ಮೈಸೂರು: ಜಂಬೂಸವಾರಿಯಲ್ಲಿ ಅಭಿಮನ್ಯು ಹೊತ್ತು ಸಾಗುವ ಚಿನ್ನದ ಅಂಬಾರಿಗೆ 50 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಲಾಗಿದೆ. 750 ಕೆಜಿ ಸ್ವರ್ಣ ಲೇಪಿತ ಅಂಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ರಾಜ ಮನೆತನದ ಖಜಾನೆಯಲ್ಲಿರುವ ಚಿನ್ನದ ಅಂಬಾರಿಯನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗಿದೆ.
ಹಸ್ತಾಂತರಕ್ಕೂ ಮುನ್ನ ಪ್ರಮೋದಾದೇವಿ ಒಡೆಯರ್ ಹೆಸರಿಗೆ ಜಿಲ್ಲಾಡಳಿತ ವಿಮೆ ಮಾಡಿಸಿದೆ. ಕೇವಲ 24 ಗಂಟೆಗಳ ಅವಧಿಗೆ 50 ಸಾವಿರ ರೂ. ಮೊತ್ತವನ್ನ ಜಿಲ್ಲಾಡಳಿತ ಪಾವತಿ ಮಾಡಿದೆ.
ಅಂಬಾರಿಗೆ 50 ಲಕ್ಷ ರೂ. ಮೌಲ್ಯಕ್ಕೆ ವಿಮೆ ಮಾಡಿಸಲಾಗಿದ್ದು, ಶ್ರೀಕಂಠದತ್ತ ಒಡೆಯರ್ ಕಾಲಾನಂತರ ಪ್ರಮೋದಾದೇವಿ ಒಡೆಯರ್ ಹೆಸರಿಗೆ ಜಿಲ್ಲಾಡಳಿತ ವಿಮೆ ಮಾಡಿಸುತ್ತಿದೆ. ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ವಾಪಸ್ ರಾಜ ಮನೆತನದ ಅರಮನೆಯ ನೆಲಮಾಳಿಗೆಯಲ್ಲಿರುವ ಖಾಸಗಿ ಖಜಾನೆಗೆ ಅಂಬಾರಿ ವಾಪಸ್ ಆಗಲಿದೆ.