ETV Bharat / state

ಬಿಜೆಪಿ ಕಳಂಕ ರಹಿತ ಆಡಳಿತ ನೀಡಲಿ: ಪೇಜಾವರ ಶ್ರೀ

author img

By

Published : Jul 30, 2019, 1:27 PM IST

ವೀರಶೈವ-ಲಿಂಗಾಯತ ಇಬ್ಬರೂ ಹಿಂದೂಗಳೇ. ‌ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಇದನ್ನು ವಿರೋಧಿಸುವ ಸಾಣೇಹಳ್ಳಿ ಸ್ವಾಮಿಗಳು, ಜಾಮದಾರ್ ಹಾಗೂ ಎಂ.ಬಿ.ಪಾಟೀಲ್​ ಅವರು ನಮ್ಮೊಂದಿಗೆ ಸಂವಾದಕ್ಕೆ ಬರಲಿ. ನಾನು ಸಿದ್ಧನಿದ್ದೇನೆ ಎಂದು ಪೇಜಾವರ ಶ್ರೀಗಳು ಆಹ್ವಾನ ನೀಡಿದ್ದಾರೆ.

ಪೇಜಾವರ ಶ್ರೀ

ಮೈಸೂರು: ನೂತನ ಸರ್ಕಾರ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ ಎಂದು ಪೇಜಾವರದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಇಂದು ಮೈಸೂರಿನಲ್ಲಿ ಎರಡು ತಿಂಗಳ ಕಾಲ ಚಾತುರ್ಮಾಸ ವ್ರತ ಕೈಗೊಳ್ಳಲು ಆಗಮಿಸಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು, ಕೃಷ್ಣ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ವೀರಶೈವ ಲಿಂಗಾಯತ ಎರಡು ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸೋದರ ಭಾವನೆಯಿಂದ ಹೇಳಿದ್ದೇನೆ ವಿನಾ ಬೇರೆ ಉದ್ದೇಶವಿಲ್ಲ ಎಂದರು.

ಪೇಜಾವರ ಶ್ರೀ

ವೀರಶೈವ-ಲಿಂಗಾಯತ ಇಬ್ಬರೂ ಹಿಂದೂಗಳೇ. ‌ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಇದನ್ನು ವಿರೋಧಿಸುವ ಸಾಣೇಹಳ್ಳಿ ಸ್ವಾಮಿಗಳು, ಜಾಮದಾರ್ ಹಾಗೂ ಎಂ.ಬಿ.ಪಾಟೀಲ್​ ಅವರು ನಮ್ಮೊಂದಿಗೆ ಸಂವಾದಕ್ಕೆ ಬರಲಿ. ನಾನು ಸಿದ್ಧನಿದ್ದೇನೆ ಎಂದು ಆಹ್ವಾನ ನೀಡಿದರು.

ಭಾರತದಲ್ಲಿರುವ ಬುದ್ಧ, ಜೈನ, ಸಿಖ್ ಧರ್ಮಗಳು ಸಹ ಹಿಂದೂ ಧರ್ಮಗಳೇ. ಇಂದಿನ ಜಾತಿ ಹಾಗೂ ಧರ್ಮ ಬೇಧಕ್ಕೆ ರಾಜಕಾರಣಿಗಳೇ ಕಾರಣ. ನಾನು ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಲು ಪ್ರಯತ್ನ ಮುಂದುವರೆಸುತ್ತೇನೆ ಎಂದರು.

ಮೈಸೂರು: ನೂತನ ಸರ್ಕಾರ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ ಎಂದು ಪೇಜಾವರದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಇಂದು ಮೈಸೂರಿನಲ್ಲಿ ಎರಡು ತಿಂಗಳ ಕಾಲ ಚಾತುರ್ಮಾಸ ವ್ರತ ಕೈಗೊಳ್ಳಲು ಆಗಮಿಸಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು, ಕೃಷ್ಣ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ವೀರಶೈವ ಲಿಂಗಾಯತ ಎರಡು ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸೋದರ ಭಾವನೆಯಿಂದ ಹೇಳಿದ್ದೇನೆ ವಿನಾ ಬೇರೆ ಉದ್ದೇಶವಿಲ್ಲ ಎಂದರು.

ಪೇಜಾವರ ಶ್ರೀ

ವೀರಶೈವ-ಲಿಂಗಾಯತ ಇಬ್ಬರೂ ಹಿಂದೂಗಳೇ. ‌ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಇದನ್ನು ವಿರೋಧಿಸುವ ಸಾಣೇಹಳ್ಳಿ ಸ್ವಾಮಿಗಳು, ಜಾಮದಾರ್ ಹಾಗೂ ಎಂ.ಬಿ.ಪಾಟೀಲ್​ ಅವರು ನಮ್ಮೊಂದಿಗೆ ಸಂವಾದಕ್ಕೆ ಬರಲಿ. ನಾನು ಸಿದ್ಧನಿದ್ದೇನೆ ಎಂದು ಆಹ್ವಾನ ನೀಡಿದರು.

ಭಾರತದಲ್ಲಿರುವ ಬುದ್ಧ, ಜೈನ, ಸಿಖ್ ಧರ್ಮಗಳು ಸಹ ಹಿಂದೂ ಧರ್ಮಗಳೇ. ಇಂದಿನ ಜಾತಿ ಹಾಗೂ ಧರ್ಮ ಬೇಧಕ್ಕೆ ರಾಜಕಾರಣಿಗಳೇ ಕಾರಣ. ನಾನು ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಲು ಪ್ರಯತ್ನ ಮುಂದುವರೆಸುತ್ತೇನೆ ಎಂದರು.

Intro:ಮೈಸೂರು: ನೂತನ ಸರ್ಕಾರ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಸರ್ಕಾರ ನೀಡಲಿ ಎಂದು ಪೇಜಾವರದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.


Body:ಇಂದು ಮೈಸೂರಿನಲ್ಲಿ ಎರಡು ತಿಂಗಳ ಕಾಲ ಚಾತುರ್ಮಾಸ್ಯ ವ್ರತ ಕೈಗೊಳ್ಳಲು ಆಗಮಿಸಿರುವ ಪೇಜಾವರ ಅಧೋಕ್ಚಜ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಇಂದು ಮೈಸೂರಿನ ಕೃಷ್ಣ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ವೀರಶೈವ ಲಿಂಗಾಯತ ಎರಡು ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸೋದರ ಭಾವನೆಯಿಂದ ಹೇಳಿದ್ದೇನೆ ವಿನಹ ಬೇರೆ ಉದ್ದೇಶವಿಲ್ಲ. ಜೊತೆಗೆ ವೀರಶೈವ ಲಿಂಗಾಯತ ಎರಡು ಒಂದೇ ಅಲ್ಲದೇ ಇಬ್ಬರು ಹಿಂದೂಗಳೇ ಎಂಬ ಮಾತಿಗೆ ಈಗಲೂ ಬದ್ಧ.‌ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಇದನ್ನು ವಿರೋಧಿಸುವ ಸಾಣೇನಹಳ್ಳಿ ಸ್ವಾಮಿಗಳು, ಜಾಮದಾರ್ ಹಾಗೂ ಎಂ.ಬಿ.ಪಾಟೀಲ್ ಮುಕ್ತ ಸಂವಾದಕ್ಕೆ ಮೈಸೂರಿಗೆ ಬರಲಿ ನಾನು ಸಿದ್ಧನಿದ್ದೇನೆ ಎಂದು ಮುಕ್ತ ಆಹ್ವಾನ ನೀಡಿದ ಶ್ರೀಗಳು ಇದಲ್ಲದೆ ಭಾರತದಲ್ಲಿರುವ ಬುದ್ದ, ಜೈನ, ಸಿಖ್ ಧರ್ಮಗಳು ಸಹ ಹಿಂದು ಧರ್ಮಗಳೇ.
ಇದನ್ನು ಬೇರೆ ಎಂದು ನಮ್ಮನ್ನು ಆಳಿದ ಬ್ರಿಟಿಷರು ಹೋಡೆದು ಆಳಿದರು. ಆದರೆ ಭಾರತದಲ್ಲಿ ಇರುವ ಈ ಎಲ್ಲಾ ಧರ್ಮಗಳ ಜನರು ಹಿಂದೂಗಳೇ ಎಂದು ಹೇಳಿದರ ಶ್ರೀಗಳು ಇಂದಿನ ಜಾತಿ ಹಾಗೂ ಧರ್ಮ ಬೇಧಕ್ಕೆ ರಾಜಕಾರಣಿಗಳೇ ಕಾರಣ ಎಂದರು.
ನಾನು ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಲು ಪ್ರಯತ್ನ ಮುಂದುವರೆಸುತ್ತೇನೆ ಎಂದರು.
ಇತ್ತಿಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಗೋ ಹತ್ಯೆ ನಿಷೇಧ, ಗಂಗಾ ನದಿ ಸ್ವಚ್ಚತಾ ಕಾರ್ಯ ಹಾಗೂ ರಾಮ ಮಂದಿರ ನಿರ್ಮಾಣ ಮಾಡುವಂತೆ ಮನವಿ ಮಾಡಿದೆ ಎಂದ ಶ್ರೀಗಳು ಈ ಬಗ್ಗೆ ಮತ್ತೊಮ್ಮೆ ಪ್ರಧಾನಿಯನ್ನು‌ ಭೇಟಿ ಮಾಡಿ‌ ಮನವಿ ಸಲ್ಲಿಸಲು ಚಾತುರ್ಮಾಸ್ಯ ಮುಗಿದ ತಕ್ಷಣ ಸಾದು ಸಂತರ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಲಿದ್ದೇವೆ ಎಂದ ಪೇಜಾವರ ಶ್ರೀಗಳು ರಾಜ್ಯದಲ್ಲಿ ನೂತನವಾಗಿ ಬಂದಿರುವ ಸರ್ಕಾರ ಕಳಂಕ ರಹಿತ, ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ ಎಂದು ಸಲಹೆ ನೀಡುತ್ತೇನೆ ಎಂದು ಪೇಜಾವರ ಶ್ರೀಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಜೊತೆಗೆ ಮಂಗಳೂರಿನ ಬಳಿ ಉದ್ಯಮಿ ಸಿದ್ದಾರ್ಥ್ ನಾಪತ್ತೆ ಬಗ್ಗೆ ವಿಷಾದವ್ಯಕ್ತ ಪಡಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.