ETV Bharat / state

ವಾಯು ಮಾಲಿನ್ಯ ತಡೆಗೆ ಸಾಂಸ್ಕೃತಿಕ ನಗರಿಯಲ್ಲಿ 'ಸೈಕಲ್ ಫಾರ್ ಚೇಂಜ್'

author img

By

Published : Nov 14, 2020, 4:21 PM IST

ಸೈಕ್ಲಿಸ್ಟ್​​​ಗಳಿಗಾಗಿ ಮತ್ತು ವಾಯು ಮಾಲಿನ್ಯ ತಡೆಯುವ ಉದ್ದೇಶದಿಂದ ಸೈಕಲ್ ಫಾರ್ ಚೇಂಜ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅದಕ್ಕಾಗಿ ಮೈಸೂರಿನಲ್ಲಿ ವಿಶೇಷ ಪಥ ನಿರ್ಮಾಣ ಮಾಡಲಾಗುತ್ತಿದೆ.

'Cycle for Change' project
'ಸೈಕಲ್ ಫಾರ್ ಚೇಂಜ್' ಯೋಜನೆ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಾಯು ಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸೈಕಲ್ ಫಾರ್ ಚೇಂಜ್ ಎಂಬ ಕಾರ್ಯಕ್ರಮದಡಿ ವಿಶೇಷ ಸೈಕಲ್​​ ಟ್ರ್ಯಾಕ್ (ವಿಶೇಷ ಸೈಕಲ್​​​ ಪಥ) ನಿರ್ಮಾಣವಾಗುತ್ತಿದೆ.

ಈ ಕಾರ್ಯಕ್ರಮದಡಿ ದೇಶದ 95 ನಗರಗಳ ಪೈಕಿ ಮೈಸೂರು ಸಹ ಒಂದು. ನಗರದ ಕುಕ್ಕರಹಳ್ಳಿ ರಸ್ತೆ, ವಿಶ್ವಮಾನವ ಡಬಲ್ ರಸ್ತೆ ಮತ್ತು ಮುಡಾ ರಸ್ತೆಗಳು ಸೇರಿದಂತೆ 10 ಕಿ.ಮೀ. ಸೈಕಲ್ ಪಥ ನಿರ್ಮಿಸಲಾಗುತ್ತಿದೆ.

ಪಾಲಿಕೆ ಆಯುಕ್ತ ಗುರುದತ್ ಹೆಗಡೆ

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಮಹಾನಗರ ಪಾಲಿಕೆ ಕೂಡ ಸಹಭಾಗಿತ್ವ ಹೊಂದಿದೆ. ದ್ವಿಪಥ ರಸ್ತೆಗಳಲ್ಲಿ 4-6 ತಿಂಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಹಿಂದೆ ಟ್ರಿನ್​ ಟ್ರಿನ್ ಯೋಜನೆ ಜಾರಿಗೆ ತರಲಾಗಿತ್ತು ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಾಯು ಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸೈಕಲ್ ಫಾರ್ ಚೇಂಜ್ ಎಂಬ ಕಾರ್ಯಕ್ರಮದಡಿ ವಿಶೇಷ ಸೈಕಲ್​​ ಟ್ರ್ಯಾಕ್ (ವಿಶೇಷ ಸೈಕಲ್​​​ ಪಥ) ನಿರ್ಮಾಣವಾಗುತ್ತಿದೆ.

ಈ ಕಾರ್ಯಕ್ರಮದಡಿ ದೇಶದ 95 ನಗರಗಳ ಪೈಕಿ ಮೈಸೂರು ಸಹ ಒಂದು. ನಗರದ ಕುಕ್ಕರಹಳ್ಳಿ ರಸ್ತೆ, ವಿಶ್ವಮಾನವ ಡಬಲ್ ರಸ್ತೆ ಮತ್ತು ಮುಡಾ ರಸ್ತೆಗಳು ಸೇರಿದಂತೆ 10 ಕಿ.ಮೀ. ಸೈಕಲ್ ಪಥ ನಿರ್ಮಿಸಲಾಗುತ್ತಿದೆ.

ಪಾಲಿಕೆ ಆಯುಕ್ತ ಗುರುದತ್ ಹೆಗಡೆ

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಮಹಾನಗರ ಪಾಲಿಕೆ ಕೂಡ ಸಹಭಾಗಿತ್ವ ಹೊಂದಿದೆ. ದ್ವಿಪಥ ರಸ್ತೆಗಳಲ್ಲಿ 4-6 ತಿಂಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಹಿಂದೆ ಟ್ರಿನ್​ ಟ್ರಿನ್ ಯೋಜನೆ ಜಾರಿಗೆ ತರಲಾಗಿತ್ತು ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.