ETV Bharat / state

ಭಾಷಣ ಮಾಡಲು ಬಿಡದೆ ನಿಖಿಲ್​ಗೆ ಗ್ರಾಮಸ್ಥರಿಂದ ತರಾಟೆ: ವಿಡಿಯೋ ವೈರಲ್​​

ತಂದೆಯ ಹೊಗಳಿಕೆಗೆ ಮುಂದಾಗಿ ಭಾಷಣ ಆರಂಭಿಸಿದ ನಿಖಿಲ್​ ಕುಮಾರಸ್ವಾಮಿಗೆ ಭಾಷಣ ಮಾಡಲು ಬಿಡದೆ ಗ್ರಾಮಸ್ಥರು ಕಳುಹಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

author img

By

Published : Mar 22, 2019, 9:56 AM IST

ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಪ್ರಚಾರದ ವೇಳೆನಿಖಿಲ್ ಕುಮಾರಸ್ವಾಮಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ವಿಧಾನಸಭಾ ಕ್ಷೇತ್ರದ ಹಳ್ಳಿಯೊಂದರಲ್ಲಿ ನಡೆದಿದೆ.

ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಕೆಲ ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾಷಣ ಮಾಡಲು ಬಿಡದೆ ಗ್ರಾಮಸ್ಥರು ನಿಖಿಲ್​ರನ್ನು ವಾಪಸ್​​ ಕಳುಹಿಸಿದ್ದಾರೆ ಎನ್ನಲಾಗಿದೆ.

ತಂದೆಯ ಹೊಗಳಿಕೆಗೆ ಮುಂದಾದ ನಿಖಿಲ್, ಕುಮಾರಣ್ಣ ಎಂಟೂವರೆ ಸಾವಿರ ಕೋಟಿ ರೂಪಾಯಿಗಳ ಅನುದಾನ ಕೊಟ್ಟಿದ್ದಾರೆ ಎಂದು ಭಾಷಣ ಆರಂಭಿಸಿದರು. ಆಗ ಭಾಷಣಕ್ಕೆ ಅವಕಾಶ ನೀಡದ ಗ್ರಾಮಸ್ಥರು, ಹೋಗಿ ಹೋಗಿ ಎಂದು ಹೇಳಿದ್ದಾರೆ. ಗ್ರಾಮಸ್ಥರ ಆಕ್ರೋಶದಿಂದ ಮುಜುಗರಕ್ಕೊಳಗಾದ ನಿಖಿಲ್, ಭಾಷಣ ನಿಲ್ಲಿಸಿ ಪ್ರಚಾರ ವಾಹನದಲ್ಲೇ ಮುಂದೆ ಸಾಗಿದ್ದಾರೆ.

ನಿಖಿಲ್​ ಕುಮಾರಸ್ವಾಮಿ

ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಸಾಲ ಮನ್ನಾ ವಿಚಾರವಾಗಿ ಹಾಗೂ ಕಬ್ಬಿನ ಬಾಕಿ ಪಾವತಿ ವಿಚಾರವಾಗಿ ಪ್ರಶ್ನೆ ಮಾಡಿ ಭಾಷಣಕ್ಕೆ ತಡೆ ಒಡ್ಡಿದ್ದಾರೆ ಎನ್ನಲಾಗಿದೆ.

ಮಂಡ್ಯ: ಪ್ರಚಾರದ ವೇಳೆನಿಖಿಲ್ ಕುಮಾರಸ್ವಾಮಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ವಿಧಾನಸಭಾ ಕ್ಷೇತ್ರದ ಹಳ್ಳಿಯೊಂದರಲ್ಲಿ ನಡೆದಿದೆ.

ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಕೆಲ ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾಷಣ ಮಾಡಲು ಬಿಡದೆ ಗ್ರಾಮಸ್ಥರು ನಿಖಿಲ್​ರನ್ನು ವಾಪಸ್​​ ಕಳುಹಿಸಿದ್ದಾರೆ ಎನ್ನಲಾಗಿದೆ.

ತಂದೆಯ ಹೊಗಳಿಕೆಗೆ ಮುಂದಾದ ನಿಖಿಲ್, ಕುಮಾರಣ್ಣ ಎಂಟೂವರೆ ಸಾವಿರ ಕೋಟಿ ರೂಪಾಯಿಗಳ ಅನುದಾನ ಕೊಟ್ಟಿದ್ದಾರೆ ಎಂದು ಭಾಷಣ ಆರಂಭಿಸಿದರು. ಆಗ ಭಾಷಣಕ್ಕೆ ಅವಕಾಶ ನೀಡದ ಗ್ರಾಮಸ್ಥರು, ಹೋಗಿ ಹೋಗಿ ಎಂದು ಹೇಳಿದ್ದಾರೆ. ಗ್ರಾಮಸ್ಥರ ಆಕ್ರೋಶದಿಂದ ಮುಜುಗರಕ್ಕೊಳಗಾದ ನಿಖಿಲ್, ಭಾಷಣ ನಿಲ್ಲಿಸಿ ಪ್ರಚಾರ ವಾಹನದಲ್ಲೇ ಮುಂದೆ ಸಾಗಿದ್ದಾರೆ.

ನಿಖಿಲ್​ ಕುಮಾರಸ್ವಾಮಿ

ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಸಾಲ ಮನ್ನಾ ವಿಚಾರವಾಗಿ ಹಾಗೂ ಕಬ್ಬಿನ ಬಾಕಿ ಪಾವತಿ ವಿಚಾರವಾಗಿ ಪ್ರಶ್ನೆ ಮಾಡಿ ಭಾಷಣಕ್ಕೆ ತಡೆ ಒಡ್ಡಿದ್ದಾರೆ ಎನ್ನಲಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.