ಮಂಡ್ಯ: ಶಾಲಾ ವಾಹನ ಹರಿದು ವಿದ್ಯಾರ್ಥಿ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಬಳಿ ನಡೆದಿದೆ.
ಸಿದ್ದೇಗೌಡನ ದೊಡ್ಡಿ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ಸಿರಿ(4) ಮೃತ ಬಾಲಕನಾಗಿದ್ದು, ಸಾತನೂರು ಗ್ರಾಮದ SLN ಶಾಲೆಗೆ ಸೇರಿದ ಬಸ್ ಹರಿದು ಈ ಘಟನೆ ನಡೆದಿದೆ. ಶಾಲಾ ವಾಹನದಿಂದ ಬಾಲಕ ಇಳಿಯುವ ವೇಳೆ ಈ ಅವಘಡ ಸಂಭವಿಸಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.