ETV Bharat / state

ಮೈಸೂರು ದಸರಾ: ಗಜಪಡೆಗೆ ಸಿಸಿಟಿವಿ ಕಣ್ಗಾವಲು

author img

By

Published : Aug 24, 2022, 8:24 PM IST

ದಸರಾ ಗಜಪಡೆಯ ರಕ್ಷಣೆ ಮತ್ತು ಚಲನವಲನಗಳಿಗಾಗಿ ಶೆಡ್, ಶಿಬಿರ, ಆಹಾರ ಘಟಕಗಳಲ್ಲಿ ಸಿಸಿಟಿವಿಗಳನ್ನು ಹಾಕಲಾಗಿದೆ.

KN_MYS_04_24_08_2022_ CC TV CAMERA AT ELEPHANT SHED STORY_7208092
ದಸರಾ ಗಜಪಡೆಗಳಿಗೆ ಸಿಸಿಟಿವಿ ಕಣ್ಗಾವಲು

ಮೈಸೂರು: ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ರಕ್ಷಣೆಗಾಗಿ ಅವುಗಳ ಶೆಡ್​ಗಳ ಮುಂಭಾಗ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಚಲವಲನ ಹಾಗೂ ಅಪರಿಚಿತರು ಆನೆಗಳ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಗಜಪಡೆಗೆ ಸಿಸಿಟಿವಿ ಕಣ್ಗಾವಲು

ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಹಾಗೂ ಅವುಗಳ ಪೋಷಣೆಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಬಳಿ 9 ಆನೆಗಳಿಗಾಗಿ 3 ಶೆಡ್​ಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಜಂಬೂ ಸವಾರಿಯ ಕ್ಯಾಪ್ಟನ್ ಅಭಿಮನ್ಯು ಹಾಗೂ ಕುಮ್ಕಿ ಆನೆ ಚೈತ್ರಗೆ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ಶಿಬಿರದಲ್ಲಿರುವ ಅರ್ಜುನ, ಭೀಮ, ಗೋಪಾಲಸ್ವಾಮಿ, ಮಹೇಂದ್ರ ಆನೆಗಳು ಹಾಗು ಮೂರನೇ ಶೆಡ್​ನಲ್ಲಿರುವ ಧನಂಜಯ, ಕಾವೇರಿ ಮತ್ತು ಲಕ್ಷ್ಮೀ ಆನೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಡಿಸಿಎಫ್ ಕಾರಿಕಾಳನ್ ಹಾಗೂ ಆರ್ ಎಫ್ ಓ ಸಂತೋಷ್ ಊಗಾರ್ ಅವರ ಮೊಬೈಲ್ ನಲ್ಲೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಮೇವು ನೀಡಿ ಎಂದು ಮಾವುತರಿಗೆ ಸನ್ನೆ ಮಾಡಿದ ಅರ್ಜುನ: ವಿಡಿಯೋ

ಮೈಸೂರು: ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ರಕ್ಷಣೆಗಾಗಿ ಅವುಗಳ ಶೆಡ್​ಗಳ ಮುಂಭಾಗ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಚಲವಲನ ಹಾಗೂ ಅಪರಿಚಿತರು ಆನೆಗಳ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಗಜಪಡೆಗೆ ಸಿಸಿಟಿವಿ ಕಣ್ಗಾವಲು

ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಹಾಗೂ ಅವುಗಳ ಪೋಷಣೆಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಬಳಿ 9 ಆನೆಗಳಿಗಾಗಿ 3 ಶೆಡ್​ಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಜಂಬೂ ಸವಾರಿಯ ಕ್ಯಾಪ್ಟನ್ ಅಭಿಮನ್ಯು ಹಾಗೂ ಕುಮ್ಕಿ ಆನೆ ಚೈತ್ರಗೆ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ಶಿಬಿರದಲ್ಲಿರುವ ಅರ್ಜುನ, ಭೀಮ, ಗೋಪಾಲಸ್ವಾಮಿ, ಮಹೇಂದ್ರ ಆನೆಗಳು ಹಾಗು ಮೂರನೇ ಶೆಡ್​ನಲ್ಲಿರುವ ಧನಂಜಯ, ಕಾವೇರಿ ಮತ್ತು ಲಕ್ಷ್ಮೀ ಆನೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಡಿಸಿಎಫ್ ಕಾರಿಕಾಳನ್ ಹಾಗೂ ಆರ್ ಎಫ್ ಓ ಸಂತೋಷ್ ಊಗಾರ್ ಅವರ ಮೊಬೈಲ್ ನಲ್ಲೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಮೇವು ನೀಡಿ ಎಂದು ಮಾವುತರಿಗೆ ಸನ್ನೆ ಮಾಡಿದ ಅರ್ಜುನ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.