ETV Bharat / state

ಪ್ರೀತಿಗೆ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ರೇಜರ್​​ನಿಂದ ಹಲ್ಲೆ.... ಪಾಗಲ್​ ಪ್ರೇಮಿ ಅರೆಸ್ಟ್​​​ - ಮೈಸೂರಿನಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಹಲ್ಲೆ

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಯುವಕ ಹಲ್ಲೆ ಮಾಡಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

love
ಪ್ರೀತಿಗೆ ನಿರಾಕರಿಸಿದ್ದಕ್ಕೆ ಹಲ್ಲೆ
author img

By

Published : Dec 6, 2019, 2:41 PM IST

ಮೈಸೂರು:ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿ ಪರಾರಿಯಾಗುತ್ತಿದ್ದ ಯುವಕನನ್ನು ವಿ.ವಿ ಪುರಂ ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಿರಿಯಾಪಟ್ಟಣದ ಮಂಚೇಗೌಡ ಕೊಪ್ಪಲಿನ ನಿವಾಸಿಯಾದ ಅಮೃತ್ (21) ಎಂಬಾತನು ಪ್ರೀತಿ ಮಾಡು ಎಂದು ಹೆಬ್ಬಾಳ್ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದ. ಈ ಪಾಗಲ್ ಪ್ರೇಮಿಯ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಮೃತ್ ತನ್ನ ಸ್ನೇಹಿತರನ್ನು ಕರೆದುಕೊಂದು ಹೋಗಿ ಯುವತಿ ನಡೆದುಕೊಂಡು ಹೋಗುವ ವೇಳೆ , ಆಕೆಯ ಮೇಲೆ ತನ್ನ ಸ್ನೇಹಿತರಿಂದ ರೇಜರ್​​​ನಿಂದ ಹಲ್ಲೆ ಮಾಡಿಸಿದ್ದಾನೆ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.

love
ಪ್ರೀತಿಗೆ ನಿರಾಕರಿಸಿದ್ದಕ್ಕೆ ಹಲ್ಲೆ

ಇನ್ನು ದೂರಿನ ಮೇರೆಗೆ ವಿಚಾರಣೆ ಮಾಡಿದ ಪೋಲಿಸರು ಅಮೃತ್​​ನನ್ನು ಬಂಧಿಸಿ, ಹಲ್ಲೆ ಮಾಡಿದ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ, ಇನ್ನೂ ಈ ಸಂಬಂಧ ವಿ.ವಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರು:ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿ ಪರಾರಿಯಾಗುತ್ತಿದ್ದ ಯುವಕನನ್ನು ವಿ.ವಿ ಪುರಂ ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಿರಿಯಾಪಟ್ಟಣದ ಮಂಚೇಗೌಡ ಕೊಪ್ಪಲಿನ ನಿವಾಸಿಯಾದ ಅಮೃತ್ (21) ಎಂಬಾತನು ಪ್ರೀತಿ ಮಾಡು ಎಂದು ಹೆಬ್ಬಾಳ್ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದ. ಈ ಪಾಗಲ್ ಪ್ರೇಮಿಯ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಮೃತ್ ತನ್ನ ಸ್ನೇಹಿತರನ್ನು ಕರೆದುಕೊಂದು ಹೋಗಿ ಯುವತಿ ನಡೆದುಕೊಂಡು ಹೋಗುವ ವೇಳೆ , ಆಕೆಯ ಮೇಲೆ ತನ್ನ ಸ್ನೇಹಿತರಿಂದ ರೇಜರ್​​​ನಿಂದ ಹಲ್ಲೆ ಮಾಡಿಸಿದ್ದಾನೆ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.

love
ಪ್ರೀತಿಗೆ ನಿರಾಕರಿಸಿದ್ದಕ್ಕೆ ಹಲ್ಲೆ

ಇನ್ನು ದೂರಿನ ಮೇರೆಗೆ ವಿಚಾರಣೆ ಮಾಡಿದ ಪೋಲಿಸರು ಅಮೃತ್​​ನನ್ನು ಬಂಧಿಸಿ, ಹಲ್ಲೆ ಮಾಡಿದ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ, ಇನ್ನೂ ಈ ಸಂಬಂಧ ವಿ.ವಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಮೈಸೂರು: ಪ್ರೀತಿಸಲು ನಿರಾಕರಣೆ ತೋರಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಯುವಕನನ್ನು ವಿ.ವಿ ಪುರಂ ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Body:






ಪಿರಿಯಾಪಟ್ಟಣದ ಮಂಚೇಗೌಡ ಕೊಪ್ಪಲಿನ ನಿವಾಸಿಯಾದ ಅಮೃತ್ (೨೧) ಎಂಬಾತನು ನನ್ನನ್ನು ಪ್ರೀತಿ ಮಾಡು ಎಂದು ಪದೇ ಪದೇ ಹೆಬ್ಬಾಳ್ ನಿವಾಸಿಯಾದ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದನು. ಈ ಪಾಗಲ್ ಪ್ರೇಮಿಯ ಪ್ರೀತಿಯನ್ನು ಆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಮೃತ್ ತನ್ನ ಸ್ನೇಹಿತರನ್ನು ಕಳುಹಿಸಿ, ಆಕೆ ಕೆಲಸಕ್ಕೆ ಹೊರಡುತ್ತಿರುವ ಸಮಯದಲ್ಲಿ ಚಂದ್ರೋದಯ ಆಸ್ಪತ್ರೆ ಬಳಿ ಆ ಯುವತಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ , ಆಕೆಯ ಮೇಲೆ ರೇಜ಼ರ್ ನಿಂದ ಹಲ್ಲೆ ಮಾಡಿ ಅಮೃತ್ ಸ್ನೇಹಿತರು ಪರಾರಿಯಾಗಿದ್ದಾರೆ. ದೂರಿನ ಮೇರೆಗೆ ವಿಚಾರಣೆ ಮಾಡಿದ ಪೋಲಿಸರು ಅಮೃತ್ ನನ್ನು ಬಂಧಿಸಿ, ಹಲ್ಲೆ ಮಾಡಿದ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ, ಇನ್ನೂ ಈ ಸಂಬಂಧ ವಿ.ವಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.