ETV Bharat / state

ಪಾರಂಪರಿಕ ಗಡಿಯಾರ ಕಟ್ಟಡದಲ್ಲಿ ಬಿರುಕು... ಕಾಮಗಾರಿಗೆ ಮುಂದಾದ ಜಿಲ್ಲಾಡಳಿತ

author img

By

Published : May 10, 2019, 5:28 PM IST

ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಗಡಿಯಾರ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪಾರಂಪರಿಕ ಗಡಿಯಾರ ಕಟ್ಟಡ

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಗಡಿಯಾರದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.‌ ಶಂಕರ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.

ಪಾರಂಪರಿಕ ಗಡಿಯಾರ ಕಟ್ಟಡದಲ್ಲಿ ಬಿರುಕು

ನಗರದಲ್ಲಿ ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೊಡ್ಡ ಗಡಿಯಾರ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ನಿನ್ನೆ ತಜ್ಞರ ಸಮಿತಿ ದೊಡ್ಡ ಗಡಿಯಾರವನ್ನು ಪರಿಶೀಲನೆ ನಡೆಸಿದೆ. ಗಡಿಯಾರದಲ್ಲಿ ಬಿರುಕು ಬಿಟ್ಟಿರುವುದನ್ನು ಪರಿಪಾಲನಾ ಸಮಿತಿಯ ತಜ್ಞರು ಮೊದಲೇ ತಿಳಿಸಿದ್ದರು. ಈ‌ ಕಟ್ಟಡದಲ್ಲಿ ಇಲಿ, ಹೆಗ್ಗಣಗಳು ಹೆಚ್ಚಾಗಿದ್ದು, ಇವು ವಾಸ ಮಾಡಲು ಬಿಲ ತೋಡುತ್ತಿವೆ. ಇದರಿಂದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದರು.

ದೊಡ್ಡ ಗಡಿಯಾರ ಮೊದಲು ಹೇಗೆ ಒಂದು ಗಂಟೆಗೆ ಶಬ್ದ ಮಾಡುತ್ತಿತ್ತೋ ಅದೇ ರೀತಿ ಸರಿಪಡಿಸುವಂತೆ ಸಾರ್ವಜನಿಕರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ತಜ್ಞರು ಹೋಗಿ ಪರಿಶೀಲನೆ ನಡೆಸಿದ್ದು, ಅವರ ಸಲಹೆ ಸೂಚನೆಗಳನ್ನು ಪಡೆದು ತಕ್ಷಣವೇ ಬೇಕಾದ ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ. ಅದನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಎಂಬ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಗಡಿಯಾರದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.‌ ಶಂಕರ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.

ಪಾರಂಪರಿಕ ಗಡಿಯಾರ ಕಟ್ಟಡದಲ್ಲಿ ಬಿರುಕು

ನಗರದಲ್ಲಿ ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೊಡ್ಡ ಗಡಿಯಾರ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ನಿನ್ನೆ ತಜ್ಞರ ಸಮಿತಿ ದೊಡ್ಡ ಗಡಿಯಾರವನ್ನು ಪರಿಶೀಲನೆ ನಡೆಸಿದೆ. ಗಡಿಯಾರದಲ್ಲಿ ಬಿರುಕು ಬಿಟ್ಟಿರುವುದನ್ನು ಪರಿಪಾಲನಾ ಸಮಿತಿಯ ತಜ್ಞರು ಮೊದಲೇ ತಿಳಿಸಿದ್ದರು. ಈ‌ ಕಟ್ಟಡದಲ್ಲಿ ಇಲಿ, ಹೆಗ್ಗಣಗಳು ಹೆಚ್ಚಾಗಿದ್ದು, ಇವು ವಾಸ ಮಾಡಲು ಬಿಲ ತೋಡುತ್ತಿವೆ. ಇದರಿಂದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದರು.

ದೊಡ್ಡ ಗಡಿಯಾರ ಮೊದಲು ಹೇಗೆ ಒಂದು ಗಂಟೆಗೆ ಶಬ್ದ ಮಾಡುತ್ತಿತ್ತೋ ಅದೇ ರೀತಿ ಸರಿಪಡಿಸುವಂತೆ ಸಾರ್ವಜನಿಕರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ತಜ್ಞರು ಹೋಗಿ ಪರಿಶೀಲನೆ ನಡೆಸಿದ್ದು, ಅವರ ಸಲಹೆ ಸೂಚನೆಗಳನ್ನು ಪಡೆದು ತಕ್ಷಣವೇ ಬೇಕಾದ ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ. ಅದನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಎಂಬ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

Intro:ಮೈಸೂರು: ಇಲಿ, ಹೆಗ್ಗಣಗಳು ಬಿಲ ತೋಡಿದ್ದರಿಂದ ಪಾರಂಪರಿಕ ದೊಡ್ಡ ಗಡಿಯಾರದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದನ್ನು ಸರಿಪಡಿಸಲು ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.‌ಶಂಕರ್ ಈ ಟಿವಿ ಭಾರತ್ ಗೆ ತಿಳಿಸಿದರು.


Body:ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೊಡ್ಡ ಗಡಿಯಾರ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಈ ಬಗ್ಗೆ ನೆನ್ನೆ ತಜ್ಞರ ಸಮಿತಿ ದೊಡ್ಡ ಗಡಿಯಾರವನ್ನು ಪರಿಶೀಲನೆ ನಡೆಸಿದ್ದಾರೆ ಇಲ್ಲಿ ಬಿರುಕು ಬಿಟ್ಟಿರುವುದನ್ನು ಪಾರಂಪರಿಕ ಕಟ್ಟಡಗಳ ಪರಿಪಾಲನ‌ಸಮಿತಿಯ ತಜ್ಞರುಗಳು ಮೊದಲೇ ತಿಳಿಸಿದ್ದರು.
ಈ‌ ಕಟ್ಟಡದಲ್ಲಿ ಇಲಿ ಹೆಗ್ಗಣಗಳು ಹೆಚ್ಚಾಗಿದ್ದು ಇವುಗಳು ಕಟ್ಟಡದಲ್ಲಿ ವಾಸ ಮಾಡಲು ಬಿಲ ತೋಡುತ್ತಿವೆ ಇದರಿಂದ ದೊಡ್ಡ ಗಡಿಯಾರ ಪಾರಂಪರಿಕ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದ ಜಿಲ್ಲಾಧಿಕಾರಿಗಳು ದೊಡ್ಡ ಗಡಿಯಾರ ಮೊದಲು ಹೇಗೆ ಒಂದು ಗಂಟೆಗೆ ಒಂದು ಶಬ್ದ ಮಾಡುತ್ತಿತ್ತೋ ಅದೇ ರೀತಿ ಸರಿ ಪಡಿಸುವಂತೆ ಸಾರ್ವಜನಿಕರು ಕೋರಿದ್ದು ಈ ಹಿನ್ನಲೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ.
ನೆನ್ನೆ ಬಿರುಕು ಬಂದಿರುವ ತಿಳಿದುಬಂದಿದ್ದು ಆ ಸ್ಥಳಕ್ಕೆ ತಜ್ಞರು ಹೋಗಿ ಪರಿಶೀಲನೆ ನಡೆಸಿದ್ದಾರೆ ಅವರ ಸಲಹೆ ಸೂಚನೆಗಳನ್ನು ಪಡೆದು ತಕ್ಷಣವೇ ಬೇಕಾದ ಕಾಮಗಾರಿಯಗಳನ್ನು ಪ್ರಾರಂಭಿಸುತ್ತೇವೆ.
ಅದನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಎಂಬುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಈ ಟಿವಿ ಭಾರತ್ ಜೊತೆ ಮಾತನಾಡುತ್ತ ತಿಳಿಸಿದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.