.