ETV Bharat / state

ಕುರಿ ಕಳ್ಳರಿಗೆ ಸಾರ್ವಜನಿಕರಿಂದ ಥಳಿತ: ಸ್ಥಳದಲ್ಲೇ ಓರ್ವ ಸಾವು - ಕುರಿ ಕದ್ದು ಆಟೋದಲ್ಲಿ ಹೋಗುತ್ತಿದ್ದ ಕುರಿ ಕಳ್ಳರು

ಕುರಿ ಕದ್ದು ಆಟೋದಲ್ಲಿ ಹೋಗುತ್ತಿದ್ದ ಕುರಿ ಕಳ್ಳರನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಎನ್​​. ಆರ್​. ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ...

Attack on Sheep thievers
ಕುರಿ ಕಳ್ಳರಿಗೆ ಸಾರ್ವಜನಿಕರಿಂದ ಥಳಿತ
author img

By

Published : Jan 20, 2020, 1:42 PM IST

ಮೈಸೂರು: ಬೆಳಗಿನ ಜಾವ ಕುರಿ ಕದ್ದು ಆಟೋದಲ್ಲಿ ಹೋಗುತ್ತಿದ್ದ ಕುರಿ ಕಳ್ಳರನ್ನು, ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಈ ವೇಳೆ ಓರ್ವ ಕುರಿ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುರಿ ಕಳ್ಳರಿಗೆ ಸಾರ್ವಜನಿಕರಿಂದ ಥಳಿತ

ನಗರದ ರಿಂಗ್ ರಸ್ತೆಯ ಹೊರವಲಯದ ಮಂಟಿ ಬಡಾವಣೆಯಲ್ಲಿ ಬೆಳಗಿನ ಜಾವ 4 ಜನ ಆಟೋದಲ್ಲಿ ಬಂದು, ಕುರಿಯನ್ನು ಕದ್ದು ಆಟೋದಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿದ ಸಾರ್ವಜನಿಕರು ಆಟೋವನ್ನು ಹಿಡಿದು 3 ಜನ ಕುರಿಕಳ್ಳರಿಗೆ ಥಳಿಸಿದ್ದಾರೆ. ಒಬ್ಬ ಕುರಿಕಳ್ಳ ಪರಾರಿಯಾಗಿದ್ದು, ಸಾರ್ವಜನಿಕರ ಥಳಿತಕ್ಕೆ ಜಹೀರ್ ಎಂಬ ವ್ಯಕ್ತಿ ಸ್ಥಳದ್ದಲ್ಲೇ ಸಾವನ್ನಪ್ಪಿದ್ದಾನೆ.

ಮತ್ತಿಬ್ಬರು ಕುರಿಕಳ್ಳರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೇರಳದ ನೋಂದಣಿ ಇದ್ದ ಆಟೋ ಹಾಗೂ ಅದರೊಳಗೆ ಇದ್ದ ಕುರಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎನ್.ಆರ್. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು: ಬೆಳಗಿನ ಜಾವ ಕುರಿ ಕದ್ದು ಆಟೋದಲ್ಲಿ ಹೋಗುತ್ತಿದ್ದ ಕುರಿ ಕಳ್ಳರನ್ನು, ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಈ ವೇಳೆ ಓರ್ವ ಕುರಿ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುರಿ ಕಳ್ಳರಿಗೆ ಸಾರ್ವಜನಿಕರಿಂದ ಥಳಿತ

ನಗರದ ರಿಂಗ್ ರಸ್ತೆಯ ಹೊರವಲಯದ ಮಂಟಿ ಬಡಾವಣೆಯಲ್ಲಿ ಬೆಳಗಿನ ಜಾವ 4 ಜನ ಆಟೋದಲ್ಲಿ ಬಂದು, ಕುರಿಯನ್ನು ಕದ್ದು ಆಟೋದಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿದ ಸಾರ್ವಜನಿಕರು ಆಟೋವನ್ನು ಹಿಡಿದು 3 ಜನ ಕುರಿಕಳ್ಳರಿಗೆ ಥಳಿಸಿದ್ದಾರೆ. ಒಬ್ಬ ಕುರಿಕಳ್ಳ ಪರಾರಿಯಾಗಿದ್ದು, ಸಾರ್ವಜನಿಕರ ಥಳಿತಕ್ಕೆ ಜಹೀರ್ ಎಂಬ ವ್ಯಕ್ತಿ ಸ್ಥಳದ್ದಲ್ಲೇ ಸಾವನ್ನಪ್ಪಿದ್ದಾನೆ.

ಮತ್ತಿಬ್ಬರು ಕುರಿಕಳ್ಳರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೇರಳದ ನೋಂದಣಿ ಇದ್ದ ಆಟೋ ಹಾಗೂ ಅದರೊಳಗೆ ಇದ್ದ ಕುರಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎನ್.ಆರ್. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Intro:ಮೈಸೂರು: ಬೆಳಗಿನ ಜಾವ ಕುರಿ ಕದ್ದು ಆಟೋದಲ್ಲಿ ಹೋಗುತ್ತಿದ್ದ ಕುರಿಕಳ್ಳರನ್ನು , ಸಾರ್ವಜನಿಕರು ಹಿಡಿದು ಥಳಿಸಿದಾಗ ಕುರಿಕಳ್ಳನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಎನ್.ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Body:



ನಗರದ ರಿಂಗ್ ರಸ್ತೆಯ ಹೊರವಲಯದ ಮಂಟಿ ಬಡಾವಣೆಯಲ್ಲಿ ಬೆಳಗಿನ ಜಾವ ೪ ಜನ ಆಟೋದಲ್ಲಿ ಬಂದು ಕುರಿ ಕದ್ದು, ಆಟೋದಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿದ ಸಾರ್ವಜನಿಕರು ಆಟೋವನ್ನು ಹಿಡಿದು ೩ ಜನ ಕುರಿಕಳ್ಳರಿಗೆ ಥಳಿಸಿದ್ದು ಒಬ್ಬ ಕುರಿಕಳ್ಳ ಪರಾರಿಯಾಗಿದ್ದು , ಸಾರ್ವಜನಿಕರು ಥಳಿತಕ್ಕೆ ಜಹೀರ್ ಎಂಬ ಕುರಿಕಳ್ಳ ಸ್ಥಳದ್ದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬರು ಕುರಿಕಳ್ಳರಿಗೆ ತೀವ್ರ ಗಾಯಾವಾಗಿದ್ದು, ಅವರನ್ನು ಪೋಲಿಸರು ತಕ್ಷಣ ಆಗಮಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೇರಳ ನೊಂದಣಿ ಇದ್ದ ಆಟೋ ಹಾಗೂ ಅದರೊಳಗೆ ಇದ್ದ ಕುರಿಯನ್ನು ಪೋಲಿಸರು ತನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎನ್.ಆರ್ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.